ಅಮರ ಪ್ರೇಮಿಗಳು

ಪ್ರೇಮಿಯೊಬ್ಬಳು ಯುದ್ಧ ರಂಗದಲ್ಲಿ ಮಡಿದ ತನ್ನ ಪ್ರಿಯಕರನ ಕಳೇಬರವನ್ನು ಹುಡುಕುತ್ತಾ ಬರುತ್ತಾಳೆ. ಶರತ್ಕಾಲದ ಹಳದಿ ಕೆಂಪು ಹಣ್ಣೆಲೆಗಳು ಉದರಿ, ಭೂಮಿಗೆ ಒಣಗಿದೆಲೆಯ ಹೊದಿಕೆ ಹೊದಿಸಿ ಬೋಳು ಮರಗಳು ನಿರ್ಜೀವವಾಗಿ ನಿಂತಿವೆ. ಪ್ರೇಮಿ ಎಲೆ ಎಲೆಯ ಗುಪ್ಪೆಯನ್ನು ಸರಿಸಿ ತನ್ನ ಪ್ರಿಯಕರನಿಗಾಗಿ ಹುಡುಕುತ್ತಾಳೆ. ಎಲೆಗಳ ಚಾದರದ ಕೆಳಗೆ ಮಡಿದ ಸೈನಿಕರ ಕೈಗಳಲ್ಲಿದ್ದ ಬಂದೂಕುಗಳು ಮಾತ್ರ ಕಾಣುತ್ತವೆ. ಬೋಳು ಮರಗಳ ಮಧ್ಯೆ ತನ್ನ ಬಾಳಿನ ಗೋಳನ್ನು ತಡೆಯಲಾರದೆ ಕಣ್ಣೀರು ಸುರಿಸುತ್ತಾ ಬರುವಾಗ ಎದುರು ಹರಿದು ಬರುತ್ತದೆ ಒಂದು ಜೀವ ನದಿ. ಪ್ರೇಮಿ ಅಗಲಿಕೆ ತಾಳಲಾರದೆ ನದಿಗೆ ಹಾರಿದಾಗ ತೇಲಿಬಂದು ಅವಳನ್ನು ಅಪ್ಪುತ್ತದೆ ಸಾವನ್ನಪ್ಪಿದ ಅವಳ ಪ್ರಿಯಕರನ ಕಳೇಬರ. ಜೀವ ತುಂಬಿದ ಹರಿಯುವ ನದಿಯಲ್ಲಿ ಸಾವು ನೋವು ಎರಡು ಒಂದಾಗಿ ಪ್ರೇಮಿಗಳು ತೇಲುತ್ತಾ ಹೋಗುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೬೪
Next post ಸೈಡ್ ಎಫೆಕ್ಟ್

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys