ರಂಗವಲ್ಲಿ

ತಿಕ್ಕಿ ತೀಡಿ ಕಸಗುಡಿಸಿ
ನೀರೆರೆಚಿ ಹದ ಮಾಡಿ ಮಣ್ಣು
ಬಿಳುಪು ನುಣ್ಣಗಿನ ರಂಗೋಲಿ ಹಿಟ್ಟು
ತೋರು-ಹೆಬ್ಬೆರಳಿನ ಮಧ್ಯೆ
ನಾಜೂಕು ಬೊಟ್ಟು!

ಚುಕ್ಕೆ ಚುಕ್ಕೆಗಳ ಎಣಿಸಿ
ಸಮಾನಾಂತರದಿ ಬಿಡಿಸಿ
ಆಚೀಚೆ ರೇಖೆ ಜಾರದಂತೆ ಒರೆಸಿ
ಒಂದಿನಿತೂ ಲೆಕ್ಕ
ತಪ್ಪುವಂತಿಲ್ಲ ಇಲ್ಲಿ.

ಚಿತ್ತ ಚಿತ್ತಾರವಾಗಿ
ಮನದೊಳಗೇ ಕುಳಿತು
ಶಿಲ್ಪ ಕುಟ್ಟುತ್ತಿದ್ದ ಮರಕುಟಿಗ
ಚಿತ್ತವನ್ನೇ ಚಿತ್ರವಾಗಿಸಿ
ಹಾದಿಬೀದಿಯವರ ಕಣ್ಣರಳಿಸಿ
ಕಣ್ಣಿರುವವರ ಮನವರಳಿಸಿ
ನಲಿಸಿ-ನಗಿಸಿದ ರಂಗವಲ್ಲಿ

ಹೊತ್ತು ಏರಿದಂತೆಲ್ಲಾ
ಕಣ್ಣಿದ್ದೂ ಇಲ್ಲದವರ ಕಾಲ್ತುಳಿತಕ್ಕೆ ಸಿಕ್ಕು
ಸತ್ತು ಸುಣ್ಣವಾಗಿ
ಕದಡಿದ ಅಸ್ಪಷ್ಟ ರೇಖೆಗಳ
ವಿಕಾರ ರೂಪವಾಗಿ
ಹೊರ ಹರಿಯದ ಬಿಕ್ಕು!

ಮಣ್ಣೊಳಗೆ ಹದ ಕಲಸಿದ
ಕಣ್ಣೀರಾಗಿ ಬೆರೆತು
ಅವರಿವರ ಅಡಿಗಳ
ಕೆಳಗೆ ಹೂತು
ಅನಾಥವಾಗಿ ಮರೆಯಾಗುತ್ತದೆ
ಸೋತು!
ಆದರೂ
ನಾಳೆಗೆ ಮತ್ತೆ ಹೊಸತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ + ಏಜು
Next post ನಾನು ನಾನೇ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…