ಬರವ ಕಾಯುತಿದೆ

ನೋವಿನ ಹೇಳಿಗೆ ಹೊತ್ತ ಭಾರಕ್ಕೆ
ಬಾಗಿದೆ ಲೋಕದ ಬೆನ್ನು
ಹಸಿದ ಹೊಟ್ಟೆಯಲಿ ತತ್ತರಿಸುತ್ತಿದೆ
ಕಂಗಾಲಾಗಿದೆ ಕಣ್ಣು
ಕೊರಳನು ಬಿಗಿಯುವ ಕಣ್ಣಿಯ ಕಳಚಲು
ಬರುವನು ಯಾರೋ ಧೀರ,
ಎಂಬ ಮಾತನ್ನೆ ನಂಬಿ ಕಾಯುತಿದೆ
ಜೀವಲೋಕಗಳ ತೀರ.

ಯಾರ ಬೆರಳುಗಳು ಯಾವ ಕೊರಳಿಗೆ
ಕಟ್ಟಲಿರುವುವೋ ತಾಳಿಯ,
ಯಾರ ಹರಸುವುದೊ ಕಾಣದ ಹಸ್ತ
ಯಾರು ಆಳುವರೊ ನಾಳೆಯ,
ಬರೆಯುವವರಾರೋ ಕಿರಣ ಕಾವ್ಯವ
ಮುಗಿಲಿನ ಹಾಳೆಯ ಮೇಲೆ,
ಏಳು ಕುದುರೆಗಳು ಯಾರ ರಥ ಎಳೆದು
ತೆರೆವುವೊ ಬೆಳಗಿನ ಲೀಲೆ!

ಸುತ್ತ ಏಳುತಿದೆ ಕಾಣದ ಹಾಗೆ
ಹುತ್ತ ಅವನ ಸುತ್ತ,
ಮರಗಳ ಜಪದಲಿ ರಾಮಬ್ರಹ್ಮನ
ಸೃಷ್ಟಿಸಿಕೊಳುತಿದೆ ಚಿತ್ತ;
ಸಾಯಲು ಕ್ರೌಂಚ, ಕಾಯಲು ಕವಿತೆ
ಎದುರು ನೋಡುತಿವೆ ಆಜ್ಞೆ,
ಆರು ಚಕ್ರಗಳ ತೂರಿ ಏರಲಿದೆ
ಸಹಸ್ರಾರಕ್ಕೆ ಪ್ರಜ್ಞೆ.

ಆ ಸೌಭಾಗ್ಯದ ಬರವ ಕಾಯುತಿದೆ
ಕವಿತೆಯ ಪಾದ, ಪಲ್ಲವಿ,
ಆ ತಾರಕಕೆ ಮೆಟ್ಟಿಲ ಕಟ್ಟಿದೆ
ಶ್ರುತಿ ಲಯ ಸರಿಗಮಪದನಿ,
ಆ ಶ್ರೀ ಚಿತ್ರಕೆ ಗೆರೆಯ ಹರಸುತಿದೆ
ಅರುಣನ ಮಲ್ಲಿಗೆ ಕಿರಣ,
ಮೂಡಲ ದಡದಲಿ ಕೆಂಪಗೇಳುತಿದೆ
ಹೊಸ ಅವತಾರದ ಚರಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೩೮
Next post ಬೂದಿ ಬಣ್ಣದ ಕಾನ್‌ಕ್ರೀಟ್ ಕಾಡಿನ ವಿಜಯ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys