ಜಲಾಲುದ್ದೀನ್ ಜಲಾಲಿ

ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು
ಮಾಡುವ ಗೆಳೆಯನೆ ಹೇಳು ನೀನು ನನಗೆ
ಸರ್ವಶಕ್ತನಾದ ದೇವರ ರೀತಿ ರಿವಾಜು

ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ
ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ
ಬರಡಾದ ಹೊಲಗಳಲ್ಲಿ ಧಾನ್ಯಗಳ ತೆನೆ

ಎಲ್ಲರನ್ನೂ ಸಮನಾಗಿ ಸೃಷ್ಟಿಸಿದ್ದಾದರೆ ಕರ್ತ
ಅಲ್ಲಿ ಭಾರೀ ಮಹಡಿ ಇಲ್ಲಿ ಬರೇ ಜೋಪಡಿ
ಇಂಥ ವಿಪರ್ಯಾಸಕ್ಕೆ ಏನು ಅರ್ಥ?

ಕೆಲವರೆನ್ನುವರು ದೇವರೆಂದರೆ ಮನುಷ್ಯಕೋಟಿ
ಸಮರ್ಥಿಸಲೆಂದು ತನ್ನೊಳಗಿನ ಸೈತಾನುಗಳ
ಬೇಕುಬೇಕೆಂದೇ ಉಂಟುಮಾಡಿದ ಸೃಷ್ಟಿ

ನಿಜವಿದ್ದೀತು ಅಥವ ಇಲ್ಲಿದಿದ್ದೀತು
ನೀನಂತೂ ಕಟ್ಟಾ ದೈವ ವಿಶ್ವಾಸಿ-ನಿನ್ನಷ್ಟು
ಅಖಂಡ ವಿಶ್ವಾಸ ನನ್ನ ಒಳತೋಟಿಗೆ ಹೊರತು

ಆದರೂ ಅನಿಸುವುದು ಕೆಲವೊಮ್ಮೆ ಆಶ್ಚರ್ಯ
ಪ್ರತಿ ನಸುಕಿನಲ್ಲೂ ಯಾಕೆ ಕೂಗುವುದು ಕೋಳಿ
ಮೂಡುವುದು ಯಾಕೆ ಮೂಡಲೇಬೇಕಾದಂತೆ ಸೂರ್ಯ

ವರುಷ ವರುಷವೂ ಬರುವ ವಲಸೆಯ ಪಕ್ಷಿ
ಮಾಯಕದಲ್ಲಿ ಬಿರಿಯುವ ಹೂವು ಮಾಯುವ ನೋವು
ಸಾಕೆ ನಂಬುವುದಕ್ಕೆ ಇಷ್ಟು ಸಾಕ್ಷಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಧಾನಸೌಧ ಎಂಬ ಮಾಯಾಬಜಾರ್
Next post ಆಳವೆಂಬ ಅರಿವು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…