ವಚನ ವ್ಯಾಜ್ಯವಿದ್ಯಾಕೋ? ಸಹಜ ಬೀಜದ ಕುರಿತು ಚಂದ್ರಶೇಖರ ಎ ಪಿJune 1, 2023November 15, 2022 ಬೀಜ ವೃಕ್ಷ ನ್ಯಾಯವದಂತಿರಲಿ ಅನ್ಯಾಯವದಾವ ಬೀಜಕುಂ ವೃಕ್ಷಕುಂ ಆಗದಿರಲಿ, ರಾಶಿ ಬೀಜವಿದ್ಯಾಕೆನುತ ಕೋಜ ಬೀಜ ಬೆಳೆಸುವಾಧುನಿಕ ಕೃಷಿ ಬಾಳದಿರಲಿ ಯೋಜನೆಗಳಂತಿಮದಿ ಕೃಷಿ ಹೆಸರಿನೊಳಾ ಪೂಜ್ಯ ಬದುಕಿನೊಸರನಾರಿಸದಿರಲಿ - ವಿಜ್ಞಾನೇಶ್ವರಾ ***** Read More
ವಚನ ಎಮ್ಮಾದಿ ಪುರುಷರ ಸಂಪ್ರದಾಯವೆಂತಿತ್ತು ಗೊತ್ತಾ? ಚಂದ್ರಶೇಖರ ಎ ಪಿMay 25, 2023November 15, 2022 ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್ಜನೆಯ ದೋಷ ಕಳೆಯುತ ಬೆಳೆದಿಹರು - ವಿಜ್ಞಾನೇಶ್ವರಾ ***** Read More
ವಚನ ಕೊಂಡು ಕಲಿಯುವುದೇನು? ಉಂಟು ಕಲಿಯದ ಕೃಷಿಯ ಚಂದ್ರಶೇಖರ ಎ ಪಿMay 18, 2023November 15, 2022 ಕೃಷಿ ಕ್ಷಮತೆ ಏರಿಹುದೆಂದು ಇಳುವರಿಯನಧಿ ಕಗೊಳಿಸಿದ ಖುಷಿಯಲೊರಲುವರೊಂದಷ್ಟು ಜನರಾದೊಡಂ ಕೃಷಿ ವೆಚ್ಚವೇರಿರಲು ಕ್ಷಮತೆಯ ಮಾತೆಲ್ಲಿಹುದು? ಕ್ಷಮತೆಯಳೆಯಲು ಕೋಷ್ಠ ಮಾಪನದ ಹಂಗ್ಯಾಕೋ? ಕೆಳಗಿಳಿದ ಜಲಮಟ್ಟವೇರಿರುವುಷ್ಣತೆಯಷ್ಟೆ ಸಾಕೋ - ವಿಜ್ಞಾನೇಶ್ವರಾ ***** Read More
ವಚನ ಬರಿ ಸುಳ್ಳಲ್ಲವೇ? ಕೃಷಿ ತಜ್ಞರೊರೆಯುವುದು? ಚಂದ್ರಶೇಖರ ಎ ಪಿMay 11, 2023November 15, 2022 ಒರೆಯುವೊಡೆ, ಬರೆಯುವೊಡೆ ಸಾಲದದು ಕೃಷಿಯ ಕುರಿತೋದಿದೊಡೆ. ಮಾಡದೋದಿದ ಮಂಡೆ ಬರಿ ಗೂಡೆ ಕೊರಡ ನೆಟ್ಟು ನೀರೆರೆದೊಡದು ಮರವಪ್ಪುದುಂಟೇ? ಸೂರ್ಯ ಸಂಶ್ಲೇಷಣೆಯ ಕಷ್ಟವನಿಷ್ಟದೊಳನುಭವಿಪ ಬರಿ ಹುಲ್ಲನೀಕ್ಷಿಸಲದುವೆ ಕೃಷಿ ಪಾಠವನೊರೆಗು - ವಿಜ್ಞಾನೇಶ್ವರಾ ***** Read More
ವಚನ ಬಟ್ಟೆ ತೊಳೆದಂತದಲ್ಲವೇ? ಕೃಷಿ ಕಷ್ಟ ಬಾಳ ಬಟ್ಟೆಗೆ? ಚಂದ್ರಶೇಖರ ಎ ಪಿMay 4, 2023November 15, 2022 ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು - ವಿಜ್ಞಾನೇಶ್ವರಾ ***** Read More
ವಚನ ಕಾಯ ಬೆಳೆಸಿದರೆ ಕೊಬ್ಬರಿ ಮಾಡ್ಯದನು ಕರಗಿಸಬೇಡವೇ? ಚಂದ್ರಶೇಖರ ಎ ಪಿApril 27, 2023November 15, 2022 ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು - ವಿಜ್ಞಾನೇಶ್ವರಾ ***** Read More
ವಚನ ದುಡಿವ ರೈತರಿಗ್ಯಾಕಿಂಥ ನಾಯಿ ಪಾಡು? ಚಂದ್ರಶೇಖರ ಎ ಪಿApril 20, 2023November 15, 2022 ದುಡಿದು ಗಳಿಸಿರ್ಪನ್ನ ಪಕ್ಕದೊಳಿರ್ದು ಬಡತನ ದೂರದೂರದ ಸೂರೆಯುದ್ಯೋಗಿಗೆಲ್ಲ ಸಿರಿತನ ದೈನ್ಯವಲಾ ಎಸೆದ ಬಿಸ್ಕತ್ತಿಗೆಳಸುವ ಶ್ವಾನ ದಂತೆಮ್ಮ ರೈತರ ಪಾಡು ದುಡ್ಡನಾಘ್ರಾಣಿಸುತಿರಲ್ ಧರೆ ಸತ್ತ್ವಗಳಂತೆ ಸೂರೆ ಹೋಗುತಿದೆ ಅಧಿಕ ಇಳುವರಿಗೆ - ವಿಜ್ಞಾನೇಶ್ವರಾ ***** Read More
ವಚನ ಆಧುನಿಕ ಕೃಷಿಗಾರು ಸೂತ್ರಧಾರಿಗಳು? ಚಂದ್ರಶೇಖರ ಎ ಪಿApril 13, 2023November 11, 2022 ವೇದವನು ತೊರೆದವರು ಮತ್ತಾ ವೇದವನು ಓದುತೋದುತಲೊರೆವವರು ಅವರಿವರೆಲ್ಲರುಂ ಚೋದನೆಯಮಲಿನ ಪೇಟೆಯುದ್ಯೋಗಕೊಲಿದವರೆ ವೇದ ಮೂಲದಾರಣ್ಯಿಕದ ಕೃಷಿಯ ತೊರೆದವರೆ ವೇದನೆಯ ಕೃಷಿಗೆಲ್ಲರುಂ ಸೂತ್ರಧಾರಿಗಳೆ - ವಿಜ್ಞಾನೇಶ್ವರಾ ***** Read More
ವಚನ ಕೃಷಿ ಬೆಳಕಸ್ತಮಿಸಿದರೇನುಂಟು ಬದುಕು? ಚಂದ್ರಶೇಖರ ಎ ಪಿApril 6, 2023November 11, 2022 ಕೃಷಿ ಎಂದರದೊಂದು ಮಕ್ಕಳಾಟದವೊಲಿರಲು ರಾಶಿ ನಿಯಮಗಳದನು ಬಾಧಿಸದಿರಲು ಉಸಿರಾಟದವೊಲೆಮ್ಮ ಜೀವನದೊಳಾ ಕೃಷಿ ಇರಲು ನಿಸರ್ಗದೊಳಿಂತಪ್ಪುದಕೆಲ್ಲ ಮೂಗ ತೂರಿಸಲು ಅಸ್ತಮದುಸಿರಾಟ ಪುಸ್ಸೊತ್ತು ಯಂತ್ರದೊಳು - ವಿಜ್ಞಾನೇಶ್ವರಾ ***** Read More
ವಚನ ವರ ಕೃಷಿಯನರಿಯದೆ ಬರೆದರದು ಸಾಹಿತ್ಯವಾದೀತೇ? ಚಂದ್ರಶೇಖರ ಎ ಪಿMarch 30, 2023November 11, 2022 ಸುರಿದ ಬೆವರಿನ ಫಲದಿ ತೋಡು ಬಾವಿಯೊಳಂ ಕುರಿಪ ಜಲದ ತೆರದೊಳೆಮ್ಮ ಸಾಹಿತ್ಯವಿರಲದಕೆ ಶಕ್ತಿ ಬರಿದೋದುತೋದುತ ಬರೆವ ಸಾಹಿತ್ಯವದು ಬೋರು ನೀರಿನ ತೆರದಿ ಕ್ಷಣಿಕ ಕಾಸಿನ ಯುಕ್ತಿ ಸುರಿವಾಗಸಕೆ ಆಲಿಕೆಯಂತಿರ್ಪ ಹಸುರೆಲ್ಲದಕು ಶಕ್ತಿ - ವಿಜ್ಞಾನೇಶ್ವರಾ... Read More