ನಂಬಿಕೆ

ದೈವನಂಬಿಕೆಯೊಂದು ದಿನ್ನೆ, ಏರುವ ಜನಕ್ಕೆ.
ಹತ್ತಿನಿಂತರೆ ದಿನ್ನೆನೆತ್ತಿಯಲಿ ಸುತ್ತಲಿನ
ಹತ್ತು ವಿಷಯಗಳೆಲ್ಲ ಕಣ್ಣತೆಕ್ಕೆಗೆ ಸಿಕ್ಕಿ
ನೋಟ ಕೂರಾಗುವುದು, ನಿಲವು ದೃಢವಾಗುವುದು,
ತುಂಬಿ ಹರಿಯುವ ಗಾಳಿ ಬಗೆ ಸೋಸಿ ಮುಖದಲ್ಲಿ
ನೊಂದ ನೆನಪಿನ ಬಿರುಸು ಹರಿದು ನಗೆ ಹಾಸುವುದು.
ತಪ್ಪಲಿನ ಕಣ್ಣತಡೆ ಇಲ್ಲಿ ಕೆಳನಿಲ್ಲುವುವು;
ನೆಲದ ಗದ್ದಲ ಮೇಲಕೇರುತ್ತ ಸಣ್ಣಾಗಿ
ಕಡೆಗೊಮ್ಮೆ ಸಾಯುವುದು; ಮೇಲೆ ನಿಂತವರ ದನಿ
ಕೇಳಿಸದು ; ಹತ್ತು ಜನರ ರೀತಿಗೆ ಹೊರಗು.
ತಪ್ಪಲಿನ ಜನಕ್ಕೆ ಇದ ಕಂಡು ಬೆರಗೋ ಬೆರಗು.

ಇಂಥ ನಂಬಿಕೆಯೊಂದು ನೂಲು; ಬಾಳಿನ ಮೇಲು
ಕೀಳುಗಳ ಎಡೆಯರಿತು ಅದರೊಳಗೆ ಪೋಣಿಸಲು
ಮೂಡುವುದು ಕಾಣದಿಹ ಚೆಲುವು; ಅಳು ನಗು ಇಲ್ಲಿ
ಬೆರೆಯುವುವು ಬಣ್ಣಗಳ ತೊರೆದು, ಒಳಗಿನ ತಿರುಳು
ಒಂದೆ ಎನ್ನುವ ಪರಿಯ ಮೆರೆದು; ಬದುಕಿನ ಪರಿಧಿ
ಬೆಳೆಯುವುದು ಎಲ್ಲೆಯನು ಹರಿದು; ತನ್ನೊಳು ಹೊರಗ
ಕೊಳ್ಳುವುದು. ತನ್ನೆದೆಯ ತಿಳಿವುಗನ್ನಡಿಯಲ್ಲಿ
ಲೋಕಬಿಂಬವ ಕಂಡು ತಣಿಯುವುದು ಮಣಿಯುವುದು.
ನಂಬಿಕೆಗೆ ಕೋದ ಅನುಭವ ಒಂದಲಂಕಾರ
ಲೋಕವನು ಸವಿವ ಜೀವಿಗೆ ಭಾವಶೃಂಗಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ-ಕವನ
Next post ಹುಚ್ಚ ಬೋಳಿಯು ಹೋದಳು

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…