ಜಲಾಲುದ್ದೀನ್ ಜಲಾಲಿ

ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು
ಮಾಡುವ ಗೆಳೆಯನೆ ಹೇಳು ನೀನು ನನಗೆ
ಸರ್ವಶಕ್ತನಾದ ದೇವರ ರೀತಿ ರಿವಾಜು

ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ
ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ
ಬರಡಾದ ಹೊಲಗಳಲ್ಲಿ ಧಾನ್ಯಗಳ ತೆನೆ

ಎಲ್ಲರನ್ನೂ ಸಮನಾಗಿ ಸೃಷ್ಟಿಸಿದ್ದಾದರೆ ಕರ್ತ
ಅಲ್ಲಿ ಭಾರೀ ಮಹಡಿ ಇಲ್ಲಿ ಬರೇ ಜೋಪಡಿ
ಇಂಥ ವಿಪರ್ಯಾಸಕ್ಕೆ ಏನು ಅರ್ಥ?

ಕೆಲವರೆನ್ನುವರು ದೇವರೆಂದರೆ ಮನುಷ್ಯಕೋಟಿ
ಸಮರ್ಥಿಸಲೆಂದು ತನ್ನೊಳಗಿನ ಸೈತಾನುಗಳ
ಬೇಕುಬೇಕೆಂದೇ ಉಂಟುಮಾಡಿದ ಸೃಷ್ಟಿ

ನಿಜವಿದ್ದೀತು ಅಥವ ಇಲ್ಲಿದಿದ್ದೀತು
ನೀನಂತೂ ಕಟ್ಟಾ ದೈವ ವಿಶ್ವಾಸಿ-ನಿನ್ನಷ್ಟು
ಅಖಂಡ ವಿಶ್ವಾಸ ನನ್ನ ಒಳತೋಟಿಗೆ ಹೊರತು

ಆದರೂ ಅನಿಸುವುದು ಕೆಲವೊಮ್ಮೆ ಆಶ್ಚರ್ಯ
ಪ್ರತಿ ನಸುಕಿನಲ್ಲೂ ಯಾಕೆ ಕೂಗುವುದು ಕೋಳಿ
ಮೂಡುವುದು ಯಾಕೆ ಮೂಡಲೇಬೇಕಾದಂತೆ ಸೂರ್ಯ

ವರುಷ ವರುಷವೂ ಬರುವ ವಲಸೆಯ ಪಕ್ಷಿ
ಮಾಯಕದಲ್ಲಿ ಬಿರಿಯುವ ಹೂವು ಮಾಯುವ ನೋವು
ಸಾಕೆ ನಂಬುವುದಕ್ಕೆ ಇಷ್ಟು ಸಾಕ್ಷಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಧಾನಸೌಧ ಎಂಬ ಮಾಯಾಬಜಾರ್
Next post ಆಳವೆಂಬ ಅರಿವು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…