ಜಲಾಲುದ್ದೀನ್ ಜಲಾಲಿ

ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು
ಮಾಡುವ ಗೆಳೆಯನೆ ಹೇಳು ನೀನು ನನಗೆ
ಸರ್ವಶಕ್ತನಾದ ದೇವರ ರೀತಿ ರಿವಾಜು

ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ
ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ
ಬರಡಾದ ಹೊಲಗಳಲ್ಲಿ ಧಾನ್ಯಗಳ ತೆನೆ

ಎಲ್ಲರನ್ನೂ ಸಮನಾಗಿ ಸೃಷ್ಟಿಸಿದ್ದಾದರೆ ಕರ್ತ
ಅಲ್ಲಿ ಭಾರೀ ಮಹಡಿ ಇಲ್ಲಿ ಬರೇ ಜೋಪಡಿ
ಇಂಥ ವಿಪರ್ಯಾಸಕ್ಕೆ ಏನು ಅರ್ಥ?

ಕೆಲವರೆನ್ನುವರು ದೇವರೆಂದರೆ ಮನುಷ್ಯಕೋಟಿ
ಸಮರ್ಥಿಸಲೆಂದು ತನ್ನೊಳಗಿನ ಸೈತಾನುಗಳ
ಬೇಕುಬೇಕೆಂದೇ ಉಂಟುಮಾಡಿದ ಸೃಷ್ಟಿ

ನಿಜವಿದ್ದೀತು ಅಥವ ಇಲ್ಲಿದಿದ್ದೀತು
ನೀನಂತೂ ಕಟ್ಟಾ ದೈವ ವಿಶ್ವಾಸಿ-ನಿನ್ನಷ್ಟು
ಅಖಂಡ ವಿಶ್ವಾಸ ನನ್ನ ಒಳತೋಟಿಗೆ ಹೊರತು

ಆದರೂ ಅನಿಸುವುದು ಕೆಲವೊಮ್ಮೆ ಆಶ್ಚರ್ಯ
ಪ್ರತಿ ನಸುಕಿನಲ್ಲೂ ಯಾಕೆ ಕೂಗುವುದು ಕೋಳಿ
ಮೂಡುವುದು ಯಾಕೆ ಮೂಡಲೇಬೇಕಾದಂತೆ ಸೂರ್ಯ

ವರುಷ ವರುಷವೂ ಬರುವ ವಲಸೆಯ ಪಕ್ಷಿ
ಮಾಯಕದಲ್ಲಿ ಬಿರಿಯುವ ಹೂವು ಮಾಯುವ ನೋವು
ಸಾಕೆ ನಂಬುವುದಕ್ಕೆ ಇಷ್ಟು ಸಾಕ್ಷಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಧಾನಸೌಧ ಎಂಬ ಮಾಯಾಬಜಾರ್
Next post ಆಳವೆಂಬ ಅರಿವು

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys