ಶ್ರೀ ಶಿವಾಪರಾಧ ಸ್ತೋತ್ರ

ಜಯತು ಗಣಪತಿ ಜ್ಞಾನ ದಿನಮಣಿ
ಜಯತು ಸರಸ್ವತಿ ವಾಗ್ವಿಲಾಸಿನಿ
ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ
ಜಯತು ಕವಿವರ ವ್ಯಾಸ ಶುಕಮುನಿ
ಜಯತು ವಾಲ್ಮೀಕಿ ಋಷಿ ಕಲಾಗ್ರಣಿ
ಜಯತು ಶಂಕರಭಾರ್ತಿ ಗುರುವಿನ ಪಾದಕೆರಗುವೆ ||೧||

ಶಂಕರನ ಅವತರಿಸಿ
ಶಂಕರಾಚಾರ್ಯಾಗಿ ಬಂದನು
ಪಂಕವನು ತೊಳೆದೆಲ್ಲ ಮನಸಿನ ಬಿಂಕವನು ಬಿಡಿಸಿ |
ಕಿಂಕರವ ಪಾವನವ ಮಾಡುತ
ಶಂಕೆಯಿಲ್ಲದ ಪದದೊಳಿಟ್ಟನು
ಡೊಂಕುಹಾದಿಯ ಬಿಡಿಸಿ ಕಲಿಯುಗದಲ್ಲಿ ಗುರುವಾಗಿ || ೨ ||

ಉಣ್ಣದೂಟವನುಣಿಸಿದನು ಗುರು
ತನ್ನ ಶಿಷ್ಯರ ಗುಣವ ನೋಡದೆ
ಮನ್ನಣೆಯ ಕೊಟ್ಟವರನೀ ಭವಜಲದಿ ದಾಂಟಿಸಿದಾ |
ಇನ್ನು ಗುರುವಿಗೆ ಸರಿಯಗಾಣೆನು
ಬೆನ್ನು ಬಿದ್ದಂಥವರ ರಕ್ಷಿಪ
ಉನ್ನತೋನ್ನತ ಮಹಿಮೆ ಪಾಮರನುಡಿಯಲೆನ್ನಳವೆ || ೩ ||

ತಾನು ಶಂಕರಭಾರ್ತಿ ಗುರುವಿನ
ನಾನಾಬಗೆಯನು ತಾಪ ಲಕ್ಷಣ
ಮಾನ್ವಜನ್ಮಕೆ ಬಂದುದೆಲ್ಲವ ಭೋಗಿಸಿದ ಪರಿಯ |
ತಾನು ಬಾಲ್ಯಾವಸ್ಥೆ ಮೊದಲಾದ್ದೇನು
ವ್ಯಥೆಯಾಗುವದು ತನುವಿಗೆ
ಸ್ವಾನುಭಾವದಿ ನುಡಿಯುತಿಹ ಪರೋಪಕಾರಾಥ೯ ||೪||

ಮನುಜರಾದವರೆಲ್ಲ ಕೇಳ್ವದು
ನೆನಪಿನಲಿ ಆಪರಾಧಸ್ತೋತ್ರವ
ಅನುದಿನದಿ ಮಾಡುವದು ನಿತ್ಯಾನಿತ್ಯಾ ವಿವರವನು |
ತನುತ್ರಯಕೆ ಸಾಕ್ಷಾತ ದೇವನ
ತನುವಿನಲಿ ಕಾಣುವುದೆ ಸಾಥ೯ಕ
ಎನಗೆ ಮತಿಯಿದ್ದಷ್ಟು ಪ್ರಾಕೃತಭಾಷೆಯಲಿ ನುಡಿವೆ ||೫||

ಮೊದಲು ಮಾಡಿದ ಕಮ೯ದಿಂದಲಿ
ಒದಗಿ ಬಂದೆನು ತಾಯಿಯುದರದಲಿ
ಪುದಿದು ಮಲಮೂತ್ರದಲಿನೊಂದೆನು ಜಠರಾಗ್ನಿಯಲಿ |
ಒದರಲಿಕೆ ಶಕ್ತಿಲ್ಲ ದುಃಖದ
ಸದನದಲಿ ಮುಳುಗಿದೆನು ಶಿವ ಶಿವಾ
ಇದಕೆ ಎನ್ನಯ ತಪ್ಪು ನೋಡದೆ ಕ್ಷಮಿಸು ಮಹದೇವಾ ||೬||

ಬಾಲ್ಯತನದಲಿ ದುಃಖ ಬಹಳ
ಕಾಲದಲಿ ತನುವೇಳದಿರಲು
ಮೊಲೆಹಾಲು ಕುಡಿಯಲು ಶಕ್ತಿ ನಾಸ್ತಿಯು ಇಂದ್ರಿಯಂಗಳಿಗೆ |
ಮೇಲೆ ರೋಗದ ಹೇಸಿಕೆಯು
ಕಣ್ಣಾಲೆ ನೊಣಗಳು ಕಡಿಯೆರದನದಿ
ನೀಲಕಂಠನ ಸ್ಮರಣೆತಪ್ಪಿದೆ ಕ್ಷಮಿಸು ಮಹದೇವಾ ||೭||

ತನುವು ಪ್ರಾಯದ ಪಂಚವಿಷಯದ
ಮೊನೆಯ ಬಾಣವು ತಾಗಲಾಕ್ಷಣ
ನೆನಪು ಹೋದುದು ಮಾನ ಗವ೯ದ ಗಿರಿಯನಡರಿದೆನು |
ಮನಸಿನಲಿ ವಿವೇಕವಿಲ್ಲದೆ ಧನವು
ಮಕ್ಕಳು ಮಡದಿಯರ ಸವಿ
ಎನಗೆ ಹತ್ತಲು ಮರತ ತಪ್ಪನು ಕ್ಷಮಿಸು ಮಹದೇವ || ೮ ||

ಒದಗಿ ಮುಪ್ಪದು ಬರಲು ಕಾಮತಿ
ಕದಲುವವು ಬಲು ಇಂದ್ರಿಯಂಗಳು
ಚದುರವದು ಮನ ಭ್ರಾಂತಿ ಹೋಗದು ವ್ಯಾಧಿ ಸಮನಿಸಲು|
ಉದರದೊಳು ಬರೆ ಸುಳ್ಳುಮೋಹವು
ತುದಿಗೆ ದೂರ್ಜಟೆ ಧ್ಯಾನಕೊದಗ
ಇದಕೆ ಎನ್ನಯ ತಪ್ಪುನೋಡದೆ ಕ್ಷಮಿಸು ಮಹದೇವ ||೯||

ಏನು ಅರಿಯೆನು ಸ್ಮಾರ್ತಕರ್ಮದ
ಹೀನನಾದೆನು ಕುಲದ ನೀತಿಗೆ
ತಾನೆ ಘಟಿಸುವ ಪ್ರತ್ಯವಾಯದ ಸ್ಮರಣೆಯೆನಗಿಲ್ಲ |
ಜ್ಞಾನತತ್ವ ವಿಚಾರ ಬ್ರಹ್ಮದ
ಕೂನ ಹಾದಿಯ ಶ್ರವಣ ಮನನದ
ಜ್ಞಾನಶೂನ್ಯನ ತಪ್ಪನು ಸರ್ವವು ಕ್ಷಮಿಸು ಮಹದೇವ||೧೦||

ಉದಯಕಾಲದಿ ಸ್ನಾನ ಸಂಧ್ಯಾ-
ವಿಧಿಯನಲ್ಲವ ಮುಗಿಸಿ ಭಾವಧಿ
ನದಿಯ ಉದಕದಿ ಮಾಡಲಿಲ್ಲವು ಶಿವಗೆ ಮಜ್ಜನವು |
ಮುದದಿ ಪೂಜಿಸಿ ಬಿಲ್ವಪತ್ರದಿ
ಒದಗಿಸುವ ಮಲಸುಗಂಧಪುಷ್ಪವ
ಇದನೇರಿಸದಿರ್ದ ತಪ್ಪನು ಕ್ಷಮಿಸು ಮಹದೇವ ||೧೧||

ತಂದು ಮಧುಘೃತಪಯವು ಶತಘಟ
ಇಂದುಧರನಿಗೆ ಎರಿಯಲಿಲ್ಲವು
ಚಂದನವೆ ಮೊದಲಾದ ಲೇಪನ ಕನಕಭೂಷಣವ |
ಇಂದು ಪೂಜಿಸಿ ಆನ್ನ ಚತುರ್ವಿಧ-
ದಿಂದಲರ್ಪಿಸಿ ಧೂಪ ಕರ್ಪೂರ
ಚಂದದೀಪವ ಬೆಳಗದಿಹಮರೆ ಕ್ಷಮಿಸಲು ಮಹದೇವ ||೧೨||

ಚಿತ್ತದಲಿ ಶಿವಧ್ಯಾನ ಮಾಡೆನು
ಮತ್ತೆ ನೀಡೆನು ಧನವ ದ್ವಿಜನರಿಗೆ
ಹೊತ್ತಿದಗ್ನಿಗೆ ಹವನ ಅರ್ಪಿಸಿ ಬೀಜಮಂತ್ರದಲಿ |
ನಿತ್ಯ ಗಂಗಾವಾಸದಲಿರೆ
ಉತ್ತಮದ ವೃತ ರುದ್ರಜಪವನು
ಸತ್ಯದಲಿ ಸಾಧಿಸಿದ ತಪ್ಪನು ಕ್ಷಮಿಸು ಮಹದೇವ ||೧೩||

ಸಂಗ ವಿರಹಿತನಾಗಿ ಗುಣಗಳ
ಹಿಂಗಿ ಮೋಹವ ಕಳಿಯ ಕತ್ತಲೆ
ಕಂಗಳಿಂದಲೆ ನಾಸಿಕಾಗ್ರವ ನೋಡಿ ವಾಸನೆಯ |

ನುಂಗಿದ್ಯೆತ್ಯವ ಉನ್ಮನಿಂದಲಿ
ಅಂಗದೊಳಗಿನ ಮಲಿನ ಕಳೆಯಲು
ಮಂಗಳಾತ್ಮನ ಸ್ಮರಣೆ ತಪ್ಪಿದೆ ಕ್ಷಮಿಸು ಮಹದೇವ ||೧೪||

ಕುಳಿತು ಸ್ವಸ್ಥಾನದಲ್ಲಿ ತನ್ನೊಳು
ಸುಳಿವ ಗಾಳಿಯ ಸೂಕ್ಷ್ಮಮಾರ್ಗಕೆ
ಎಳೆದು ಈಡಾಪಿಂಗಳೆರಡು ಸುಷುಮ್ನ ಮಾರ್ಗದಲಿ |
ಹೊಳೆವ ಪ್ರಣವಜ್ಯೋತಿ ರೂಪ
ಒಳಗೆ ಬ್ರಹ್ಮಾರಂದ್ರದಲಿ ಮನ
ಮುಳುಗಿಸಿದ ಆಪರಾಧಯೆನ್ನದು ಕ್ಷಮಿಸು ಮಹದೇವ ||೧೫||

ಶಿರಸದಲಿ ಚಂದ್ರಮನ ಸ್ಮರರಿಪು
ಪರಮಪಾವನ ಗಂಗೆ ಜಡೆಯಲಿ
ಉರಗಭೂಷಣ ಕಟಕ ಕಿವಿಯಲಿ ನೇತೃದಲಿ ಆಗ್ನಿ |
ಧರಿಸಿಹನು ಕರಿಚರ್ಮದಂಬರ
ನಿರುಪಮನೆ ತ್ರೈಲೋಕ್ಯಶೋಭಿಪ
ಸ್ಮರಿಸುವೆನೂ ಮೋಕ್ಷಾರ್ಥಲೋಸುಗ ಕರ್ಮಭಯದಿಂದಾ ||೧೬||

ತನಗೆ ದನ-ಕರವು ಇದ್ದರೇನವು
ತನಗ ಹಯಕರಿ ಇದ್ದರೇನವು
ತನಗೆ ರಾಜ್ಯವು ಪುತ್ರ ಮಿತ್ರ ಕಳತ್ರವಿರಲೇನ |
ತನಗೆ ಧನವದು ಇದ್ದರೇನವು
ಕ್ಷಣವು ಸ್ಥಿರವಲ್ಲವೆಂದು ಜರಿಯುತ
ಮನದೊಳಗೆ ಗುರುವಾಖ್ಯದಿಂದಿಲಿ ಭಜಿಸುವೆನು ಶಿವನ ||೧೭||

ದಿನದಿನಕೆ ಆಯುಷ್ಯ ಕ್ಷೀಣವು
ತನಗೆ ಪ್ರಾಯವು ಹೋಗುವದು ನಿಜ
ತನುವ ಭಕ್ಷಿಪ ಕಾಲನಾಕ್ಷಣ ಲಕ್ಷ್ಮಿ ಸ್ಥಿರವಲ್ಲಾ |
ಇನಿತು ತೋಯತರಂಗ ಪರಿಯಲಿ
ಎನಗೆ ತೋರಿತು ಮಿಂಚಿನಂದದಿ
ನಿನಗೆ ಶರಣನು ಬಂದೆ ರಕ್ಷಸು ಜೀವಭ್ರಮೆ ಬಿಡಿಸಿ ||೧೮||

ಕರಚರಣ ಕಿವಿ ವಾಕ್ಕು ಜಿಂಹ್ವೆಯು
ಹರಿವ ನಯನವು ಮತ್ತೆ ಮನಸಿನ
ಪರಿಪರಿಯ ಅಪರಾಧ ವಿಹಿತಾ ವಿಹಿತವೆಲ್ಲವನು |
ತ್ವರಿತದಿಂದಲಿ ಕ್ಷಮಿಸು ಸರ್ವವು
ಹರನೆ ಜಯ ಜಯ ಕರುಣಸಾಗರ
ನಿರುಪಮನೆ ನಿಜಲಿಂಗ ದೇವರದೇವ ಮಹದೇವ ||೧೯||

ಇಂತು ಶಂಕರಭಾರ್ತಿ ಗುರುವಿನ
ಅಂತರಂಗದ ತಾಪಲಕ್ಷಣ
ಎಂತು ಪೇಳಲುಬಹುದು ಜಗದೋದ್ಧಾರಗೋಸುಗುವ |
ಅಂತಿದೆಲ್ಲವ ತೋರಿದನ: ಗುರು
ಭ್ರಾಂತಿ ತೊರೆದನು ಬ್ರಹ್ಮ ಭಾವದಿ
ಚಿಂತಿಯಿಲ್ಲದ ಮನೆಯ ಹೊಗಿಸಿದ ಮೂಢ ಪಾಮರನ ||೨೦||

ಮನಸು ಒಗಡುಸುತನಕ ವಿಷಯದ
ಮನವು ಉನ್ಮನವಾಗಬಲ್ಲುದೆ
ಮನವು ಉನ್ಮನವಾಗೋತನಕ ಘನವು ದೊರಕುವುದೇ |
ಘನವು ದೊರಕದೆ ಶಾಂತಿಬಾರದು
ಜನನ ಮರಣವು ಹಿಂಗಲರಿಯೆವು
ತನುವು ಜಡವಿದು ಹೊತ್ತು ಬಂದುದರಿಂದ ಫಲವೇನು ||೨೧||

ಜರಿದು ಮನಸಿನ ಪಂಚವಿಷಯವ
ಹರಿದು ಗುರುವಿನ ಪಾದಕಮಲಕೆ
ಬೆರೆದು ಹೋಗುವೆನೆಂದು ಯೋಚಿಸಿ ಬರಲು ಸನ್ನಿಧಿಗೆ |
ಕರೆದು ತನ್ನಯ ಮುಂದೆ ಎನ್ನಯ
ಶಿರದಲಿಟ್ಟನು ಅಭಯಹಸ್ತವ
ಒರೆದನಾಗಳೆ ತತ್ವಮಸಿ ಮಹವಾಕ್ಯದುಪದೇಶ ||೨೨||

ಕಡಿದುಹೋಯಿತು ಮನದ ತಾಪವು
ಒಡಿಯ ಗುರುವಿನ ವಾಖ್ಯದಿಂದಲಿ
ಜಡಿದುಹೋದೆನು ಪಾದಕಮಲಕೆ ಎರಕದಿಂದಲಿ |
ಬಿಡದು ಗುರುವಿನ ಮೋಹವೆಂದಿಗು
ಸಡಗರವ ನಾನೆಷ್ಟು ಹೇಳಲಿ
ಮೃಡನೆ ಬಲ್ಲನು ಸುಖದ ಬಗೆಯನು ಅಂತರಂಗದಲಿ ||೨೩||

ಪರುಷ ಕಬ್ಬಿಣ ಸೋಂಕಿದಾಗಲೆ
ತ್ವರಿತದಲಿ ಹೇಮಾಗಿ ನಿಲ್ವದು
ಸ್ಪರ್ಶವಾಗಲು ಗುರುಕೃಪಾಕರ ಜೀವ ಬ್ರಹ್ಮಾದ |
ನಿರಸವಾಗದು ಎಂದಿಗಾಸುಖ
ಬೆರಸಿದನು ಗುರು ತನ್ನ ಪದದಲಿ
ಹರುಷವಿಡಿಯಲು ಗಗನವದು ಪರಬ್ರಹ್ಮಮಯವಾಯ್ತು || ೨೪||

ಒಂದು ಶ್ಲೋಕಕೆ ಒಂದು ಪದವನು
ತಂದೆ ಗುರುಗೋವಿಂದನಾಜ್ಞದಿ
ಕಂದ ಪೇಳಿದ ಜ್ಞಾನಬೋಧೆಯ ಸ್ತೋತ್ರವಪರಾಧ |
ಕುಂದು ಹೆಚ್ಚನು ಏನು ನೋಡದೆ
ಮಂದಮತಿ ಹೇಳಿಹನು ಜ್ಞಾನಿ-
ವೃಂದ ಕೇಳ್ವದು ಸಾಧುಸಂತರು ಪರಮ ಕರುಣದಲಿ || ೨೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧನ ಹಯವೇ! ನಿನಗೆ ವಂದನೆ!
Next post ಸನ್ಮತಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys