Home / ಕವನ / ಕವಿತೆ / ಸಾಕರಿ ಕಟ್ಟು ಮತ್ತು ಹೆಂಗಸು

ಸಾಕರಿ ಕಟ್ಟು ಮತ್ತು ಹೆಂಗಸು

ಮಬ್ಬಗತ್ತಲೆವರೆಗೂ ತದ್ವತ್
ಕೆಲಸ
ಸಾಕರಿ ಕೋಲಿಗೂ
ಸಾಕರಿ ಹುಲ್ಲಿಗೂ ಹಗೆ
ತೀರಿಸುವ ಅವಳ ಕೈ ಕುಣಿತ

ಭತ್ತ ಬಡಿದ ಹುಲ್ಲಿಗೆ ಕಟ್ಟು ಕಟ್ಟುವ ಆಕೆ
ಸಾಕರಿ ಕಟ್ಟಿನ ಲೆಕ್ಕ
ಇಡುತ್ತಾಳೆ
ಒಡೆಯ ಕೊಡುವ ಕೂಲಿಗಾಗಿ

ಬೊಕ್ಕೆಯೆದ್ದ ಕೈಗಳು
ಬಿರುಸಾಗುತ್ತಿವೆ ಕಟ್ಟು ಬಡಿದು
ಕ್ರಮೇಣ

ಆಗಾಗ ಒಡತಿಯಿಂದ ಎಣ್ಣೆ ಬೇಡಿ ಪಡೆವ ಆಕೆ
ತಿಕ್ಕಿಕೊಳ್ಳುತ್ತಾಳೆ ಕೈಗಳಿಗೆ
“ಹಾಯ್” ಎನ್ನುವಂತೆ
“ನನಗೆ ನಾನೇ, ಗೋಡೆಗೆ ಮಣ್ಣೆ”
ಉಸುರುತ್ತಾಳೆ ಆಗಾಗ

ಕೇಯ್ಯಿಂದ ಬೇರ್ಪಟ್ಟ ಭತ್ತಕ್ಕೆ
ಕಣಜಕ್ಕೆ ಹಾರುವ ಆಸೆ
ಜೊಳ್ಳು ಸೇರದಂತೆ ಹೊಟ್ಟು
ಹಾರಿಸುವಾಕೆಯ ಮಂತ್ರ ಮುಗ್ದ ಶೈಲಿ
ಒರೆ ಸೊಂಟದ ಹೆಣ್ಣ
ಕೈಬಳೆಯ ಲಯಬದ್ಧ ಉಲಿತ
ಗಾನ ಲೋಕದ ಪರ್ಯಾಯ
ಮತ್ತೀಗ ಕಳವನ್ನೆಲ್ಲಾ ಗುಡಿಸಿ
ಇಡುತ್ತಾಳೆ ಅರೆಬೆರೆ ಜೊಳ್ಳು
ಬೆರೆತ ಭತ್ತವನ್ನೆಲ್ಲಾ ಒಟ್ಟು
ಮಾಡಿ ಸೇರಿಸುತ್ತಾಳೆ ಕೈ ಚೀಲಕ್ಕೆ
ನಡಿಗೆ ಮನೆ ಕಡೆಗೆ

ದಣಪೆಯಲ್ಲಿ ದಡಿಯ
ಯರ್‍ರಾಬಿರ್‍ರಿ ಕುಡಿದು
ತಡಕ್ಕಾಡುತ್ತಿದ್ದಾನೆ ಮನೆ ಬಾಗಿಲು

ಭಾಗ್ಯ ಜ್ಯೋತಿಯ ಬೆಳಕಿನಲ್ಲಿ
ತಂದ ಭತ್ತವ ಕುಟ್ಟಿ
ಅನ್ನಕ್ಕಿಟ್ಟಿದ್ದಾಳೆ ಆಕೆ
ಇರುಳುಗತ್ತಲೆಯಲ್ಲಿ ಸಂಚಿಯ
ಕವಳ ತೆಗೆದು ಬಾಯಿಗಿಡುತ್ತಾಳೆ
ಪುರಸೊತ್ತು ಮಾಡಿ

ಅನ್ನದ ನಿಗಿ ನಿಗಿ ಬೆಂಕಿಯ
ಪಕ್ಕ ಬೆಚ್ಚಗೆ ಕುಳಿತು ಮಗ್ಗಿ
ಓದುತ್ತಿವೆ ಪುಟಾಣಿಗಳೆರಡು


Tagged:

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...