ಕಾರ್ಗಿಲ್ ಯೋಧರಿಗೆ

ಮುಗಿಲ ತೂರಿ ಮೇಲೆ ಎದ್ದ
ಗಿರಿಯ ನೆತ್ತಿಯಲ್ಲಿ,
ಕರುಳ ಕೊರೆವ ಹಿಮಗಾಳಿಯ
ಕಲ್ಲಭಿತ್ತಿಯಲ್ಲಿ,
ಎವೆ ಬಡಿಯದ ಎಚ್ಚರದಲಿ
ಹೊತ್ತಿ ಉರಿವ ಕೆಚ್ಚಿನಲ್ಲಿ
ದೇಶ ನನ್ನ ದೈವ ಎಂದು
ಹೋರಾಡುವ ಧೀರರೇ,
ನಿಮ್ಮೊಡನಿದೆ ನಮ್ಮ ಹೃದಯ
ಇದೋ ನಿಮಗೆ ವಂದನೆ

ತಿನ್ನಲಿರದ ಕುಡಿಯಲಿರದ
ಬಂಡೆರಾಶಿ ನಡುವೆ,
ಥಂಡಿಗಾಳಿ ಬಡಿವ ಕ್ರೂರ
ಹವೆಯಲ್ಲೂ ಬಿಡದೆ,
ವೈರಿನಲೆಯ ಮೇಲೆ ಗುಂಡು
ಉರಿಯುತಿರುವ ಬೆಂಕಿ ಚಂಡು
ಸಿಡಿಸಿ ದೇಶವನ್ನು ಕಾಯ್ದೆ
ಎನುವ ಧೀರ ಯೋಧರ,
ನಿಮ್ಮೊಡನಿದೆ ನಮ್ಮ ಹೃದಯ
ಇದೋ ನಿಮಗೆ ವಂದನೆ

ಹೆಂಡತಿ ಮನೆ ಮಕ್ಕಳನ್ನು
ಬಿಟ್ಟು ದೂರದಲ್ಲಿ,
ಎಲ್ಲ ಭೋಗಸುಖಗಳನೂ
ಮನಸಿನಿಂದ ತಳ್ಳಿ,
ಜೀವಕಿಂತ ದೇಶ ಮಿಗಿಲು
ದುಡಿವ ಅದಕೆ ಹಗಲು ಇರುಳು
ಮೀಸಲದಕೆ ಕೊರಳು ಎಂಬ
ಛಲದಿ ಕುದಿವ ಧೀರರೇ,
ನಿಮ್ಮೊಡನಿದೆ ನಮ್ಮ ಹೃದಯ
ಇದೋ ನಿಮಗೆ ವಂದನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿದವರಿಗೂ ಎರಡು ಎಲೆಯಿರಲಿ
Next post ಕನಸು

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys