Home / ಕವನ / ಕವಿತೆ / ಇರುವೆಗಳ ಜಗತ್ತು

ಇರುವೆಗಳ ಜಗತ್ತು

ಊಟವಾಗಿ ಕುಳಿತಿದ್ದೆ ಹೊರಜಗಲಿಯಲ್ಲಿ ಇಳಿಮಧ್ಯಾಹ್ನ
ಪಡುಗಡಲ ಬೀಸುಗಾಳಿಗೆ ಬೇಕೊ ಬೇಡವೊ ಎಂದು
ಬರುವಂಥ ತೂಕಡಿಕೆ. ಆಗ ಕಂಡುದು ಅಂಗಳದಲ್ಲಿ

ವಲಸೆಯೆದ್ದಂತಿದ್ದ ಇರುವೆಗಳ ಸಾಲೊಂದು
ಒಂದು ನೆಲೆಯಿಂದ ಇನ್ನೊಂದು ನೆಲೆಗೆ
ಧಾವಿಸುತಿದ್ದುವು ಅವು ತ್ವರಿತಗತಿಯಲ್ಲಿ

ಯಾವುದೊ ಗಂಡಾಂತರದಿಂದ ಓಡಿಹೋಗುವ ಹಾಗೆ
ಎದ್ದು ಬಿದ್ದೇಳುತ್ತ ಸಾಗುತಿದ್ದುವು; ಕೆಲವು ಏನೋ ಮರೆತು
ಬಂದಂತೆ ಮರಳುತಿದ್ದುವು ಅಷ್ಟು ದೂರ

ಎಲ! ಎಲ! ಯಾಕಿಷ್ಟು ಆತುರ? ಏನಾಯಿತು?
ಯಾವ ಅಪಾಯ ಬಂತು ಈ ಹೊತ್ತಲ್ಲದ ಹೊತ್ತು
ಎಂದು ತಡೆದು ಕೇಳುವ ಮನಸ್ಸಾಯಿತಾದರೂ

ಅನಿಸಿತು-ಇದು ಇರುವೆಗಳ ಜಗತ್ತು
ಅವು ಹೊತ್ತು ಮುಗ್ಗರಿಸುವ ಮೂಟೆಗಳ ಒಜ್ಜೆ
ನನ್ನ ಕಲ್ಪನೆಗೆ ಕೂಡ ಮೀರಿದ್ದು

ಆದರೂ ಊಹಿಸಬಲ್ಲೆ ನನ್ನ ರಕ್ಕಸ ಹೆಜ್ಜೆ
ಹಠಾತ್ತನೆ ಎರಗುವುದನ್ನು ಈ ಜಗತ್ತಿನ ಮೇಲೆ
ಇಂಥದೇ ಇನ್ನೊಂದು ದಿನ ಇನ್ನೊಂದು ಕಡೆ

ಮನುಷ್ಯ ಕಣ್ಣುಗಳನ್ನು ಮುಸುಕಿದ ವೇಳೆ
ಮನುಷ್ಯ ಜಗತ್ತಿನ ಮಾಯೆ-ಸಕಲರನ್ನೂ
ಕಾಪಾಡಬೇಕು ತೀರ್‍ಥಂಕರನ ದಯೆ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...