ಅವ್ವ

ರೊಟ್ಟಿ ತಟ್ಟೀ ತಟ್ಟೀ ಅವ್ವನ
ಕೈಯ ರೇಖೆಗಳು ಕರಗಿ
ಚಿಕ್ಕೀ ಬಳೆಗಳು ಮಾಸಿವೆ
ಒಲೆಯ ಖಾವಿಗೆ ಅವಳ ಬೆವರ,
ಹನಿಗಳು ಇಂಗಿ ಆವಿಯಾಗಿ ಮೋಡ
ಕಟ್ಟಿವೆ ಮನೆಯ ಮಾಡಿನ ಮೇಲೆ
ಅವಳೀಗ ನೀಲಿ ಆಕಾಶದ ಜೀವ ಹನಿ.

ಬಸವಳಿದ ಹೆರಿಗೆ ಮನೆ ಸಂಭ್ರಮ
ಸಾಂಬ್ರಾಣಿ ಹೊಗೆಯ ಅಗ್ನಿಕುಂಡ
ಬೆವರ ಋಣ ಉಪ್ಪಿನ ಋಣ
ಎಲ್ಲವನ್ನು ಅಂಟಿಸಿಕೊಂಡ ಅಡುಗೆ ಮನೆ,
ಗೋಡೆ ಅಲ್ಲಲ್ಲಿ ಹಕ್ಕಳು, ತೇಪೆಯ ಸಾರಣಿ
ಹಿಡಿದ್ದಾಳೆ. ತಿಕ್ಕಿದ ಕೊಡಪಾನಗಳಲಿ
ತುಂಬಿ ಜೀವಜಲ ಅವಳು ನದಿಯಾದವಳು.

ಕಣ್ಣು ಮುಚ್ಚಿ ನಿದ್ರಿಸುವ ಕರುಳ ಬಳ್ಳಿ
ತಟ್ಟಿ ಹಬ್ಬಲೆಂದು ಚಪ್ಪರ ಹಾಕಿ
ಪ್ರೀತಿ ಮಮತೆಯ ನೀರೆರೆದು
ಅಂಟಿನ ದಂಟಿನಲಿ ಮೊಗ್ಗು ಅರಳಿಸಿ
ಹಂತ ಹಂತಕ್ಕೇರಿಸುವ ಮಲ್ಲಿಗೆ ಗಿಡ
ಘಮ್ಮೆಂದು ಸೂಸಿ ಸೌರಭ ಒಳ ಹೊರಗೆ
ಗಾಳಿ ಗಂಧವಾಗಿ ಪಸರಿಸಿ ಚಂದನವಾದವಳು.

ಕಣ್ಣ ಬೊಂಬೆಯ ಒಲವಿನಲಿ ಕನಸು ಹರಡಿ
ಕೈ ಹಿಡಿದು ಕಾಲ ಚಲನೆ ಕಲಿಸಿದವಳು
ಪ್ರೀತಿ ಮನಕೆ ಬೀಜಬಿತ್ತಿ ಹಸಿರು ಚಿಗುರಿಸಿ
ಹದ ಮಾಡಿದ ಭೂಮಿ ತುಂಬ ಚರಗ ಚೆಲ್ಲಿ
ನಿಚ್ಚಳದ ಹಾದಿಯಲಿ ಸಾಲು ದೀಪವಿರಿಸಿ
ಎದೆಯ ಹಾಲಿನ ಪಾಯಸ ಉಣಿಸಿ
ಒಲವ ಹುಟ್ಟಿಸಿ ದೇವರ ಮನೆಯ ಮೂರ್ತಿಯಾದವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೭೧
Next post ಸೃಷ್ಟಿ ಪಲ್ಲವಿ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…