ಎಂದಾದರೊಂದು ದಿನ

ಎಂದಾದರೊಂದು ದಿನ
ಬರುವೆ ಏನೆ ಕೇಳಲೇ
ಬಾಗಿಲ ತೆರೆದು ಬೆಳಕನ್ನು ನೀಡಿ
ಇಬ್ಬನಿಯ ತಂಪಿಗೆ ಕಂಪನು ಚೆಲ್ಲಿ ||

ಹೊಸಿಲ ಮೆಟ್ಟಿ ಬರಲು ನನ್ನರಸಿಯೆ
ನಿನ್ನ ಮೊದಲ ಹೆಜ್ಜೆಗೆ ಕಾಲ್ ಮಿಂಚಿನ ಬೆಳ್ಳಿ
ಬೆಳಕಾಗಿ ಆವರಿಸಿ ಮಿಂಚಿಹುದೆ ನನ್ನಂಗಳ
ಹೊಂಗಿರಣವು ನಾಚಿ ಬಾಗಿರಲು ಧರೆಗೆ
ನೆನಪಾಗಿ ಪ್ರತಿಕ್ಷಣ ತುಡಿಯುವುದು ಸರಿಯೇನೆ || ಎ ||

ಭಾವವೂ ನೀನು ಅನುರಾಗವೂ ನೀನು
ಬಿದಿಗೆ ಚಂದ್ರತಾರ ಹೂನಗೆಯು ನೀನು
ಎನ್ನ ಜೀವಕೆ ಚೈತನ್ಯ ತುಂಬಿ
ಭಾವದೊಲುಮೆ ಸೋಪಾನದಲಿ ವಿರಮಿಸಿ
ಶೃತಿಯ ಮೀಟಿ ಮನವಾ ಕಾಡುವುದು ಸರಿಯೇನೆ || ಎ ||

ಕಲ್ಪನೆಯೂ ಕನಸೋ ನಾನರಿಯೇ
ನನಸಾಗುವುದೆಂತೋ ಕಾದಿರುಳ ಹಾದಿಯಲಿ
ಮಲ್ಲಿಗೆ ಹೂಹಾಸಿ ಬಾಗಿಲಲಿ ಕಾದಿಹೆ
ಕಾಮಿನಿ ಭಾಮಿನಿ ಎನ್ನ ಮನದರಸಿಯೆ
ನಿನ್ನ ಬರುವಿಕೆಯ ಸಡಗರದೆ ಮರೆತೆ ನಾ ನನ್ನನೇ
ಎಂದು ಬರುವೆ ಹೇಳಲೇ || ಎ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋರು-ಬೀರು
Next post ಬಾಲ ಗೋಪಾಲ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys