ಮುರಿದ ವಾದ್ಯದ ರಾಗ

ಅದೊಂದು ಅಸಂಗತ ಸಂಪರ್ಕ
ಅಸಂಬದ್ಧ
ಯಾರದೋ ಸಂತೃಪ್ತಿ,
ಯಾರಿಗೋ ಸೌಭಾಗ್ಯ
ಬರೆದ ಬ್ರಹ್ಮನಿಗೇನು ಗೊತ್ತು?
ತಾಳತಂತಿಗಳಿಲ್ಲದ ವಾದ್ಯ
ನುಡಿಸಲಾಗದು:
ಆದರೂ ನುಡಿಸಿದವು
ಅರ್ಧಮರ್ಧ, ಅಷ್ಟಕಷ್ಟೆ.

ಮತ್ತೆ ಕಳಚಿ ಬೀಳುವ ಹಂತ
ಸರಿಗೆಗಳು ಸುತ್ತಿಕೊಳ್ಳುತ್ತ
ಗಾಢವಾಗುತ್ತ ನಡೆದವು
ಜಟಿಲ ಬಲೆ ನೆಯ್ದಂತೆ.
ಹೊರಬರಲು ಆಗದ ಇರಲು ಆಗದ
ಚಡಪಡಿಕೆ-ಬಸವಳಿದು
ಒಂದಕ್ಕೊಂದು ಚಚ್ಚಿಕೊಂಡವು
ಕುಟುಕಿಕೊಂಡವು
ಬಾಯ್ತೆರೆದು ವಿಷದ ಕೊಂಡಿಯಿಂದ.

ರೋಮರೋಮಗಳಿಂದ
ಹಾಲಾಹಲ ಉಕ್ಕತೊಡಗಿದರೂ
ಜಗ್ಗದ ಬಗ್ಗದ ಜನ್ಮ
ನೆಕ್ಕಿದವು ಹಠದಿಂದ
ಅರಗಿ ಅಕ್ಕಿತು ಪುಷ್ಟಿಗೊಂಡಿತು
ಮತ್ತೆ ಉಕ್ಕಿತು ನಾದ
ವಿಷವುಂಡ ಕಂಠದಿಂದಲೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್‍ಯನಿಗೆ
Next post ಶಬರಿ – ೧೩

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…