ಕಳಚಿಕೊಂಡವರು

ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ
ಕೈಯಲ್ಲಿ ಜಾರಿಹೋದವು ಸ್ಪರ್ಶಕೆ
ಸಿಗದ ಶಬ್ದಗಳು ಒಮ್ಮೆಲೇ ಬಂದು
ಎರಗಿದ ನೆನಪುಗಳು ಯಾವುದೋ
ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ
ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು
ಬೀದಿಯಲ್ಲಿ ಬೇಸಿಗೆ ಬಿಸಿಲ ಮರೀಚಿಕೆ.

ನಿಂತಲ್ಲಿ ಕುಂತಲ್ಲಿ ಕನ್ನಡಿಯಾಗದ
ನಿನ್ನ ಬಿಂಬ ಪ್ರತಿಫಲಿಸಲಾರದೇ ಮಂಕು
ಆವರಿಸಿದ ಆಲದ ಮರದ ಬಿಳಲುಗಳು
ಅಡಿಯಲ್ಲಿ ದಾಖಲಾಗಲಿಲ್ಲ ಪ್ರೀತಿ
ಮಾತುಗಳಾಡದ ಸಂಜೆ ಮೌನದಲಿ
ರೂಪವಿಲ್ಲದ ಚಿತ್ರಗಳು ಮಾಸಿ ಹೋದವು
ಚಳಿಗೆ ಉದುರಿ ಬಿದ್ದ ಕಂದು ಎಲೆಗಳು.

ಜೀವದಲೆಗಳು ಬಿತ್ತಿದ ಅಂತರ್ಜಲದ
ಭಾವಿ ಒಬ್ಬೊಬ್ಬರಾಗಿ ಇಳಿದು ಕದಡಿ
ಕೆಸರ ತಳ ಮರೆತುಬಿಟ್ಟ ಪಾಠ
ಅರಿವಿಲ್ಲದ ವ್ಯಾಪ್ತಿಯ ಗೆರೆಗಳು
ಲೋಕದ ಟೊಂಕು ತಿದ್ದುವ ಹಂಗು
ಮನವ ಸಂತೈಸಿಕೊಳ್ಳಿದ ಪರಿಗಳು
ಮಳೆ ಹನಿಗೆ ಹಸಿಯಾಗದ ಮನ.
ಕಳಚಿಕೊಂಡು ಮರವಾಗುವ ಸಂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹದಿಹರೆಯದವರ ಶಕ್ತಿ ಸಾಮರ್ಥ್ಯಗಳ ಶತ್ರು : ಖಿನ್ನತೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೪

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…