ನಾವು ಪ್ರೀತಿಸುವವರು

ಈ ದೇಶದಲಿ ನ್ಯಾಯ ನಿರ್ಣಯಕೆ
ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ
ಹೊಲಿಗೆ ಹಾಕಿ ಬಿಗಿ ಬಂಧನ
ಪ್ರತಿ ದಿನದ ಒಂದು ಹೊತ್ತಿನ ಊಟಕೆ
ಪರದಾಡುವ ಕೂಲಿಗೆ ಯಾವ ಆದೇಶ
ಬೆಚ್ಚನೆಯ ಭರವಸೆ ಹುಟ್ಟು ಹಾಕೀತು
ದೂರಾದುಷ್ಠರ ಆಡಳಿತದ ಕಪಿ ಮುಷ್ಠಿಗೆ
ನಲುಗಿದ ಅವರಿವರ ಹೂವಿನ ಆತ್ಮಗಳು.

ನನ್ನ ಮಗಳಿಗೆ ಶಾಲೆಗೆ ರಜೆ ಘೋಷಿಸಿದ್ದಾರೆ
ಯಾಕೆ ಅಮ್ಮ ಅಂತ ಅವಳು ನೂರು ಬಾರಿ
ಕೇಳಿದ್ದಾಳೆ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ
ಮಗಳ ಮುಂದಿನ ದಿನಗಳು ಕರಾಳ
ಹಾಯಾಗಿಲ್ಲ ಎಲ್ಲೆಲ್ಲೂ ಹತಾಶೆಗಳು
ದೇಶದಲ್ಲಿ ಸತ್ತವರು ಸತ್ತವರ ಗೋರಿಗಳು
ದ್ವೇಷವನ್ನೂ ರೋಷವನ್ನೂ ಹುಟ್ಟು ಹಾಕುತ್ತವೆ
ಮುಳ್ಳಿನ ಕಂಟಿಗಳಿಂದ ಶಾಂತಿ ಹೂಗಳ ಹೇಗೆ ತರಲಿ.

ಎಷ್ಟೊಂದು ಸಮಯ ಹಾಳು ಮಾಡುತ್ತಾರೆ
ದುಡಿಯುವ ಲಜ್ಜೆಗೇಡಿಗಳು ತಿಳಿಗೇಡಿನ
ಸೆಣಸಾಟದಲಿ, ಗದ್ದಲ ಎಬ್ಬಿಸುವುದು ಬಿಟ್ಟು
ಇನ್ನೇನು ಗೊತ್ತು ಜನರಿಗೆ ಗೊಂದಲ ಪುರದಲಿ
ಕೊನೆವರೆಗೂ ಉಳಿಯುವ ಕಣ್ಣೀರಿಗೆ
ಇವರೇಕೆ ಕೊಡಲಿ ಕಾವು ಹಚ್ಚುತ್ತಾರೆ
ಅಲ್ಲಿ ಒಂದು ಮಕ್ಕಳ ನಂದನವನ ಅರಳಲಿ
ನಾವು ಪ್ರೀತಿಸುವವರು ಸಿಗಲಿ ದೇವರೇ
ಈ ಜಗದಲಿ ಒಂದು ವಿಸ್ಮಯ ಮುಗುಳ್ನಗೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಟವಾಡುವ ಮಕ್ಕಳನ್ನು ಕಂಡು
Next post ಸೂರ್ಯಸ್ವಾತಂತ್ರ್‍ಯ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…