ನಾವು ಪ್ರೀತಿಸುವವರು

ಈ ದೇಶದಲಿ ನ್ಯಾಯ ನಿರ್ಣಯಕೆ
ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ
ಹೊಲಿಗೆ ಹಾಕಿ ಬಿಗಿ ಬಂಧನ
ಪ್ರತಿ ದಿನದ ಒಂದು ಹೊತ್ತಿನ ಊಟಕೆ
ಪರದಾಡುವ ಕೂಲಿಗೆ ಯಾವ ಆದೇಶ
ಬೆಚ್ಚನೆಯ ಭರವಸೆ ಹುಟ್ಟು ಹಾಕೀತು
ದೂರಾದುಷ್ಠರ ಆಡಳಿತದ ಕಪಿ ಮುಷ್ಠಿಗೆ
ನಲುಗಿದ ಅವರಿವರ ಹೂವಿನ ಆತ್ಮಗಳು.

ನನ್ನ ಮಗಳಿಗೆ ಶಾಲೆಗೆ ರಜೆ ಘೋಷಿಸಿದ್ದಾರೆ
ಯಾಕೆ ಅಮ್ಮ ಅಂತ ಅವಳು ನೂರು ಬಾರಿ
ಕೇಳಿದ್ದಾಳೆ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ
ಮಗಳ ಮುಂದಿನ ದಿನಗಳು ಕರಾಳ
ಹಾಯಾಗಿಲ್ಲ ಎಲ್ಲೆಲ್ಲೂ ಹತಾಶೆಗಳು
ದೇಶದಲ್ಲಿ ಸತ್ತವರು ಸತ್ತವರ ಗೋರಿಗಳು
ದ್ವೇಷವನ್ನೂ ರೋಷವನ್ನೂ ಹುಟ್ಟು ಹಾಕುತ್ತವೆ
ಮುಳ್ಳಿನ ಕಂಟಿಗಳಿಂದ ಶಾಂತಿ ಹೂಗಳ ಹೇಗೆ ತರಲಿ.

ಎಷ್ಟೊಂದು ಸಮಯ ಹಾಳು ಮಾಡುತ್ತಾರೆ
ದುಡಿಯುವ ಲಜ್ಜೆಗೇಡಿಗಳು ತಿಳಿಗೇಡಿನ
ಸೆಣಸಾಟದಲಿ, ಗದ್ದಲ ಎಬ್ಬಿಸುವುದು ಬಿಟ್ಟು
ಇನ್ನೇನು ಗೊತ್ತು ಜನರಿಗೆ ಗೊಂದಲ ಪುರದಲಿ
ಕೊನೆವರೆಗೂ ಉಳಿಯುವ ಕಣ್ಣೀರಿಗೆ
ಇವರೇಕೆ ಕೊಡಲಿ ಕಾವು ಹಚ್ಚುತ್ತಾರೆ
ಅಲ್ಲಿ ಒಂದು ಮಕ್ಕಳ ನಂದನವನ ಅರಳಲಿ
ನಾವು ಪ್ರೀತಿಸುವವರು ಸಿಗಲಿ ದೇವರೇ
ಈ ಜಗದಲಿ ಒಂದು ವಿಸ್ಮಯ ಮುಗುಳ್ನಗೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಟವಾಡುವ ಮಕ್ಕಳನ್ನು ಕಂಡು
Next post ಸೂರ್ಯಸ್ವಾತಂತ್ರ್‍ಯ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…