ಪುಣ್ಯ ಮೂರ್ತಿ

ಬಾಳ ಹೊಳೆ ಬತ್ತಿ
ದಡಗಳೆರಡು ಒಣಗಿ
ಪಾತ್ರವು ವಿಕಾರವಾಗಿ ತೆರೆದುಕೊಂಡು
ನರಳುವ ನಡುವೆ
ಜೀವ ಸೆಲೆಯಾಗಿ ಬಂದ ದೌಹಿತ್ರ
ಚೆಂದಂಪು ತುಂಬಿತು.

ಕುಸಿಯುತ್ತಿದ್ದ ಮನೆ, ಮನಸಿನಲಿ
ಪ್ರಾಣ ವಾಯು ಪಲ್ಲವಿಸಿ
ಕೈ ಜಾರಿ ಹೋಗುತ್ತಿದ್ದ ಬದುಕು
ಮರಳಿ
ತಕ್ಕೈಸಿಕೊಂಡಿತು.

ಮೌನ ಸೊನ್ನೆ ತೆರವಾಗಿ
ಮುದ್ದು ಮಾತು ಹರಿದಾಡಿ
ಜೀವೋತ್ಸಾಹ ತಂಗಾಳಿ
ಮೊರೆಯ ತೊಡಗಿತು.

ಜಡವಾಗಿ
ಮೂಲೆ ಹಿಡಿದು ಕೂತಿದ್ದೆಲ್ಲ
ರೂಪು, ಲಾವಣ್ಯ ಪಡೆದು
ಉತ್ಸಾಹದ ಉತ್ಸವ ಹೊರಟಿತು.

ಸೂತ್ರದಾರ ಪೋರ
ಮರವೆಯಾಗಿದ್ದ, ಮಾಡದೆ ಉಳಿದಿದ್ದ
ಮಾಡುವಂತೆ ಮುಂದುಮಾಡಿ
ಪುಣ್ಯ ಮೂರ್ತಿಯಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ಯಕ್ರಮ
Next post ಸೋರುವ ತೂತು ಮುಚ್ಚ ಬೇಡವೇ ?

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys