Home / ಕವನ / ಕವಿತೆ / ಬೆಂಗಳೂರು

ಬೆಂಗಳೂರು

ಇದು ಚಕ್ರವ್ಯೂಹ
ಒಳಗೆ ಬರಬಹುದು
ಒಮ್ಮೆ ಬಂದಿರೊ ಒಳಗೆ
ಹಿಂದೆ ಹೋಗುವ ದಾರಿ ಬಂದಾದ ಹಾಗೆಯೇ !
ಕರೆತಂದ ದೆವ್ವಗಳು ಕೈಬಿಟ್ಟ ಹಾಗೆಯೇ!
ಸ್ವಾಮಿ, ಇದು ನಗರ;
ನಿತ್ಯ ಜೀವವನ್ನೆಲ್ಲ ನುಂಗಿ ಸೊಕ್ಕಿರುವ
ಹೆಬ್ಬಾವಿನಂಥ ಜಡ ಅಜಗರ:
ದಿಕ್ಕು ದಿಕ್ಕಿನಿಂದಲೂ ಉಕ್ಕಿ ಧಾವಿಸುತ್ತಿರುವ
ಲಕ್ಷವಾಹಿನಿ ಮಲೆತ ಜನಸಾಗರ;
ಏನೆಲ್ಲ ಭಾಷೆ, ಎಷ್ಟೆಲ್ಲ ಆಸೆ
ನೂರೆಂಟು ರುಚಿ ಕಲಸುಮೇಲೋಗರ,
ಬಂದವರಿಗೆಲ್ಲ ಇಲ್ಲಿ ಭವಿಷ್ಯ ಇರದಿದ್ದರೂ
ಆಟಬಲ್ಲ ಖಡೀಮ ಮಾತ್ರ ಹಾಕಿಯೆಬಿಡುವ
ಕೇಳಿದ ಗರ!

ಎಲ್ಲ ಸಮೃದ್ಧ ಇಲ್ಲಿ.
ಕೆಲವು ಜಾಗಗಳಲ್ಲಿ
ನೀರಿಲ್ಲದಿದ್ದರೂ ನಲ್ಲಿಯಲ್ಲಿ
ಗಲ್ಲಿ ಗಲ್ಲಿಗಳಲ್ಲಿ
ಹೆಜ್ಜೆ ಹೆಜ್ಜೆಗು ತೀರ್ಥ
ಅಂಗಡಿಯ ತುಂಬ ಬಾಟಲಲ್ಲಿ !
ಎಣ್ಣೆ ಇದೆ ಕಾಳಲ್ಲಿ
ಬೆಣ್ಣೆ ಹಳೆಕಥೆಯಲ್ಲಿ
ಅಕ್ಕಿ ಸಕ್ಕರೆ ಬೇಳೆ ಕೆಲಸವಿಲ್ಲದೆ ಪಾಪ
ಗೊರಕೆ ಹೊಡೆಯುತ್ತಿವೆ ನೆಲಮಾಳಿಗೆಯ ಒಳಗೆ
ಕತ್ತಲಲ್ಲಿ!

ಓಡುವುದು ಇಲ್ಲಿ, ಎಲ್ಲೆಂದರಲ್ಲಿ
ಸಿಟೀ ಬಸ್ಸು
ಕೂತುಕೊಂಡೋ, ಇಲ್ಲ ನಿಂತುಕೊಂಡೋ
ಅಥವಾ ಪುಟ್‌ಬೋರ್ಡ್‌ಮೇಲೆ ಮುಂಗಾಲನ್ನೂರಿ
ಹವೆಯಲ್ಲಿ ಮೈತೂರಿ ತೂಗಿಕೊಂಡೋ
ಹೇಗೆ ಬೇಕಾದರೂ ಹೋಗಬಹುದು
ಅದೃಷ್ಟವಿದ್ದರೆ ಸ್ಟಾಪು ಸೇರಬಹುದು!

ಹಿಂದೆ ಒಂದಾನೊಂದು ಕಾಲದಲ್ಲಿ
ಇತ್ತಂತೆ ಪೂರ ಕನ್ನಡವೆ ಇಲ್ಲಿ
ಈಗ ಮಾತ್ರ ಎಲ್ಲೋ ಸಂದಿಗೊಂದಿಗಳಲ್ಲಿ
ಮಿಡುಕುತಿದೆ ಜೀವ ಬಾಲದಲ್ಲಿ
ಅಕ್ಕಪಕ್ಕದ ಮನೆಯ ಸೋದರರು ದಯಮಾಡಿ
ಮೇಲೆಬ್ಬಿಸಿರುವ ಗಾಳಿಯಲ್ಲಿ
ಹೊಯ್ದಾಡುತ್ತಿದೆ ಪುಟ್ಟ ಕನ್ನಡದ ಹಣತೆ
ಗುಡ್‌ಬೈ ಹೇಳುವ ಧಾಟಿಯಲ್ಲಿ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...