ಸ್ವಂತದ್ದಲ್ಲ

ಅದು ಮದುವೆ ಮನೆ. ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು. ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು. ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು. ಊಟದ ರುಚಿಯನ್ನು ಪ್ರೀತಿಯಿಂದ ಸವಿಯತೊಡಗಿದ್ದರು ಜನ. ಬಡಿಸುವವರು ಲವಲವಿಕೆಯಿಂದ ಊಟದೆಲೆಯ ಕಡೆಗೆ ಗಮನ ಹರಿಸಿದ್ದರು.

ಊಟಕ್ಕೆ ಬಡಿಸುವವರಲ್ಲಿ ಒಬ್ಬ ಕೆಲವರ ಹತ್ತಿರಕ್ಕೆ ಬಂದು ಅತಿಯಾದ ಕಾಳಜಿ ವ್ಯಕ್ತಪಡಿಸಿ “ಹೊಟ್ಟೆ ತುಂಬಾ ಊಟ ಮಾಡಿರಿ, ನಾಚಿಕೆ ಮಾಡಿಕೊಳ್ಳಬೇಡಿರಿ” ಎನ್ನುವನು. “ಈ ವಯಸ್ಸಿನಲ್ಲಿ ಉಣ್ಣದಿದ್ದರೆ ಹೇಗೆ… ಇನ್ನಷ್ಟು ತಗೋರಿ” ಎಂದು ಬಡಿಸುವನು. “ನಿಮ್ಮ ಪಾಲಿನದು ಹಾಕಿದೆ… ಇದು ನನ್ನ ಪಾಲಿನದು. ಮದುವೆ ಊಟ ಇದು ಹೊಟ್ಟೆ ಬಿರಿವಂತೆ ಉಣ್ಣಬೇಕು” ಎಂದು ಅವರು ಅಡ್ಡಾಗಿಟ್ಟ ಕೈಕೊಸರಾಡಿ ಎಲೆಗೆ ಪದಾರ್ಥ ಹಾಕುವನು. “ನನ್ನ ಒತ್ತಾಯಕ್ಕಾದರೂ ಇಷ್ಟು ನೀಡಿಸಿಕೊಳ್ಳಬೇಕು”, “ನಾನು ಪ್ರೀತಿಯಿಂದ ಬಡಿಸುತ್ತೇನೆ ತಗೊಳ್ಳಿರಿ”. “ಇದು ನಿಮ್ಮನೆ ಅಂತ ತಿಳ್ಕೊಳ್ಳಿರಿ” ಇಂಥವೇ ಮಾತುಗಳಿಂದ ಜಬರದಸ್ತಾಗಿ ಸಾಲುಗಳ ನಡುವೆ ಓಡಾಡುತ್ತಿದ್ದ.

ಊಟ ಮಾಡುವವರು ಬೇಡ… ಬೇಡ… ಸಾಕು… ಸಾಕು… ಎಂದು ಎಲೆಯನ್ನು ಪಕ್ಕಕ್ಕೆ ಎತ್ತಿಕೊಂಡರು. ಅದರ ಮೇಲೆ ಅಡ್ಡ ಬಿದ್ದರೂ ಅವನು ಹಟ ಮಾಡಿ ನೀಡುತ್ತಿದ್ದ. ಯಾರಾದರೂ ಹೊಟ್ಟೆ ಹಿಡಿದಷ್ಟು ತಿಂದಾರು. ಅವನು ಒತ್ತಾಯ ಮಾಡಿ ನೀಡಿದ್ದೆಲ್ಲ ಎಂಜಲಾಗಿ ಎಲೆ ತುಂಬಿದ್ದನ್ನು ಕಂಡು ಒಬ್ಬ “ಬೇಡ ಅಂದ್ರೂ ಜುಲಾಮಿ ಮಾಡಿ ಇಷ್ಟು ಅನ್ನ ಆಹಾರ ಕೆಡಿಸುತ್ತಿದ್ದಾನಲ್ಲ ಈ ಮನುಷ್ಯ!” ಎಂದು ವಿಷಾದದಿಂದ ಪೇಚಾಡಿಕೊಂಡ. ಅವನ ಪಕ್ಕದಲ್ಲಿದ್ದವನು ತಟ್ಟನೆ ಉದ್ಗರಿಸಿದ “ಹಾಳು ಮಾಡದೆ ಏನು ಮಾಡಿಯಾನು? ಅದು ಅವನ ಸ್ವಂತದ್ದಲ್ಲ!”

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಾವರ! ಜಂಗಮ?
Next post ಜಲರೂಪಿನಗು

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…