Home / ಕವನ / ಕವಿತೆ / ಅವ್ವ

ಅವ್ವ

ರೊಟ್ಟಿ ತಟ್ಟೀ ತಟ್ಟೀ ಅವ್ವನ
ಕೈಯ ರೇಖೆಗಳು ಕರಗಿ
ಚಿಕ್ಕೀ ಬಳೆಗಳು ಮಾಸಿವೆ
ಒಲೆಯ ಖಾವಿಗೆ ಅವಳ ಬೆವರ,
ಹನಿಗಳು ಇಂಗಿ ಆವಿಯಾಗಿ ಮೋಡ
ಕಟ್ಟಿವೆ ಮನೆಯ ಮಾಡಿನ ಮೇಲೆ
ಅವಳೀಗ ನೀಲಿ ಆಕಾಶದ ಜೀವ ಹನಿ.

ಬಸವಳಿದ ಹೆರಿಗೆ ಮನೆ ಸಂಭ್ರಮ
ಸಾಂಬ್ರಾಣಿ ಹೊಗೆಯ ಅಗ್ನಿಕುಂಡ
ಬೆವರ ಋಣ ಉಪ್ಪಿನ ಋಣ
ಎಲ್ಲವನ್ನು ಅಂಟಿಸಿಕೊಂಡ ಅಡುಗೆ ಮನೆ,
ಗೋಡೆ ಅಲ್ಲಲ್ಲಿ ಹಕ್ಕಳು, ತೇಪೆಯ ಸಾರಣಿ
ಹಿಡಿದ್ದಾಳೆ. ತಿಕ್ಕಿದ ಕೊಡಪಾನಗಳಲಿ
ತುಂಬಿ ಜೀವಜಲ ಅವಳು ನದಿಯಾದವಳು.

ಕಣ್ಣು ಮುಚ್ಚಿ ನಿದ್ರಿಸುವ ಕರುಳ ಬಳ್ಳಿ
ತಟ್ಟಿ ಹಬ್ಬಲೆಂದು ಚಪ್ಪರ ಹಾಕಿ
ಪ್ರೀತಿ ಮಮತೆಯ ನೀರೆರೆದು
ಅಂಟಿನ ದಂಟಿನಲಿ ಮೊಗ್ಗು ಅರಳಿಸಿ
ಹಂತ ಹಂತಕ್ಕೇರಿಸುವ ಮಲ್ಲಿಗೆ ಗಿಡ
ಘಮ್ಮೆಂದು ಸೂಸಿ ಸೌರಭ ಒಳ ಹೊರಗೆ
ಗಾಳಿ ಗಂಧವಾಗಿ ಪಸರಿಸಿ ಚಂದನವಾದವಳು.

ಕಣ್ಣ ಬೊಂಬೆಯ ಒಲವಿನಲಿ ಕನಸು ಹರಡಿ
ಕೈ ಹಿಡಿದು ಕಾಲ ಚಲನೆ ಕಲಿಸಿದವಳು
ಪ್ರೀತಿ ಮನಕೆ ಬೀಜಬಿತ್ತಿ ಹಸಿರು ಚಿಗುರಿಸಿ
ಹದ ಮಾಡಿದ ಭೂಮಿ ತುಂಬ ಚರಗ ಚೆಲ್ಲಿ
ನಿಚ್ಚಳದ ಹಾದಿಯಲಿ ಸಾಲು ದೀಪವಿರಿಸಿ
ಎದೆಯ ಹಾಲಿನ ಪಾಯಸ ಉಣಿಸಿ
ಒಲವ ಹುಟ್ಟಿಸಿ ದೇವರ ಮನೆಯ ಮೂರ್ತಿಯಾದವಳು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...