Home / ಕವನ / ಕವಿತೆ / ಹಿಂಗ್ಯಾಕ ಮಾಡ್ತಾನ ಮಠದಯ್ಯಾ

ಹಿಂಗ್ಯಾಕ ಮಾಡ್ತಾನ ಮಠದಯ್ಯಾ

ಹಿಂಗ್ಯಾಕ ಮಾಡ್ತಾನ ಮಠದಯ್ಯಾ
ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ||

ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ
ಕಾಮೀನಿ ಭಾಮೀನಿ ಅಂತಾನ
ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ
ಹಿಂದ್ಯಾಕ ನನಸೀರಿ ಎಳಿತಾನ ||೧||

ಗಂಡುಳ್ಳ ಗರತೇರ ಹಿಂದ್ಹಿಂದ ಹೋಗ್ತಾನ
ವನಕೀಯ ಏಟ್ತಿಂದು ಓಡ್ತಾನ
ಕೆರಿಯಾಗ ಈಜ್ತಾನ ಕೆರಿಯೆಮ್ಮಿ ಹಿಡಿತಾನ
ಕಾಡೆಮ್ಮಿ ಕೋಡ್ಹಾದು ಕೂಗ್ತಾನ ||೨||

ಕಂಬ್ಕಂಬ ವದಿತಾನ ಗ್ವಾಡ್ವಾಡಿ ಹಾಯ್ತಾನ
ಬೋಳೇರ ತಲಿಗುಂಡಾ ಚೂಟ್ತಾನ
ಮುದಿಕ್ಯಾರ ಮುಂದ್ಹೋಗಿ ಮುರಕಾನ ಮಾಡ್ತಾನ
ಮಸಡೀಗಿ ಕಡಬುಂಡು ಬಾಡ್ತಾನ ||೩||

ಲಗ್ನಕ್ಕೆ ಹೋಕ್ಕಾನ ಕನ್ಯಾನ ಕರಿತಾನ
ನಿನಗಂಡ ನಾನೆಂದು ಅಂತಾನ
ಎರಕೊಂಡು ಬಂದೋರ ಕರಕೊಂಡು ಕಾಡ್ತಾನ
ಮಠದಾಗ ತೊಟ್ಟಾನ ತೂಗ್ತಾನ |೪||
*****
ಮಠದಯ್ಯ = ಭಗವಂತ
ಕುಂಡಿಯ ಕಟದಯ್ಯ = ಅಧಃ ಪ್ರಜ್ಞೆಯಲ್ಲಿ (Lower Consciousness) ಬೆಳಕು ಬೀರುವವ
ಗರತೇರು ಬೋಳೇರು ಮುದಿಕೇರು ಮುಂ. = ನಾನಾ ಸಂಸ್ಕಾರಗಳ ಜಡ ಆತ್ಮರು
ಮಠದಾಗ = ಮುಕ್ತಿಧಾಮ, ಶಾಂತಿಧಾಮ
ತೊಟ್ಲಾ ತೂಗು = ಆತ್ಮರೆಂಬ ಶಿಶುಗಳನ್ನು ಮುಕ್ತಿಧಾಮದಲ್ಲಿ ನೆಲೆಗೊಳಿಸು

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...