ನೆಲಮುಖಿ

ಕಲ್ಲು ಗುಡ್ಡದಲ್ಲೂ ಕದರು ಕಂಡವರು
ಹಾಗಾಗೆ ಬರಡು ಭೂಮಿ ಈಗ
ನಂದನವನ
ದಾರಿಹೋಕರಿಗೆ ಹೊರಗಿನ ಚೆಂದ
ಕಾಣುವುದಷ್ಟೇ
ಆದರೆ ಅವರುಂಡಿದ್ದು ಬರಿಯ
ಕಷ್ಟ-ನಷ್ಟ ಮಾತ್ರ
ಬಿತ್ತುವುದಿಲ್ಲ ಎನ್ನುತ್ತಾ ಮತ್ತೆ
ಬಿತ್ತಿದರು, ಊಳಿದರು
ಅರಿ ಮಾಡಿದರು
ಹೀಗಿದ್ದು
ಕಣಜ ತುಂಬಿ ರತ್ನಗಂಬಳಿ
ಹೊದ್ದುಕೊಳ್ಳಲಿಲ್ಲ
ಬದಲು ಒಡಲ ಹಾಹಾಕಾರಕ್ಕೆ
ಹಾರೈಕೆಯಾದರು.
ತಂಪುಣಿಸಿ ತಣಿಸಿದರು ನೆಲದವ್ವನ
ಧಮನಿಯೊಳಗಣ ರುಧಿರ
ಬೆವರಹನಿ ಹರಿಸಿ
ದಿನದಿನಕ್ಕೆ ಕುಣಿಕೆಯ
ಬಲ ಒತ್ತಾಯ ಹೆಚ್ಚಾಗಿತ್ತೋ?
ಕೈಯ ಬಲ ನೆಲಮುಖಿಯಾಯ್ತೋ?
ನೆಲದ ಚೆಲುವು ಶಾಶ್ವತವೆನಿಸಿತೋ?
ಒಂದು ಅಳಿದರೆ ಮತ್ತೊಂದು
ಉಳಿದಿತೆಂದೋ?
ಬಿಗಿದುಕೊಂಡರು ಕೊರಳ ಸೆರೆ
ಬಿಟ್ಟು ಹೊರಟರು ಎಲ್ಲ ಹೊರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂನ್ ಮೂನ್ ಸೇನಳಿಗೆ
Next post ಶಬರಿ – ೧೫

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys