Home / ಕವನ / ಕವಿತೆ / ಮುರಿದ ವಾದ್ಯದ ರಾಗ

ಮುರಿದ ವಾದ್ಯದ ರಾಗ

ಅದೊಂದು ಅಸಂಗತ ಸಂಪರ್ಕ
ಅಸಂಬದ್ಧ
ಯಾರದೋ ಸಂತೃಪ್ತಿ,
ಯಾರಿಗೋ ಸೌಭಾಗ್ಯ
ಬರೆದ ಬ್ರಹ್ಮನಿಗೇನು ಗೊತ್ತು?
ತಾಳತಂತಿಗಳಿಲ್ಲದ ವಾದ್ಯ
ನುಡಿಸಲಾಗದು:
ಆದರೂ ನುಡಿಸಿದವು
ಅರ್ಧಮರ್ಧ, ಅಷ್ಟಕಷ್ಟೆ.

ಮತ್ತೆ ಕಳಚಿ ಬೀಳುವ ಹಂತ
ಸರಿಗೆಗಳು ಸುತ್ತಿಕೊಳ್ಳುತ್ತ
ಗಾಢವಾಗುತ್ತ ನಡೆದವು
ಜಟಿಲ ಬಲೆ ನೆಯ್ದಂತೆ.
ಹೊರಬರಲು ಆಗದ ಇರಲು ಆಗದ
ಚಡಪಡಿಕೆ-ಬಸವಳಿದು
ಒಂದಕ್ಕೊಂದು ಚಚ್ಚಿಕೊಂಡವು
ಕುಟುಕಿಕೊಂಡವು
ಬಾಯ್ತೆರೆದು ವಿಷದ ಕೊಂಡಿಯಿಂದ.

ರೋಮರೋಮಗಳಿಂದ
ಹಾಲಾಹಲ ಉಕ್ಕತೊಡಗಿದರೂ
ಜಗ್ಗದ ಬಗ್ಗದ ಜನ್ಮ
ನೆಕ್ಕಿದವು ಹಠದಿಂದ
ಅರಗಿ ಅಕ್ಕಿತು ಪುಷ್ಟಿಗೊಂಡಿತು
ಮತ್ತೆ ಉಕ್ಕಿತು ನಾದ
ವಿಷವುಂಡ ಕಂಠದಿಂದಲೂ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...