Home / ಕವನ / ಕವಿತೆ / ಬೆಂಗಳೂರು

ಬೆಂಗಳೂರು

ಇದು ಚಕ್ರವ್ಯೂಹ
ಒಳಗೆ ಬರಬಹುದು
ಒಮ್ಮೆ ಬಂದಿರೊ ಒಳಗೆ
ಹಿಂದೆ ಹೋಗುವ ದಾರಿ ಬಂದಾದ ಹಾಗೆಯೇ !
ಕರೆತಂದ ದೆವ್ವಗಳು ಕೈಬಿಟ್ಟ ಹಾಗೆಯೇ!
ಸ್ವಾಮಿ, ಇದು ನಗರ;
ನಿತ್ಯ ಜೀವವನ್ನೆಲ್ಲ ನುಂಗಿ ಸೊಕ್ಕಿರುವ
ಹೆಬ್ಬಾವಿನಂಥ ಜಡ ಅಜಗರ:
ದಿಕ್ಕು ದಿಕ್ಕಿನಿಂದಲೂ ಉಕ್ಕಿ ಧಾವಿಸುತ್ತಿರುವ
ಲಕ್ಷವಾಹಿನಿ ಮಲೆತ ಜನಸಾಗರ;
ಏನೆಲ್ಲ ಭಾಷೆ, ಎಷ್ಟೆಲ್ಲ ಆಸೆ
ನೂರೆಂಟು ರುಚಿ ಕಲಸುಮೇಲೋಗರ,
ಬಂದವರಿಗೆಲ್ಲ ಇಲ್ಲಿ ಭವಿಷ್ಯ ಇರದಿದ್ದರೂ
ಆಟಬಲ್ಲ ಖಡೀಮ ಮಾತ್ರ ಹಾಕಿಯೆಬಿಡುವ
ಕೇಳಿದ ಗರ!

ಎಲ್ಲ ಸಮೃದ್ಧ ಇಲ್ಲಿ.
ಕೆಲವು ಜಾಗಗಳಲ್ಲಿ
ನೀರಿಲ್ಲದಿದ್ದರೂ ನಲ್ಲಿಯಲ್ಲಿ
ಗಲ್ಲಿ ಗಲ್ಲಿಗಳಲ್ಲಿ
ಹೆಜ್ಜೆ ಹೆಜ್ಜೆಗು ತೀರ್ಥ
ಅಂಗಡಿಯ ತುಂಬ ಬಾಟಲಲ್ಲಿ !
ಎಣ್ಣೆ ಇದೆ ಕಾಳಲ್ಲಿ
ಬೆಣ್ಣೆ ಹಳೆಕಥೆಯಲ್ಲಿ
ಅಕ್ಕಿ ಸಕ್ಕರೆ ಬೇಳೆ ಕೆಲಸವಿಲ್ಲದೆ ಪಾಪ
ಗೊರಕೆ ಹೊಡೆಯುತ್ತಿವೆ ನೆಲಮಾಳಿಗೆಯ ಒಳಗೆ
ಕತ್ತಲಲ್ಲಿ!

ಓಡುವುದು ಇಲ್ಲಿ, ಎಲ್ಲೆಂದರಲ್ಲಿ
ಸಿಟೀ ಬಸ್ಸು
ಕೂತುಕೊಂಡೋ, ಇಲ್ಲ ನಿಂತುಕೊಂಡೋ
ಅಥವಾ ಪುಟ್‌ಬೋರ್ಡ್‌ಮೇಲೆ ಮುಂಗಾಲನ್ನೂರಿ
ಹವೆಯಲ್ಲಿ ಮೈತೂರಿ ತೂಗಿಕೊಂಡೋ
ಹೇಗೆ ಬೇಕಾದರೂ ಹೋಗಬಹುದು
ಅದೃಷ್ಟವಿದ್ದರೆ ಸ್ಟಾಪು ಸೇರಬಹುದು!

ಹಿಂದೆ ಒಂದಾನೊಂದು ಕಾಲದಲ್ಲಿ
ಇತ್ತಂತೆ ಪೂರ ಕನ್ನಡವೆ ಇಲ್ಲಿ
ಈಗ ಮಾತ್ರ ಎಲ್ಲೋ ಸಂದಿಗೊಂದಿಗಳಲ್ಲಿ
ಮಿಡುಕುತಿದೆ ಜೀವ ಬಾಲದಲ್ಲಿ
ಅಕ್ಕಪಕ್ಕದ ಮನೆಯ ಸೋದರರು ದಯಮಾಡಿ
ಮೇಲೆಬ್ಬಿಸಿರುವ ಗಾಳಿಯಲ್ಲಿ
ಹೊಯ್ದಾಡುತ್ತಿದೆ ಪುಟ್ಟ ಕನ್ನಡದ ಹಣತೆ
ಗುಡ್‌ಬೈ ಹೇಳುವ ಧಾಟಿಯಲ್ಲಿ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...