ಐಸುರ ಮೋರುಮದಾಟ

ಐಸುರ ಮೋರುಮದಾಟ
ಹೇಸಿ ತಗಿ ನಿನ್ನ ಪಾಠ                ||ಪ||

ಒಂದು ಬೀಜ ಅಕ್ಷರವನರಿಯದೆ
ಮಂದಿಯೊಳು ಬಹು ಜಾಣನೆನಸಿ
ನಿಂದೆಗುಣ ನಿಜಾತ್ಮನರಿಯದೆ
ಹಂದಿ ಜಲ್ಮಕೆ ಬಿದ್ದಿ ತಮ್ಮಾ             ||೧||

ಕತ್ತಲ ಶಹಾದತ್ತು ಹ್ಯಾಂಗೋ
ಛೇ ಮತಿಹೀನ ಹೋಗೋ
ಪಥಕೆ ಮುಟ್ಟದ ಶಾಸ್ತ್ರಕವಿಗಳು
ನೆನಸಿದರೆ ಫಲವೇನು ಇದರೊಳು
ಗತಿಗೆ ಹೊಂದದ ಗರ್ವ  ಯಾತಕ
ಆತಿ ನಯದಿ ಮಾತಾಡಬೇಡ               ||೨||

ಶಿಶುನಾಳಧೀಶನ ಕವಿಯ ನೋಡಿ
ಬಂದು ಆಡೋ ಅಲಾವಿ
ವಸುಧಿಯೊಳು ಬಹು ಜಾಣನೆನಸಿ
ಹೊಸ ರಿವಾಯತ ಹೇಳೋ ಎಣಸಿ
ಹಸನವಲ್ಲದು ಬ್ಯಾಡ ನಡಿ ನಡಿ
ಕಲಿಯುಗದೊಳಗಾದೆಯೋ ಹೇಸಿ            ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲಾವಿ ಇನ್ನ್ಯಾತಕ್ಕಾಡಬೇಕು
Next post ನಗೆ ಡಂಗುರ – ೫೪

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys