Home / ಕವನ / ಕವಿತೆ / ತಾಯಿ

ತಾಯಿ

ಸರ್ರನೆ ಜಾರುವ ನುಣ್ಣನೆ ಬುದ್ಧಿಗೆ
ಆಗೀಗ ಸಿಕ್ಕಿ ತೊಡಕು, ಅಲ್ಲಲ್ಲಿ ನಿಲ್ಲುವುದು;
ನಿಂತಾಗ ಗರಿಬುದ್ದಿ ತೊಲೆಭಾರವಾಗಿ
ನಿನ್ನೆ ನೆನಪು-
ಸೊಯ್ಯನೆ ಸರಿಯುವ ಸಾಪುಮೈ ಹೊಳೆಯಲ್ಲಿ
ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು ;
ಮಿಸುಕಿದರೆ ಕತ್ತು ಲಟ್ಟೆನುವ ಯಮಹೊರೆ ಹೊತ್ತು
ತಿನಿಕಿ ನಡೆವಾಗ ಕೆಳಗಡೆ ಪಾಚಿಗಲ್ಲು;
ಪೂಯೆಂದು ಬಾಯಿಂದ ಎಣ್ಣೆ ಉಗ್ಗಿದ ಹಾಗೆ ಪಂಜಿಗೆ,
ಭಗ್ಗೆಂದು ಹೂಗೆಸಹಿತ ಬೆಳಕೆದ್ದು ಧಗಧಗಿಸಿ
ತೂಗುವುದು ಗಾಳಿಗೆ
ದಾಸವಾಳದ ಕೆಂಪು ನಾಲಗೆ
ಅದರೊಳಗೆ :
ಕೆಂಪು ಸೀರೆಯನುಟ್ಟು ಬರಿತಲೆಗೆ ಸೆರಗಿಟ್ಟು
ಬತ್ತ ಕುಟ್ಟುವ, ಬೀಸೆಕಲ್ಲು ಬೀಸುವ, ಪುಟ್ಟ
ಸೊರಗು ಮೈಯಿನ ವಿಧವೆ ಹೆಣ್ಣು ;
ಪಕ್ಕಕ್ಕೆ ಕೂತು
ಹರಕು ಜೇಬಲ್ಲಿ ಕೈಯ ಇಳಿಬಿಟ್ಟು ಅವಳನ್ನೇ
ನೆಟ್ಟು ನೋಡುತ್ತಲಿದೆ ಆರೇಳರ ಎಳೆಗಣ್ಣು.
ತಾಯ ಮುಖದಲಿ ಒಂದು ಪೆಚ್ಚುನಗೆ, ಅವಳಿಗೆ
ಕನಿಕರಿಸುವಂತೆ ಹುಡುಗನ ಮುಖದ ಬಗೆ; ಹೀಗೆ
ತಾಯಿ ಇಳಿವಳು ಮಗನ ಬಾಳಿಗೆ.

ಹರಿದಂತೆ ಇಂಥ ಗರಗಸ ನೆನಪು ತಲೆಯಲ್ಲಿ
ಉದುರುವುದು ಹೊಟ್ಟಾಗಿ ಬದುಕು.
ಛೇ! ಹರಿವ ಹೊಳೆ ಮಾಡಬಾರದು ಕೊಚ್ಚಿ ತೆಗೆದಿರುವ
ದಡದ ಚಿಂತೆ.
ಇದ್ದ ನೆಲವನ್ನೆಲ್ಲ ಗೆದ್ದು ಸಾಗುವುದು,
ಹೊಸ ನೆರೆಗೆ ತುಡಿಯುವುದು ;
ಪಡೆಯಲೆಂಬಂತೆ,
ಗಡಿದಾಟಿ ಹರಿಯುತ್ತ ಹೊಸ ಗುರುತ ಕೊರೆಯುತ್ತ
ಬಾನಿನಂಗಳದಲ್ಲಿ ಮುಗಿಲ ಪಡೆ ಹೂಡುವುದು
ನಾಳೆಗೆಂಬಂತೆ.

ಮರ ಬೆಳೆದು ಬೇರಗಲ ಕರಗಿರುವ ನೆಲದಂತೆ ತಾಯಿ,
ಅವಳ ಚಿ೦ತೆ-
ಹಾಲಲ್ಲೆ ಇಳಿದಂಥ ನೊರೆಗೆ ಅತ್ತಂತೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...