ವಿರೋಧ ಭಾಸ

ಕತ್ತಲು ಕೋಣೆಯಲಿ ಬೆಳಕಿನ ಅಕ್ಷರಗಳು
ಮೌನ ಆವರಣದಲ್ಲಿ ಮಾತುಗಳ ಶಬ್ಧಗಳು
ಕತ್ತಲು ಬೆಳಕು ಮೌನ ಮಾತು ಎಲ್ಲವೂ
ಒಂದೇ ನಾಣ್ಯವಾದಾಗ, ಹುಡುಕುವುದು ಏನನ್ನೂ
ಗಾಯಕ್ಕೆ, ಸವರಿದ ಮೂಲಾಮಿನ ತಣ್ಣನೆ ಸ್ಪರ್ಶ
ಮರದಲ್ಲಿ ಚಿಗುರಿದ ಹಸಿರು, ಯಾತನೆಯಲ್ಲಿ
ಸಾವಿನ ಖುಷಿ, ಎಲ್ಲವೂ ಮಾಂತ್ರಿಕ ವಿರುದ್ಧ
ಅರ್ಥಗಳು ಒಂದರಲ್ಲೊಂದು ಬೆಸೆದಾಗ.

ಹೂವಿನ ಮಕರಂದ ಹೀರಿದ
ಚಿಟ್ಟೆ ಜೇನಿದಾಗ ಮತ್ತೆ ಹುಟ್ಟು ಸಾವು
ಎಲ್ಲ ಮುಗಿಯುವುದಿಲ್ಲ ನಾನು ನೀನು
ದೂರ ಸರಿದಾಗ ಯಾಕೆಂದರೆ ಭಿನ್ನ ಸಂವೇದನೆಗಳು
ಒಂದನ್ನೊಂದು ಆಕರ್ಷಿಸುತ್ತದೆ.

ಯುದ್ಧ ನಡೆದು ರಕ್ತ ಪಾತ ಹರಿದರೂ
ನದಿಗಳು ತಪ್ಪಲಲ್ಲಿ ಹರಿಯುತ್ತವೆ.
ಸಮುದ್ರದಲೆಗಳು ಉಕ್ಕುತ್ತವೆ ಸಂಘರ್ಷದಲ್ಲಿ
ಎಲ್ಲವೂ ನನ್ನವು ಅಂದಾಗ ಅದೆಲ್ಲವೂ
ನಿನ್ನದಾಗಿರುತ್ತವೆ, ಮರ-ಚಿಗುರು-ಮೋಡ ಮಳೆ ಹುಟ್ಟು-ಸಾವು.

ಎಲ್ಲಾ ಶಬ್ಧಗಳು ನಿಶಬ್ಧಗಳಾಗಿ ಪರಿವರ್ತನೆ
ಹೊಂದಿದರೂ ದಿನದ ಬೆಳಗು ರಾತ್ರಿಯ ಕತ್ತಲೆ
ವಾಸ್ತವ ದಿಕ್ಕುಗಳು ಬೇರೆ ಬೇರೆ ಕಡೆ ಇದ್ದರೂ
ಕ್ಷಣ ಕ್ಷಣಕ್ಕೆ ಬದಲಾಗುವ ಜೀವರಾಶಿ ಚಿಗುರಿ
ಮುರುಟಿ ಹುಟ್ಟಿ-ಸತ್ತು ಬಿಂಬ ಪ್ರೀತಿ ಬಿಂಬಗಳಾಗಿ
ಲೋಕ ತೇಲಾಡುವುದು ವಿರೋಧಗಳ ಹುಟ್ಟಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವಿಷ್ಯದ ಮಾರಕ ರೋಗ ನಿರೋಧಕ ಶಕ್ತಿ: ಎದೆ ಹಾಲು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೮

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…