ಮೂನ್ ಮೂನ್ ಸೇನಳಿಗೆ

ನಿನ್ನ ಅನರ್ಘ್ಯ ಸೊಬಗು ಸಿಡಿಮದ್ದಿನಂತೆ
ಹೊಡೆಯುವುದರಿಂದ ಬಹುಪಾಲು
ಜನರ ಎದೆ ತಲ್ಲಿಣಿಸುವುದಂತೆ
ತತ್ತರಿಸುವುದಂತೆ ಕೈಕಾಲು

ಕವಿಗಳಿಗೆ ಕೂಡ ಬರದು ಕವಿತೆಯ ಸಾಲು
ಹೀಗಿರುತ್ತ ಕೇವಲ ನಿನ್ನ ಛಾಯಾಚಿತ್ರ
ನೋಡಿಯೋ ಪರವಶನಾಗಿ ಸಂಪೂರ್‍ಣ
ಮೈಮರೆವ ಮೊದಲೆ ಬರೆಯುವೆನೀ ಪತ್ರ,

ಎಷ್ಟೋ ವರ್ಷಗಳಿಗೊಬ್ಬಳು ಕ್ಲಿಯೋಪಾತ್ರ
ಸೃಷ್ಟಿ ಅಪರೂಪಕ್ಕೆ ನಡೆಸುವ ಸಂಚು
ಅನಿಸುವುದು ನನಗೆ ಕೆಲವೊಮ್ಮೆ ಸೌಂದರ್ಯವೆಂದರೆ
ನಮ್ಮ ನಿರಾಶೆಗಳು ತಲಪುವ ತೀವ್ರತೆಯ ಅಂಚು

ದಟ್ಟ ಮೋಡಗಳಲ್ಲಿ ಘಟಿಸುವ ಮಿಂಚು
ಕಾದು ಸೋತು ಇನ್ನಿಲ್ಲವೆಂದಾಗ ಬರುವ ಮಳೆ
ಬೆಂದ ನೆಲದ ಪರಿಮಳವನ್ನು ಇತಿಹಾಸದ
ನೆನಪುಗಳನ್ನು ಒಯ್ಯುವ ಹೊಳೆ

ನಿನ್ನಿರವಿಗಿದೇ ಗುಟ್ಟು ಇದೇ ಸೆಳೆ
ಕೆಲವರಿಗೆ ಮೂರ್ಛೆಯನ್ನು ತರಬಹುದು
ಅದೂ ಪಡೆಯುವ ಒಂದು ವಿಧಾನ
ಎಷ್ಟೋ ಕ್ಷುದ್ರತೆಗಳನ್ನು ಹಾಯ್ದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಣದ ಮೂಲ ಪರಿಕಲ್ಪನೆಗಳು
Next post ನೆಲಮುಖಿ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…