Home / ಕವನ / ಕವಿತೆ / ಬದುಕೆಂದರೆ ಇಲ್ಲಿ…

ಬದುಕೆಂದರೆ ಇಲ್ಲಿ…

ಅನಿಧಿಕೃತ ಸಮರದಲಿ
ಜೀವ ವಿಶೇಷಗಳ ತಾಣ
ಕ್ಷಣದಲ್ಲಾಯ್ತು ಮಸಣ

ಕುಡಿಯೊಡೆದು ಚಿಗುರಿದ
ನಂದನವನವೆಲ್ಲಾ
ನಿಮಿಷದಲಿ
ಮರುಭೂಮಿಯಾಯ್ತಲ್ಲಾ!

ಗಡಿಮೀರಿ
ಒಳನುಗ್ಗಿದ್ದು ಅವರ ತಪ್ಪೊ?
ಬಿಟ್ಟಿದ್ದು ಇವರ ತಪ್ಪೊ?
ಬೇಕಿಲ್ಲ ತಪ್ಪುಸರಿಗಳ ಅಳತೆ
ರಾಜಕೀಯ ಕುತಂತ್ರದಲಿ
ತಕ್ಕಡಿ ಸರಿದೂಗೀತೇ?

ಕಪಟದೂತ್ಯವ ಆಡುವವರಾರೋ?
ದಾಳ ಒಗೆದವರಾರೋ?
ಗೆದ್ದವರಾರೋ? ಸೋತವರಾರೋ?
ಮುನ್ನುಗ್ಗಿದವರಾರೋ? ಹಿಮ್ಮೆಟ್ಟಿದವರಾರೋ?

ಏನಿಲ್ಲಾ, ಎಂತಿಲ್ಲ
ಸುಮ್ಮಸುಮ್ಮನೆ ಮಣ್ಣೊಳಗೆ
ರಕ್ತದ ನದಿಯಾದವರ
ಲೆಕ್ಕವಿಟ್ಟವರಾರು?
ಅವರಿವರ ತಪ್ಪಿಗೆ.
ತಪ್ಪಿಲ್ಲದೆಯೂ
ಬಲಿಪಶುವಾದರು ಹಲರು.

ನಮ್ಮವನದೋ, ಪರಕೀಯನದೋ
ಜೀವ ಜೀವವೇ ತಾನೇ?
ದೇಶಕ್ಕೆ ಗಡಿಯಷ್ಟೆ
ಸೃಷ್ಟಿಗೆ ಗಡಿಗಳಿವೆಯೆ?
ನಾಳೆಗೇ ಬೆಂಕಿಯೆಲ್ಲವೂ ಆರಿ
ಬೂದಿಯುಳಿದೀತು ಬರಿ.

ಆದರೆ… ಆದರೆ ಹೇಗಳಿಸುವುದು?
ಹೇಗಳಿಸುವುದು ಬಿಸಿ ನೆತ್ತರಿನ ಗುರುತುಗಳನ್ನು?
ಹೇಗೆ ಒರೆಸುವುದು ಸಂಬಂಧಿಗಳ
ಕಣ್ಣೀರಿನ ಶರಧಿಗಳನು?
ಬೇಕೆಂದರೂ ಈಗ
ತರಲಾದೀತೆ ಮತ್ತೆ ಜೀವಗಳನ್ನು?

ಬದುಕೆಂದರೆ ಇಲ್ಲಿ ಹೇ ತಂದೆ
ಮಾರಕಾಸ್ತ್ರಗಳಾಟವೇ?
ರುಂಡ ಚೆಂಡಾಡುವ ಹೂಟವೇ?
ರಾಶಿಹೆಣಗಳ ಕೂಟವೇ?
ಕಣ್ಣಾಮುಚ್ಚೆ ಮಕ್ಕಾಳಾಟವೇ?

ಬದುಕಿಸುವ ಮಂತ್ರ ಅರಿಯದ
ಹುಲುಮನುಜ
ಬದುಕು ಅಳಿಸುವ ತಂತ್ರ ಅರಿತದ್ದು
ಸರಿಯೇ ಪ್ರಭುವೇ?
ಇಲ್ಲಿ ಜೀವಕ್ಕೆ
ಬೆಲೆ ಇದೆಯೇ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...