Home / ಕವನ / ಕವಿತೆ / ನಿನ್ನ ಬರುವು

ನಿನ್ನ ಬರುವು

ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ
ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ

ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ
ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ

ಜಟೆಕಿರೀಟದಲಿ ನಾಲ್ಕು ಕೈಗಳಲಿ ವಿವಿಧ ಆಯುಧಗಳ
ರೇಷ್ಠ ಬಟ್ಟೆಗಳ ಚಿನ್ನದೊಡವೆಗಳ ಮುತ್ತು ರತ್ನ ಬಹಳ

ತೊಟ್ಟು ಬರುವಿ ನೀ ಬೆಳಕ ತರುವಿ ಝಗ್ಗೆಂದು ಕಣ್ಣ ಕುಕ್ಕಿ
ಎಂಬ ಭ್ರಮೆಯು ಈಗಿಲ್ಲ ತಂದೆ ತಿಳಿದಿಹುದು ತಿಳಿವು ಸಿಕ್ಕಿ

ಬಾ ಬಾರ ದೇವ ಬಂದೀಯ ನೀನು ಗುರುತಿಸಲು ಬಾರದಂತೆ
ಕಣ್ಣ ಮುಂದೆ ಹಗಲಿರುಳು ತಿರುಗಿದರು ನೋಟವರಿಯದಂತೆ

ಸುಕ್ಕುಗಲ್ಲ ಬರಿ ಎಲುಬು ಮೈಯಿ ಒಳಸೇರಿದಂಥ ದಿಟ್ಟಿ
ಭೂಮಿ ಭಾರ ಹೊತ್ತಂತೆ ಬೆನ್ನು ನಸುಬಾಗಿ ಕೋಲು ಕುಟ್ಟಿ

ಬರಿಮೈಯೊ ಏನೊ ಅರಮೈಯೊ ಏನೊ ಮಾನಕ್ಕೆ ಮರೆಯು ಬಟ್ಟೆ
ಬರಿಹೊಟ್ಟೆ ಏನೊ ಅರೆಹೊಟ್ಟೆ ಏನೊ ಬದುಕಿರಲು ನೆವವು ಹೊಟ್ಟೆ

ಮಾತನಾಡಿದರು ಮೂಕನಂತೆ ಮೌನದಲೆ ಎಲ್ಲ ಭಾಷ್ಯ
ಸುಮ್ಮನಿದ್ದರೂ ಮಗುವಿನಂತೆ ಲೀಲೆಯೊಳು ಕೃತಿಯು ವಶ್ಯ

ನೀನು ಬರಲು ಮೆರವಣಿಗೆಯಿಲ್ಲ ತುತ್ತೂರಿ ಕಹಳೆ ಇಲ್ಲ
ಬಾಲ ಹಿಂಬಾಲ ಬೊಗಳು ಹೊಗಳುಗಳು ಯಾರ ತರಲೆ ಇಲ್ಲ
ಗಾಳಿಯಷ್ಟು ಹಗುರಾಗಿ ಬರುವೆ ರವಿಕಿರಣದಂತೆ ನೇರ
ಬೆಳಕಿನಂತೆ ತಿಳಿಯಾಗಿ ಬರುವೆ ಜಲದಂತೆ ತೊಳೆಯ ಬಾರ

ಹಣ್ಣಿಗಿಂತ ಹಣ್ಣಾಗಿ ಬರುವೆ ಅನುಭಾವ ರಸವ ಹನಿಸಿ
ಹೂವಿನಂತೆ ಎದೆ ಅರಳುವಂತೆ ಪರಿಮಳದ ಪ್ರೇಮವೆನಿಸಿ

ತಿರೆಯ ಭ್ರಮಣ ಪರಿಯಂತೆ ಬಿಡುವಿರದ ಕಾಯಕರ್ಮನಿರತ
ಅಮರ ತತ್ವ ತೋರಿಸುವ ಮರಗಳೊಲು ಪ್ರಕೃತಿ ಧರ್ಮ ರಕ್ತ

ಋತು ಋತುವು ಹೊಸದು ಋತ ಸತ್ಯ ನಿತ್ಯ ನಿತ್ಯಾತ್ಮ ಲೀನ ನೀನು
ಇದ್ಧಿಲ್ಲದಂತೆ ಸದ್ದಿಲ್ಲದಂತೆ ಇರದಿರುವ ಯೋಗ ನೀನು
***

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ.ಎನ್.ಎಸ್‌. ರಾವ್