ಪುಣ್ಯ ಮೂರ್ತಿ

ಬಾಳ ಹೊಳೆ ಬತ್ತಿ
ದಡಗಳೆರಡು ಒಣಗಿ
ಪಾತ್ರವು ವಿಕಾರವಾಗಿ ತೆರೆದುಕೊಂಡು
ನರಳುವ ನಡುವೆ
ಜೀವ ಸೆಲೆಯಾಗಿ ಬಂದ ದೌಹಿತ್ರ
ಚೆಂದಂಪು ತುಂಬಿತು.

ಕುಸಿಯುತ್ತಿದ್ದ ಮನೆ, ಮನಸಿನಲಿ
ಪ್ರಾಣ ವಾಯು ಪಲ್ಲವಿಸಿ
ಕೈ ಜಾರಿ ಹೋಗುತ್ತಿದ್ದ ಬದುಕು
ಮರಳಿ
ತಕ್ಕೈಸಿಕೊಂಡಿತು.

ಮೌನ ಸೊನ್ನೆ ತೆರವಾಗಿ
ಮುದ್ದು ಮಾತು ಹರಿದಾಡಿ
ಜೀವೋತ್ಸಾಹ ತಂಗಾಳಿ
ಮೊರೆಯ ತೊಡಗಿತು.

ಜಡವಾಗಿ
ಮೂಲೆ ಹಿಡಿದು ಕೂತಿದ್ದೆಲ್ಲ
ರೂಪು, ಲಾವಣ್ಯ ಪಡೆದು
ಉತ್ಸಾಹದ ಉತ್ಸವ ಹೊರಟಿತು.

ಸೂತ್ರದಾರ ಪೋರ
ಮರವೆಯಾಗಿದ್ದ, ಮಾಡದೆ ಉಳಿದಿದ್ದ
ಮಾಡುವಂತೆ ಮುಂದುಮಾಡಿ
ಪುಣ್ಯ ಮೂರ್ತಿಯಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ಯಕ್ರಮ
Next post ಸೋರುವ ತೂತು ಮುಚ್ಚ ಬೇಡವೇ ?

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…