ತುಘ್ಲಕ

ಸಂಜೆಯಾಗಿತ್ತು ಇಡಿಯ ದೆಹಲಿ
ಸ್ತಬ್ದವಾಗಿತ್ತು ಎಲ್ಲೆಲ್ಲೂ
ತೆರೆದ ಬಾಗಿಲ ಖಾಲಿ ಮನೆಗಳು
ನಿನ್ನೆಮೊನ್ನೆಯ ವರೆಗೆ ಇಲ್ಲಿ
ಇಷ್ಟೊಂದು ಜನರಿದ್ದರೆಂದು
ನಂಬುವುದೆ ಕಷ್ಟವಾಗಿತ್ತು

ಇಬ್ಬರೇ ನಡೆದಿದ್ದರವರು
ದೊರೆ ಮತ್ತು ಪ್ರವಾಸಿ
ಎದಿರಾಗುವುದಕ್ಕೆ ಯಾರೂ ಇಲ್ಲ
ನಾಯಿಗಳೂ ಕೂಗುವುದಿಲ್ಲ
ಇಬ್ನ್ ಬಟೂಟಾ ಕೇಳಿದನು:
“ಅರಸ! ಏನಿದೆಲ್ಲದರ ಅರ್ಥ ?”

ಅರಸನೆಂದನು ನಕ್ಕು:
“ಚರಿತ್ರೆಯ ಕಾಲಘಟ್ಟಗಳಲ್ಲಿ ಕೆಲವೊಮ್ಮೆ
ಹೀಗಾಗುವುದು-ಈಗ
ಈ ಸಂಜೆಯ ಮೌನವನ್ನು ಸವಿ!
ಇನ್ನೊಂದು ದಿನ ಇದೇ ಬೀದಿಗಳು ತುಂಬುತ್ತವೆ
ಮತ್ತದೇ ಗುಂಪು ಅದೇ ಗುಲ್ಲು
ಸಾಧ್ಯವಿದ್ದರೆ ನಾನು
ಸಮುದ್ರವನ್ನು ಕೂಡ ಮೊಗೆಯುತ್ತಿದ್ದೆ
ಅದರ ತಳದಲ್ಲಿ ನಡೆಯಲು”

ನಂತರ ಇಬ್ನ್ ಬಟೂಟಾ ಒಬ್ಬನೇ
ದೇವರನ್ನು ಹೀಗೆ ಪ್ರಾರ್ಥಿಸಿಕೊಂಡ:
“ಮೌನವಿರುವ ಕಡೆ
ಮಾತುಗಳು ಹುಟ್ಟಲಿ
ಈ ಒಲೆಗಳು ಮತ್ತೆ
ಉರಿಯುವಂತೆ ಮಾಡು
ಸರ್ವಶಕ್ತನಾದ ಅಲ್ಲಾ
ಸಮುದ್ರದ ರಹಸ್ಯವನ್ನು
ಸರ್ವಾಧಿಕಾರಿಗಳಿಂದ ರಕ್ಷಿಸು !”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತ್ತವೆ ನೆನಪು
Next post ಮನಸ್ಸು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…