ಹೆಸರು ತಿಳಿಯದ ವಸ್ತುಗಳು

(ಬಿ. ಜಿ. ಎಲ್. ಸ್ವಾಮಿಯ ನೆನಪಿಗೆ)

ಹೆಸರು ತಿಳಿಯದ ವಸ್ತುಗಳು ಕಾಣಸಿಕ್ಕಿದರೆ
ಹೆಸರಿಗಾಗಿ ಹುಡುಕುತ್ತೇವೆ.
ಹೆಸರಿಲ್ಲದೆ ಗುರುತಿಸುವುದು
ಗುರುತಿಸದೆ ಕರೆಯುವುದು
ಅಸಾಧ್ಯ.

ಸಾರ್ತೃ ತನ್ನ ಆತ್ಮಕಥೆಯಲ್ಲಿ ಹೀಗನ್ನುತ್ತಾನೆ:
ವಿಶ್ವದ ವಸ್ತುಗಳೆಲ್ಲ ಹೆಸರು ಬೇಡುತ್ತ
ನನ್ನ ಬಳಿ ಬಂದಂತಾಯಿತು.
ಹೆಸರಿಡುವ ಮೂಲಕ ಅವನ್ನೆಲ್ಲ
ನನ್ನದಾಗಿಸಿದೆ ಅಂದುಕೊಂಡಿದ್ದೇನೆ;
ಈ ಭ್ರಮೆಯೊಂದು ಇಲ್ಲದಿರುತ್ತಿದ್ದರೆ
ನಾನು ಬರೆಯುತಿರಲಿಲ್ಲ.

ಬೇಲಿಯ ಆಚೀಚೆ ಬೆಳೆದಿದೆ
ಕಾಡ ಹೂಗಳು,
ಕೆಲವೊಮ್ಮೆ ಅದನ್ನು ಆರಿಸಿ
ನನ್ನ ಕೋಣೆಯಲ್ಲಿ ಇರಿಸಿ ಹೋಗುತ್ತಾಳೆ
ಒಬ್ಬಳು.
ಹೆಸರುಗಳನ್ನು ಮರೆತ ನಾನು
ಅದನ್ನು ನನ್ನದಾಗಿಸುವುದು ಹೇಗೆ?
ರಾತ್ರಿ ಮಲಗಿ ಏಳುವ ಹೊತ್ತಿಗೆ
ಅವು ಉದುರಿ ಹೋಗಿರುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಕರಿ ಕಟ್ಟು ಮತ್ತು ಹೆಂಗಸು
Next post ಕಲೆ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…