ಆಳವೆಂಬ ಅರಿವು

ಆಳದ ನೆಲೆಯಲ್ಲಿ ಕವಲುಗಳ
ಕುಸುರಿ ಕುಂದುವುದಿಲ್ಲ
ಅಧಿತ್ವದ ಸೊಗಸು ಜಡತ್ವ ಮೂಡದ
ಜಗಮಗಿಸುವ ಬೆಳಕು.
ಸ್ವಯಂಸ್ಪೂತರ್‍ತಿ ಸೆಲೆಯ
ಅರಗಿಸಿ ದಕ್ಕಿಸಿಕೊಳ್ಳಬೇಕು.

ಹರಳೆಣ್ಣೆ ಗಾಢವಾಗುರಿದರೆ
ಕಡುಕಪ್ಪು ಕಾಡಿಗೆ
ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ.

ಹೊಸ ಸಂಕೇತಗಳಿಗೆ
ಹಳೆಯ ಸನ್ನೆಗಳೇ ಆಳಬಿಂಬಗಳು
ಕೂಡಿಕಳೆವ, ಭಾಗಿಸಿ ಗುಣಿಸುವ
ಲೆಕ್ಕಮಾಪನಗಳು
ಆಳದ ತೀವ್ರತೆಯ ಚುಕ್ಕಿಗಳು.

ಆಳದ ಹೊರಮೈ, ಒಳಮೈ
ಮೇಲೆ ಕೆಳಗೆ ಎಲ್ಲ ಕಡೆಯ
ಸಿಕ್ಕು ಬಸಿದು ನೆಕ್ಕಿ ಉಕ್ಕಬೇಕು, ಒಳಗಿನ
ವೀಣೆಯ ತಂತಿ ಮೀಟುವ ರಾಗಕ್ಕೆ
ನಿತಾಂತ ಹೊಸ ಚಿಗುರು
ಬಣ್ಣಗೂಡುತ್ತಿರಬೇಕು.

ಎದೆಗಿಳಿದ ಅಕ್ಷರಗಳು
ಶೋಕೇಸಿನ ಕಪಾಟಿನಲ್ಲಿ
ಗಾಜಿನಕೋಣೆಯಲ್ಲಿ ತಳತಳಿಸುವ
ಪದಕವಾಗಲ್ಲ..
ನೆಲಕ್ಕಿಳಿಯಬೇಕು,
ಕೆಸರ ಕೊಳದ ನೈದಿಲೆಯಾಗಬೇಕು.
ಬೆಳಕಿನ ಹಾಡ ಹೊಮ್ಮಿಸಬೇಕು.

ಆಳಕ್ಕಿಳಿದಷ್ಟು ಬಿಸಿಲ ತಣ್ಣಗೆ ಸವಿವ
ಸರಳತೆಯ ಇನಿತಿನಿತು
ಕರಗಿಸಿಕೊಳ್ಳಬೇಕು, ಅದಕ್ಕೆ ಆಳದ ಅರಿವ
ನಾನರಿತುಕೊಳ್ಳಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಲಾಲುದ್ದೀನ್ ಜಲಾಲಿ
Next post ಮಾಸ್ತರ್‌ಗಿಟ್ಟ ಮುಳ್ಳು, ಹೆಗಲಿಗೆ ಬಿತ್ತು ಡೊಳ್ಳು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…