Home / ಕವನ / ಕವಿತೆ / ತುಘ್ಲಕ

ತುಘ್ಲಕ

ಸಂಜೆಯಾಗಿತ್ತು ಇಡಿಯ ದೆಹಲಿ
ಸ್ತಬ್ದವಾಗಿತ್ತು ಎಲ್ಲೆಲ್ಲೂ
ತೆರೆದ ಬಾಗಿಲ ಖಾಲಿ ಮನೆಗಳು
ನಿನ್ನೆಮೊನ್ನೆಯ ವರೆಗೆ ಇಲ್ಲಿ
ಇಷ್ಟೊಂದು ಜನರಿದ್ದರೆಂದು
ನಂಬುವುದೆ ಕಷ್ಟವಾಗಿತ್ತು

ಇಬ್ಬರೇ ನಡೆದಿದ್ದರವರು
ದೊರೆ ಮತ್ತು ಪ್ರವಾಸಿ
ಎದಿರಾಗುವುದಕ್ಕೆ ಯಾರೂ ಇಲ್ಲ
ನಾಯಿಗಳೂ ಕೂಗುವುದಿಲ್ಲ
ಇಬ್ನ್ ಬಟೂಟಾ ಕೇಳಿದನು:
“ಅರಸ! ಏನಿದೆಲ್ಲದರ ಅರ್ಥ ?”

ಅರಸನೆಂದನು ನಕ್ಕು:
“ಚರಿತ್ರೆಯ ಕಾಲಘಟ್ಟಗಳಲ್ಲಿ ಕೆಲವೊಮ್ಮೆ
ಹೀಗಾಗುವುದು-ಈಗ
ಈ ಸಂಜೆಯ ಮೌನವನ್ನು ಸವಿ!
ಇನ್ನೊಂದು ದಿನ ಇದೇ ಬೀದಿಗಳು ತುಂಬುತ್ತವೆ
ಮತ್ತದೇ ಗುಂಪು ಅದೇ ಗುಲ್ಲು
ಸಾಧ್ಯವಿದ್ದರೆ ನಾನು
ಸಮುದ್ರವನ್ನು ಕೂಡ ಮೊಗೆಯುತ್ತಿದ್ದೆ
ಅದರ ತಳದಲ್ಲಿ ನಡೆಯಲು”

ನಂತರ ಇಬ್ನ್ ಬಟೂಟಾ ಒಬ್ಬನೇ
ದೇವರನ್ನು ಹೀಗೆ ಪ್ರಾರ್ಥಿಸಿಕೊಂಡ:
“ಮೌನವಿರುವ ಕಡೆ
ಮಾತುಗಳು ಹುಟ್ಟಲಿ
ಈ ಒಲೆಗಳು ಮತ್ತೆ
ಉರಿಯುವಂತೆ ಮಾಡು
ಸರ್ವಶಕ್ತನಾದ ಅಲ್ಲಾ
ಸಮುದ್ರದ ರಹಸ್ಯವನ್ನು
ಸರ್ವಾಧಿಕಾರಿಗಳಿಂದ ರಕ್ಷಿಸು !”
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...