ತುಘ್ಲಕ

ಸಂಜೆಯಾಗಿತ್ತು ಇಡಿಯ ದೆಹಲಿ
ಸ್ತಬ್ದವಾಗಿತ್ತು ಎಲ್ಲೆಲ್ಲೂ
ತೆರೆದ ಬಾಗಿಲ ಖಾಲಿ ಮನೆಗಳು
ನಿನ್ನೆಮೊನ್ನೆಯ ವರೆಗೆ ಇಲ್ಲಿ
ಇಷ್ಟೊಂದು ಜನರಿದ್ದರೆಂದು
ನಂಬುವುದೆ ಕಷ್ಟವಾಗಿತ್ತು

ಇಬ್ಬರೇ ನಡೆದಿದ್ದರವರು
ದೊರೆ ಮತ್ತು ಪ್ರವಾಸಿ
ಎದಿರಾಗುವುದಕ್ಕೆ ಯಾರೂ ಇಲ್ಲ
ನಾಯಿಗಳೂ ಕೂಗುವುದಿಲ್ಲ
ಇಬ್ನ್ ಬಟೂಟಾ ಕೇಳಿದನು:
“ಅರಸ! ಏನಿದೆಲ್ಲದರ ಅರ್ಥ ?”

ಅರಸನೆಂದನು ನಕ್ಕು:
“ಚರಿತ್ರೆಯ ಕಾಲಘಟ್ಟಗಳಲ್ಲಿ ಕೆಲವೊಮ್ಮೆ
ಹೀಗಾಗುವುದು-ಈಗ
ಈ ಸಂಜೆಯ ಮೌನವನ್ನು ಸವಿ!
ಇನ್ನೊಂದು ದಿನ ಇದೇ ಬೀದಿಗಳು ತುಂಬುತ್ತವೆ
ಮತ್ತದೇ ಗುಂಪು ಅದೇ ಗುಲ್ಲು
ಸಾಧ್ಯವಿದ್ದರೆ ನಾನು
ಸಮುದ್ರವನ್ನು ಕೂಡ ಮೊಗೆಯುತ್ತಿದ್ದೆ
ಅದರ ತಳದಲ್ಲಿ ನಡೆಯಲು”

ನಂತರ ಇಬ್ನ್ ಬಟೂಟಾ ಒಬ್ಬನೇ
ದೇವರನ್ನು ಹೀಗೆ ಪ್ರಾರ್ಥಿಸಿಕೊಂಡ:
“ಮೌನವಿರುವ ಕಡೆ
ಮಾತುಗಳು ಹುಟ್ಟಲಿ
ಈ ಒಲೆಗಳು ಮತ್ತೆ
ಉರಿಯುವಂತೆ ಮಾಡು
ಸರ್ವಶಕ್ತನಾದ ಅಲ್ಲಾ
ಸಮುದ್ರದ ರಹಸ್ಯವನ್ನು
ಸರ್ವಾಧಿಕಾರಿಗಳಿಂದ ರಕ್ಷಿಸು !”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತ್ತವೆ ನೆನಪು
Next post ಮನಸ್ಸು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…