Home / ಕವನ / ಕವಿತೆ / ನಾವು ಪ್ರೀತಿಸುವವರು

ನಾವು ಪ್ರೀತಿಸುವವರು

ಈ ದೇಶದಲಿ ನ್ಯಾಯ ನಿರ್ಣಯಕೆ
ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ
ಹೊಲಿಗೆ ಹಾಕಿ ಬಿಗಿ ಬಂಧನ
ಪ್ರತಿ ದಿನದ ಒಂದು ಹೊತ್ತಿನ ಊಟಕೆ
ಪರದಾಡುವ ಕೂಲಿಗೆ ಯಾವ ಆದೇಶ
ಬೆಚ್ಚನೆಯ ಭರವಸೆ ಹುಟ್ಟು ಹಾಕೀತು
ದೂರಾದುಷ್ಠರ ಆಡಳಿತದ ಕಪಿ ಮುಷ್ಠಿಗೆ
ನಲುಗಿದ ಅವರಿವರ ಹೂವಿನ ಆತ್ಮಗಳು.

ನನ್ನ ಮಗಳಿಗೆ ಶಾಲೆಗೆ ರಜೆ ಘೋಷಿಸಿದ್ದಾರೆ
ಯಾಕೆ ಅಮ್ಮ ಅಂತ ಅವಳು ನೂರು ಬಾರಿ
ಕೇಳಿದ್ದಾಳೆ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ
ಮಗಳ ಮುಂದಿನ ದಿನಗಳು ಕರಾಳ
ಹಾಯಾಗಿಲ್ಲ ಎಲ್ಲೆಲ್ಲೂ ಹತಾಶೆಗಳು
ದೇಶದಲ್ಲಿ ಸತ್ತವರು ಸತ್ತವರ ಗೋರಿಗಳು
ದ್ವೇಷವನ್ನೂ ರೋಷವನ್ನೂ ಹುಟ್ಟು ಹಾಕುತ್ತವೆ
ಮುಳ್ಳಿನ ಕಂಟಿಗಳಿಂದ ಶಾಂತಿ ಹೂಗಳ ಹೇಗೆ ತರಲಿ.

ಎಷ್ಟೊಂದು ಸಮಯ ಹಾಳು ಮಾಡುತ್ತಾರೆ
ದುಡಿಯುವ ಲಜ್ಜೆಗೇಡಿಗಳು ತಿಳಿಗೇಡಿನ
ಸೆಣಸಾಟದಲಿ, ಗದ್ದಲ ಎಬ್ಬಿಸುವುದು ಬಿಟ್ಟು
ಇನ್ನೇನು ಗೊತ್ತು ಜನರಿಗೆ ಗೊಂದಲ ಪುರದಲಿ
ಕೊನೆವರೆಗೂ ಉಳಿಯುವ ಕಣ್ಣೀರಿಗೆ
ಇವರೇಕೆ ಕೊಡಲಿ ಕಾವು ಹಚ್ಚುತ್ತಾರೆ
ಅಲ್ಲಿ ಒಂದು ಮಕ್ಕಳ ನಂದನವನ ಅರಳಲಿ
ನಾವು ಪ್ರೀತಿಸುವವರು ಸಿಗಲಿ ದೇವರೇ
ಈ ಜಗದಲಿ ಒಂದು ವಿಸ್ಮಯ ಮುಗುಳ್ನಗೆಯಲಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...