Home / ಕವನ / ಕವಿತೆ / ಅವಳಲ್ಲಿ ನಾನು

ಅವಳಲ್ಲಿ ನಾನು

ಈ ಮಧ್ಯಾಹ್ನ ಅವಳು ದಾಟಿ
ಹೋದಳು ಹಾಗೆಯೇ ಇದ್ದವು
ಅರೆತೆರೆದ ಕಣ್ಣುಗಳು ಕನಸುಗಳು
ಅದು ಅಪರೂಪದ ದೃಶ್ಯವೆಂದು
ಅನಿಸಿಕೊಂಡಾಗಲೇ ಬೆರೆಯುತ್ತಿತ್ತು
ಬೆವರ ಹನಿಗಳು ಗಾಳಿಯಲಿ,
ಅವಳು ಮೆತ್ತಗೆ ನಡೆಯುತ್ತಿದ್ದಳು.

ಗಾಳಿಯಲಿ ತೇಲಿದ ಪರಾಗ
ಸೆರಗಿನಗುಂಟ ಹರಿದು, ಅವಳ
ಮೈಗೆ ಮೆತ್ತಿಕೊಂಡಿದೆ ದಣಿವು ಗಂಧ,
ಮನೆಯಲಿ ಮಿನುಗುವ ಕಣ್ಣುಗಳು
ಮಕ್ಕಳು ಹಾರಾಡಿವೆ ಹಾಗೆ ಚಿಟ್ಟೆಗಳಾಗಿ,
ಅವಳೆದೆಯ ತುಂಬ ಕೆಂಡಸಂಪಿಗೆ
ಅವಳು ಮೌನವಾಗಿ ಸರಿದು ಹೋಗಿದ್ದಾಳೆ.

ಶೂನ್ಯದ ಕ್ಷಣಗಳಲಿ ಒಂದಾದ
ಅವಳ ಕಣ್ಣೋಟಗಳು ಯಾಕೋ
ಎದೆಗೂಡಿನೊಳಗೆ ಕಟ್ಟಿವೆ ಜೇನುಗೂಡು,
ನಾನು ಅವಳೋ ಅವಳು ನಾನೋ
ಪ್ರಭೆಯಲಿ ಒಂದಾದ ಮರಳೋ
ಸಮರ ಹೂಡಿದ ಯೋಧರಂತೆ
ಸಾಗಿದ್ದೇವೆ ಟೊಂಕಕಟ್ಟಿ ಹರವಾದ ಬದುಕಿನಲ್ಲಿ.

ಇಂದು ನಿನ್ನೆಯಂಥೆ ಇಲ್ಲ ಅವಳು
ಬದಲಾಗಿದ್ದಳು ವಿಸ್ಮಯಗಳು ಘಟಿಸಿವೆ
ಯಾರೂ ಹೊರಳದ ದಾರಿಯ ತಿರುವಿನಲಿ
ಸಂಜೆಯ ಬಿಸಿಲಿನ ನೆರಳುಗಳು ಮುಳುಗಿ
ಹರಿದು ಹೋಗುತ್ತದೆ ನದಿಯ ಅಲೆ ಅಲೆಗಳು
ನಮ್ಮ ಕುರುಹುಗಳು ಅಲ್ಲಿ ಕಾಣುವವು
ಒಂದರೊಳಗೊಂದು ಇಳಿದಂತೆ ಹೊಕ್ಕಳ ಬಳ್ಳಿ ಬೇರುಗಳು!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...