Home / ಕವನ / ಕವಿತೆ / ಸಾಕರಿ ಕಟ್ಟು ಮತ್ತು ಹೆಂಗಸು

ಸಾಕರಿ ಕಟ್ಟು ಮತ್ತು ಹೆಂಗಸು

ಮಬ್ಬಗತ್ತಲೆವರೆಗೂ ತದ್ವತ್
ಕೆಲಸ
ಸಾಕರಿ ಕೋಲಿಗೂ
ಸಾಕರಿ ಹುಲ್ಲಿಗೂ ಹಗೆ
ತೀರಿಸುವ ಅವಳ ಕೈ ಕುಣಿತ

ಭತ್ತ ಬಡಿದ ಹುಲ್ಲಿಗೆ ಕಟ್ಟು ಕಟ್ಟುವ ಆಕೆ
ಸಾಕರಿ ಕಟ್ಟಿನ ಲೆಕ್ಕ
ಇಡುತ್ತಾಳೆ
ಒಡೆಯ ಕೊಡುವ ಕೂಲಿಗಾಗಿ

ಬೊಕ್ಕೆಯೆದ್ದ ಕೈಗಳು
ಬಿರುಸಾಗುತ್ತಿವೆ ಕಟ್ಟು ಬಡಿದು
ಕ್ರಮೇಣ

ಆಗಾಗ ಒಡತಿಯಿಂದ ಎಣ್ಣೆ ಬೇಡಿ ಪಡೆವ ಆಕೆ
ತಿಕ್ಕಿಕೊಳ್ಳುತ್ತಾಳೆ ಕೈಗಳಿಗೆ
“ಹಾಯ್” ಎನ್ನುವಂತೆ
“ನನಗೆ ನಾನೇ, ಗೋಡೆಗೆ ಮಣ್ಣೆ”
ಉಸುರುತ್ತಾಳೆ ಆಗಾಗ

ಕೇಯ್ಯಿಂದ ಬೇರ್ಪಟ್ಟ ಭತ್ತಕ್ಕೆ
ಕಣಜಕ್ಕೆ ಹಾರುವ ಆಸೆ
ಜೊಳ್ಳು ಸೇರದಂತೆ ಹೊಟ್ಟು
ಹಾರಿಸುವಾಕೆಯ ಮಂತ್ರ ಮುಗ್ದ ಶೈಲಿ
ಒರೆ ಸೊಂಟದ ಹೆಣ್ಣ
ಕೈಬಳೆಯ ಲಯಬದ್ಧ ಉಲಿತ
ಗಾನ ಲೋಕದ ಪರ್ಯಾಯ
ಮತ್ತೀಗ ಕಳವನ್ನೆಲ್ಲಾ ಗುಡಿಸಿ
ಇಡುತ್ತಾಳೆ ಅರೆಬೆರೆ ಜೊಳ್ಳು
ಬೆರೆತ ಭತ್ತವನ್ನೆಲ್ಲಾ ಒಟ್ಟು
ಮಾಡಿ ಸೇರಿಸುತ್ತಾಳೆ ಕೈ ಚೀಲಕ್ಕೆ
ನಡಿಗೆ ಮನೆ ಕಡೆಗೆ

ದಣಪೆಯಲ್ಲಿ ದಡಿಯ
ಯರ್‍ರಾಬಿರ್‍ರಿ ಕುಡಿದು
ತಡಕ್ಕಾಡುತ್ತಿದ್ದಾನೆ ಮನೆ ಬಾಗಿಲು

ಭಾಗ್ಯ ಜ್ಯೋತಿಯ ಬೆಳಕಿನಲ್ಲಿ
ತಂದ ಭತ್ತವ ಕುಟ್ಟಿ
ಅನ್ನಕ್ಕಿಟ್ಟಿದ್ದಾಳೆ ಆಕೆ
ಇರುಳುಗತ್ತಲೆಯಲ್ಲಿ ಸಂಚಿಯ
ಕವಳ ತೆಗೆದು ಬಾಯಿಗಿಡುತ್ತಾಳೆ
ಪುರಸೊತ್ತು ಮಾಡಿ

ಅನ್ನದ ನಿಗಿ ನಿಗಿ ಬೆಂಕಿಯ
ಪಕ್ಕ ಬೆಚ್ಚಗೆ ಕುಳಿತು ಮಗ್ಗಿ
ಓದುತ್ತಿವೆ ಪುಟಾಣಿಗಳೆರಡು


Tagged:

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...