Home / ಕವನ / ಕವಿತೆ / ಅವಳಲ್ಲಿ ನಾನು

ಅವಳಲ್ಲಿ ನಾನು

ಈ ಮಧ್ಯಾಹ್ನ ಅವಳು ದಾಟಿ
ಹೋದಳು ಹಾಗೆಯೇ ಇದ್ದವು
ಅರೆತೆರೆದ ಕಣ್ಣುಗಳು ಕನಸುಗಳು
ಅದು ಅಪರೂಪದ ದೃಶ್ಯವೆಂದು
ಅನಿಸಿಕೊಂಡಾಗಲೇ ಬೆರೆಯುತ್ತಿತ್ತು
ಬೆವರ ಹನಿಗಳು ಗಾಳಿಯಲಿ,
ಅವಳು ಮೆತ್ತಗೆ ನಡೆಯುತ್ತಿದ್ದಳು.

ಗಾಳಿಯಲಿ ತೇಲಿದ ಪರಾಗ
ಸೆರಗಿನಗುಂಟ ಹರಿದು, ಅವಳ
ಮೈಗೆ ಮೆತ್ತಿಕೊಂಡಿದೆ ದಣಿವು ಗಂಧ,
ಮನೆಯಲಿ ಮಿನುಗುವ ಕಣ್ಣುಗಳು
ಮಕ್ಕಳು ಹಾರಾಡಿವೆ ಹಾಗೆ ಚಿಟ್ಟೆಗಳಾಗಿ,
ಅವಳೆದೆಯ ತುಂಬ ಕೆಂಡಸಂಪಿಗೆ
ಅವಳು ಮೌನವಾಗಿ ಸರಿದು ಹೋಗಿದ್ದಾಳೆ.

ಶೂನ್ಯದ ಕ್ಷಣಗಳಲಿ ಒಂದಾದ
ಅವಳ ಕಣ್ಣೋಟಗಳು ಯಾಕೋ
ಎದೆಗೂಡಿನೊಳಗೆ ಕಟ್ಟಿವೆ ಜೇನುಗೂಡು,
ನಾನು ಅವಳೋ ಅವಳು ನಾನೋ
ಪ್ರಭೆಯಲಿ ಒಂದಾದ ಮರಳೋ
ಸಮರ ಹೂಡಿದ ಯೋಧರಂತೆ
ಸಾಗಿದ್ದೇವೆ ಟೊಂಕಕಟ್ಟಿ ಹರವಾದ ಬದುಕಿನಲ್ಲಿ.

ಇಂದು ನಿನ್ನೆಯಂಥೆ ಇಲ್ಲ ಅವಳು
ಬದಲಾಗಿದ್ದಳು ವಿಸ್ಮಯಗಳು ಘಟಿಸಿವೆ
ಯಾರೂ ಹೊರಳದ ದಾರಿಯ ತಿರುವಿನಲಿ
ಸಂಜೆಯ ಬಿಸಿಲಿನ ನೆರಳುಗಳು ಮುಳುಗಿ
ಹರಿದು ಹೋಗುತ್ತದೆ ನದಿಯ ಅಲೆ ಅಲೆಗಳು
ನಮ್ಮ ಕುರುಹುಗಳು ಅಲ್ಲಿ ಕಾಣುವವು
ಒಂದರೊಳಗೊಂದು ಇಳಿದಂತೆ ಹೊಕ್ಕಳ ಬಳ್ಳಿ ಬೇರುಗಳು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...