ಸ್ವಂತದ್ದಲ್ಲ

ಅದು ಮದುವೆ ಮನೆ. ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು. ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು. ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು. ಊಟದ ರುಚಿಯನ್ನು ಪ್ರೀತಿಯಿಂದ ಸವಿಯತೊಡಗಿದ್ದರು ಜನ. ಬಡಿಸುವವರು ಲವಲವಿಕೆಯಿಂದ ಊಟದೆಲೆಯ ಕಡೆಗೆ ಗಮನ ಹರಿಸಿದ್ದರು.

ಊಟಕ್ಕೆ ಬಡಿಸುವವರಲ್ಲಿ ಒಬ್ಬ ಕೆಲವರ ಹತ್ತಿರಕ್ಕೆ ಬಂದು ಅತಿಯಾದ ಕಾಳಜಿ ವ್ಯಕ್ತಪಡಿಸಿ “ಹೊಟ್ಟೆ ತುಂಬಾ ಊಟ ಮಾಡಿರಿ, ನಾಚಿಕೆ ಮಾಡಿಕೊಳ್ಳಬೇಡಿರಿ” ಎನ್ನುವನು. “ಈ ವಯಸ್ಸಿನಲ್ಲಿ ಉಣ್ಣದಿದ್ದರೆ ಹೇಗೆ… ಇನ್ನಷ್ಟು ತಗೋರಿ” ಎಂದು ಬಡಿಸುವನು. “ನಿಮ್ಮ ಪಾಲಿನದು ಹಾಕಿದೆ… ಇದು ನನ್ನ ಪಾಲಿನದು. ಮದುವೆ ಊಟ ಇದು ಹೊಟ್ಟೆ ಬಿರಿವಂತೆ ಉಣ್ಣಬೇಕು” ಎಂದು ಅವರು ಅಡ್ಡಾಗಿಟ್ಟ ಕೈಕೊಸರಾಡಿ ಎಲೆಗೆ ಪದಾರ್ಥ ಹಾಕುವನು. “ನನ್ನ ಒತ್ತಾಯಕ್ಕಾದರೂ ಇಷ್ಟು ನೀಡಿಸಿಕೊಳ್ಳಬೇಕು”, “ನಾನು ಪ್ರೀತಿಯಿಂದ ಬಡಿಸುತ್ತೇನೆ ತಗೊಳ್ಳಿರಿ”. “ಇದು ನಿಮ್ಮನೆ ಅಂತ ತಿಳ್ಕೊಳ್ಳಿರಿ” ಇಂಥವೇ ಮಾತುಗಳಿಂದ ಜಬರದಸ್ತಾಗಿ ಸಾಲುಗಳ ನಡುವೆ ಓಡಾಡುತ್ತಿದ್ದ.

ಊಟ ಮಾಡುವವರು ಬೇಡ… ಬೇಡ… ಸಾಕು… ಸಾಕು… ಎಂದು ಎಲೆಯನ್ನು ಪಕ್ಕಕ್ಕೆ ಎತ್ತಿಕೊಂಡರು. ಅದರ ಮೇಲೆ ಅಡ್ಡ ಬಿದ್ದರೂ ಅವನು ಹಟ ಮಾಡಿ ನೀಡುತ್ತಿದ್ದ. ಯಾರಾದರೂ ಹೊಟ್ಟೆ ಹಿಡಿದಷ್ಟು ತಿಂದಾರು. ಅವನು ಒತ್ತಾಯ ಮಾಡಿ ನೀಡಿದ್ದೆಲ್ಲ ಎಂಜಲಾಗಿ ಎಲೆ ತುಂಬಿದ್ದನ್ನು ಕಂಡು ಒಬ್ಬ “ಬೇಡ ಅಂದ್ರೂ ಜುಲಾಮಿ ಮಾಡಿ ಇಷ್ಟು ಅನ್ನ ಆಹಾರ ಕೆಡಿಸುತ್ತಿದ್ದಾನಲ್ಲ ಈ ಮನುಷ್ಯ!” ಎಂದು ವಿಷಾದದಿಂದ ಪೇಚಾಡಿಕೊಂಡ. ಅವನ ಪಕ್ಕದಲ್ಲಿದ್ದವನು ತಟ್ಟನೆ ಉದ್ಗರಿಸಿದ “ಹಾಳು ಮಾಡದೆ ಏನು ಮಾಡಿಯಾನು? ಅದು ಅವನ ಸ್ವಂತದ್ದಲ್ಲ!”

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಾವರ! ಜಂಗಮ?
Next post ಜಲರೂಪಿನಗು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys