ವಿ ಜಿ ಭಟ್ಟರಿಗೆ

ನವ್ಯದಪಿತಾಮಹರೆಂದು ವಿಮರ್ಶಕಜನ
ಕಟ್ಟಿದರೂನು ನಿಮಗೆ ಪಟ್ಟ
ಏರಲಿಲ್ಲ ನೀವಾ ಅಟ್ಟ

ಪಂಥಗಳ ಕಟ್ಟುವರು ಕಟ್ಟುತ್ತಲೇ ಇರಲು
ಹಿಡಿದಿರಿ ನಿಮ್ಮದೆ ದಿಕ್ಕು
ನೀವು ಸುಮ್ಮನೆ ನಕ್ಕು

ನವ್ಯ ನವೋದಯ ದಲಿತ ಬಂಡಾಯ ಇತ್ಯಾದಿ
ಸರ್ವರನು ನಾಚಿಸುವ ತರ
ಗ್ರಹಿಸಿದ್ದು ಸಂಸಾರ ಸಾರ

ಇನ್ನು ಮುಗಿಯಿತು ದಾರಿಯೆನ್ನುತಿರುವಂತೆಯೆ
ಕಾಣಿಸುವುದಿನ್ನೊಂದು ತಿರುವು
ಹೊಸ ಮಾತುಗಳ ಬರವು

ಆಚೆ ಆತ್ಮದ ಶೋಧ ಈಚೆ ಕಾಂತನ ವಿಷಾದ
ನಡುವೆ ಸಲ್ಲುವ ಕಾಲ
ಪಡೆದು ಸರ್ವಸ್ವ ಫಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಕೀರ್ಣತೆಯಲ್ಲಿಯೇ ಕ್ರೀಯಾಶೀಲತೆ ಕಂಡ – ಟಿ.ಎಸ್ ಏಲಿಯಟ್
Next post ಪದಗಳೊಂದಿಗೆ ನಾನು

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys