ತಾಯಿ

ಸರ್ರನೆ ಜಾರುವ ನುಣ್ಣನೆ ಬುದ್ಧಿಗೆ
ಆಗೀಗ ಸಿಕ್ಕಿ ತೊಡಕು, ಅಲ್ಲಲ್ಲಿ ನಿಲ್ಲುವುದು;
ನಿಂತಾಗ ಗರಿಬುದ್ದಿ ತೊಲೆಭಾರವಾಗಿ
ನಿನ್ನೆ ನೆನಪು-
ಸೊಯ್ಯನೆ ಸರಿಯುವ ಸಾಪುಮೈ ಹೊಳೆಯಲ್ಲಿ
ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು ;
ಮಿಸುಕಿದರೆ ಕತ್ತು ಲಟ್ಟೆನುವ ಯಮಹೊರೆ ಹೊತ್ತು
ತಿನಿಕಿ ನಡೆವಾಗ ಕೆಳಗಡೆ ಪಾಚಿಗಲ್ಲು;
ಪೂಯೆಂದು ಬಾಯಿಂದ ಎಣ್ಣೆ ಉಗ್ಗಿದ ಹಾಗೆ ಪಂಜಿಗೆ,
ಭಗ್ಗೆಂದು ಹೂಗೆಸಹಿತ ಬೆಳಕೆದ್ದು ಧಗಧಗಿಸಿ
ತೂಗುವುದು ಗಾಳಿಗೆ
ದಾಸವಾಳದ ಕೆಂಪು ನಾಲಗೆ
ಅದರೊಳಗೆ :
ಕೆಂಪು ಸೀರೆಯನುಟ್ಟು ಬರಿತಲೆಗೆ ಸೆರಗಿಟ್ಟು
ಬತ್ತ ಕುಟ್ಟುವ, ಬೀಸೆಕಲ್ಲು ಬೀಸುವ, ಪುಟ್ಟ
ಸೊರಗು ಮೈಯಿನ ವಿಧವೆ ಹೆಣ್ಣು ;
ಪಕ್ಕಕ್ಕೆ ಕೂತು
ಹರಕು ಜೇಬಲ್ಲಿ ಕೈಯ ಇಳಿಬಿಟ್ಟು ಅವಳನ್ನೇ
ನೆಟ್ಟು ನೋಡುತ್ತಲಿದೆ ಆರೇಳರ ಎಳೆಗಣ್ಣು.
ತಾಯ ಮುಖದಲಿ ಒಂದು ಪೆಚ್ಚುನಗೆ, ಅವಳಿಗೆ
ಕನಿಕರಿಸುವಂತೆ ಹುಡುಗನ ಮುಖದ ಬಗೆ; ಹೀಗೆ
ತಾಯಿ ಇಳಿವಳು ಮಗನ ಬಾಳಿಗೆ.

ಹರಿದಂತೆ ಇಂಥ ಗರಗಸ ನೆನಪು ತಲೆಯಲ್ಲಿ
ಉದುರುವುದು ಹೊಟ್ಟಾಗಿ ಬದುಕು.
ಛೇ! ಹರಿವ ಹೊಳೆ ಮಾಡಬಾರದು ಕೊಚ್ಚಿ ತೆಗೆದಿರುವ
ದಡದ ಚಿಂತೆ.
ಇದ್ದ ನೆಲವನ್ನೆಲ್ಲ ಗೆದ್ದು ಸಾಗುವುದು,
ಹೊಸ ನೆರೆಗೆ ತುಡಿಯುವುದು ;
ಪಡೆಯಲೆಂಬಂತೆ,
ಗಡಿದಾಟಿ ಹರಿಯುತ್ತ ಹೊಸ ಗುರುತ ಕೊರೆಯುತ್ತ
ಬಾನಿನಂಗಳದಲ್ಲಿ ಮುಗಿಲ ಪಡೆ ಹೂಡುವುದು
ನಾಳೆಗೆಂಬಂತೆ.

ಮರ ಬೆಳೆದು ಬೇರಗಲ ಕರಗಿರುವ ನೆಲದಂತೆ ತಾಯಿ,
ಅವಳ ಚಿ೦ತೆ-
ಹಾಲಲ್ಲೆ ಇಳಿದಂಥ ನೊರೆಗೆ ಅತ್ತಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಯಾಬಿಟಿಕ್
Next post ಕರ್ಪುರಂ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys