ಅವ್ವ

ರೊಟ್ಟಿ ತಟ್ಟೀ ತಟ್ಟೀ ಅವ್ವನ
ಕೈಯ ರೇಖೆಗಳು ಕರಗಿ
ಚಿಕ್ಕೀ ಬಳೆಗಳು ಮಾಸಿವೆ
ಒಲೆಯ ಖಾವಿಗೆ ಅವಳ ಬೆವರ,
ಹನಿಗಳು ಇಂಗಿ ಆವಿಯಾಗಿ ಮೋಡ
ಕಟ್ಟಿವೆ ಮನೆಯ ಮಾಡಿನ ಮೇಲೆ
ಅವಳೀಗ ನೀಲಿ ಆಕಾಶದ ಜೀವ ಹನಿ.

ಬಸವಳಿದ ಹೆರಿಗೆ ಮನೆ ಸಂಭ್ರಮ
ಸಾಂಬ್ರಾಣಿ ಹೊಗೆಯ ಅಗ್ನಿಕುಂಡ
ಬೆವರ ಋಣ ಉಪ್ಪಿನ ಋಣ
ಎಲ್ಲವನ್ನು ಅಂಟಿಸಿಕೊಂಡ ಅಡುಗೆ ಮನೆ,
ಗೋಡೆ ಅಲ್ಲಲ್ಲಿ ಹಕ್ಕಳು, ತೇಪೆಯ ಸಾರಣಿ
ಹಿಡಿದ್ದಾಳೆ. ತಿಕ್ಕಿದ ಕೊಡಪಾನಗಳಲಿ
ತುಂಬಿ ಜೀವಜಲ ಅವಳು ನದಿಯಾದವಳು.

ಕಣ್ಣು ಮುಚ್ಚಿ ನಿದ್ರಿಸುವ ಕರುಳ ಬಳ್ಳಿ
ತಟ್ಟಿ ಹಬ್ಬಲೆಂದು ಚಪ್ಪರ ಹಾಕಿ
ಪ್ರೀತಿ ಮಮತೆಯ ನೀರೆರೆದು
ಅಂಟಿನ ದಂಟಿನಲಿ ಮೊಗ್ಗು ಅರಳಿಸಿ
ಹಂತ ಹಂತಕ್ಕೇರಿಸುವ ಮಲ್ಲಿಗೆ ಗಿಡ
ಘಮ್ಮೆಂದು ಸೂಸಿ ಸೌರಭ ಒಳ ಹೊರಗೆ
ಗಾಳಿ ಗಂಧವಾಗಿ ಪಸರಿಸಿ ಚಂದನವಾದವಳು.

ಕಣ್ಣ ಬೊಂಬೆಯ ಒಲವಿನಲಿ ಕನಸು ಹರಡಿ
ಕೈ ಹಿಡಿದು ಕಾಲ ಚಲನೆ ಕಲಿಸಿದವಳು
ಪ್ರೀತಿ ಮನಕೆ ಬೀಜಬಿತ್ತಿ ಹಸಿರು ಚಿಗುರಿಸಿ
ಹದ ಮಾಡಿದ ಭೂಮಿ ತುಂಬ ಚರಗ ಚೆಲ್ಲಿ
ನಿಚ್ಚಳದ ಹಾದಿಯಲಿ ಸಾಲು ದೀಪವಿರಿಸಿ
ಎದೆಯ ಹಾಲಿನ ಪಾಯಸ ಉಣಿಸಿ
ಒಲವ ಹುಟ್ಟಿಸಿ ದೇವರ ಮನೆಯ ಮೂರ್ತಿಯಾದವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೭೧
Next post ಸೃಷ್ಟಿ ಪಲ್ಲವಿ

ಸಣ್ಣ ಕತೆ

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…