Home / ಕವನ / ಕವಿತೆ / ಸಾಕರಿ ಕಟ್ಟು ಮತ್ತು ಹೆಂಗಸು

ಸಾಕರಿ ಕಟ್ಟು ಮತ್ತು ಹೆಂಗಸು

ಮಬ್ಬಗತ್ತಲೆವರೆಗೂ ತದ್ವತ್
ಕೆಲಸ
ಸಾಕರಿ ಕೋಲಿಗೂ
ಸಾಕರಿ ಹುಲ್ಲಿಗೂ ಹಗೆ
ತೀರಿಸುವ ಅವಳ ಕೈ ಕುಣಿತ

ಭತ್ತ ಬಡಿದ ಹುಲ್ಲಿಗೆ ಕಟ್ಟು ಕಟ್ಟುವ ಆಕೆ
ಸಾಕರಿ ಕಟ್ಟಿನ ಲೆಕ್ಕ
ಇಡುತ್ತಾಳೆ
ಒಡೆಯ ಕೊಡುವ ಕೂಲಿಗಾಗಿ

ಬೊಕ್ಕೆಯೆದ್ದ ಕೈಗಳು
ಬಿರುಸಾಗುತ್ತಿವೆ ಕಟ್ಟು ಬಡಿದು
ಕ್ರಮೇಣ

ಆಗಾಗ ಒಡತಿಯಿಂದ ಎಣ್ಣೆ ಬೇಡಿ ಪಡೆವ ಆಕೆ
ತಿಕ್ಕಿಕೊಳ್ಳುತ್ತಾಳೆ ಕೈಗಳಿಗೆ
“ಹಾಯ್” ಎನ್ನುವಂತೆ
“ನನಗೆ ನಾನೇ, ಗೋಡೆಗೆ ಮಣ್ಣೆ”
ಉಸುರುತ್ತಾಳೆ ಆಗಾಗ

ಕೇಯ್ಯಿಂದ ಬೇರ್ಪಟ್ಟ ಭತ್ತಕ್ಕೆ
ಕಣಜಕ್ಕೆ ಹಾರುವ ಆಸೆ
ಜೊಳ್ಳು ಸೇರದಂತೆ ಹೊಟ್ಟು
ಹಾರಿಸುವಾಕೆಯ ಮಂತ್ರ ಮುಗ್ದ ಶೈಲಿ
ಒರೆ ಸೊಂಟದ ಹೆಣ್ಣ
ಕೈಬಳೆಯ ಲಯಬದ್ಧ ಉಲಿತ
ಗಾನ ಲೋಕದ ಪರ್ಯಾಯ
ಮತ್ತೀಗ ಕಳವನ್ನೆಲ್ಲಾ ಗುಡಿಸಿ
ಇಡುತ್ತಾಳೆ ಅರೆಬೆರೆ ಜೊಳ್ಳು
ಬೆರೆತ ಭತ್ತವನ್ನೆಲ್ಲಾ ಒಟ್ಟು
ಮಾಡಿ ಸೇರಿಸುತ್ತಾಳೆ ಕೈ ಚೀಲಕ್ಕೆ
ನಡಿಗೆ ಮನೆ ಕಡೆಗೆ

ದಣಪೆಯಲ್ಲಿ ದಡಿಯ
ಯರ್‍ರಾಬಿರ್‍ರಿ ಕುಡಿದು
ತಡಕ್ಕಾಡುತ್ತಿದ್ದಾನೆ ಮನೆ ಬಾಗಿಲು

ಭಾಗ್ಯ ಜ್ಯೋತಿಯ ಬೆಳಕಿನಲ್ಲಿ
ತಂದ ಭತ್ತವ ಕುಟ್ಟಿ
ಅನ್ನಕ್ಕಿಟ್ಟಿದ್ದಾಳೆ ಆಕೆ
ಇರುಳುಗತ್ತಲೆಯಲ್ಲಿ ಸಂಚಿಯ
ಕವಳ ತೆಗೆದು ಬಾಯಿಗಿಡುತ್ತಾಳೆ
ಪುರಸೊತ್ತು ಮಾಡಿ

ಅನ್ನದ ನಿಗಿ ನಿಗಿ ಬೆಂಕಿಯ
ಪಕ್ಕ ಬೆಚ್ಚಗೆ ಕುಳಿತು ಮಗ್ಗಿ
ಓದುತ್ತಿವೆ ಪುಟಾಣಿಗಳೆರಡು


Tagged:

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...