ಒಂದೆರಡು ಮಾಸಿದ ಬಳೆಗಳು

ಹತ್ತಾರು ರೂಪಾಯಿಗೆ ಸಿಗುವ ಇವು
ಸೀದಾ ಸಾದಾ ಬಳೆಗಳು
ಬರಿಯ ಬಳೆ ತೊಟ್ಟ ಕೈಗಳಲ್ಲಿ
ದೇವ ದೇವಿಯರ ಕೂಡ ಯಕ್ಷ, ವಾನರರೂ
ಹೇಗೆಲ್ಲಾ ಗಟ್ಟಿಗೊಳುತ್ತಾರೆ.

ನೀರೆತ್ತುವ ಅದೇ ಕೈಗಳು
ನೀರುಕ್ಕಿಸಿದವು, ನೀರು ಬಸಿದವು ಕೂಡ
ಬಾನಿಗೆ ಹೋಯ್ದ ನೀರಲ್ಲಿ ಪಕ್ಕನೆ
ಆ ಕೈ ದರ್ಶನವಾಗುತ್ತದೆ.

ಕೈಯೂಡಿದ ನೀರಲ್ಲದ್ದಿದ ಅಕ್ಕಿ
ಅನ್ನವಾಗಿ ಹದವಾಗಿ
ಪರಾತಕ್ಕೆ ಹರಡಿಕೊಂಡಷ್ಟು
ಹಸಿದ ಜೀವ ಸಂತೃಪ್ತ
ರೋಮಾಂಚನಗೊಳ್ಳುತ್ತದೆ ಕೈ.

ಸಂತೆ ಬದುಕಿನ ವ್ಯವಹಾರಗಳಲ್ಲೆಲ್ಲಾ
ಎಷ್ಟೊಂದು ಬಿಂಕದ ಹೊದಿಕೆ
ಬಳೆ ಹೊತ್ತ ಕೈಗಳು ತೂಗಿ ಕೊಡುವ
ತರಕಾರಿಗಳು ವಿಕ್ರಯಗೊಂಡಷ್ಟು
ದುಡ್ಡೆಣಿಸುವ ಕೈಗಳು ತೋಳೆರಿಸಿಕೊಳ್ಳುತ್ತವೆ.

ತೊಟ್ಟಿಲನ್ನು ತೂಗುವ ಆ ಕೈಗಳು
ಮುದಗೊಳ್ಳುತ್ತ ಮಲ್ಲಿಗೆ ಪೋಣಿಸುವುದು
ಮಾಲೆ ಮಾಲೆ ಹೂಗಳ ಕಟ್ಟುತ್ತ
ಕೈಯೇ ಹೂವಾಗುವುದು.

ಬಿಂಕ ಬಿನ್ನಾಣ ಮರೆತ
ಒನಪು ವೈಯಾರಗಳ
ಹಂಗು ಬದಿಗಿಟ್ಟ ಬಿರಿದ
ಭೂಮಿ ತೂಕದ ಹೆಣ್ಣು
ಜಡ್ಡುಗಟ್ಟಿದ ಕೈಗಳು ಮತ್ತು
ಒಂದೆರಡು ಮಾಸಿದ ಬಳೆಗಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮
Next post ಮುಸ್ಸಂಜೆಯ ಮಿಂಚು – ೬

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…