Home / ಲೇಖನ / ಇತರೆ / ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ ಪ್ರಮುಖ ಸ್ಥಾನದಲ್ಲಿ ಕಂಗೊಳಿಸುತ್ತಿದೆ. (ಲೇಖಕಿ ಆಕೆಯ ಪುಸ್ತಕವನ್ನು ನಾನು ಓದಬೇಕೆಂದು, ಮತ್ತೆ ಮತ್ತೆ ಓದಬೇಕೆಂದು ಇಚ್ಛಿಸಿರಬಹುದು.)

ಅದು ಸುಮಾರು ೧,೦೦೦ ಪ್ಯಾರಾಗಳನ್ನು ಹೊಂದಿದೆ. ಎಲ್ಲ ಪ್ಯಾರಾಗಳೂ ಭವ್ಯ ಪ್ಯಾರಾಗಳು (ಪ್ಯಾರ್ ಕಾ ಪ್ಯಾರಾ). ಮೊದಲನೇ ಪ್ಯಾರಾವು ೧೯೫೬ ಅಕ್ಟೋಬರ್ ೧೭ ರಂದು ಆದ ಪ್ರಪಂಚದ ಮೊಟ್ಟ ಮೊದಲನೇ ಪೂರ್ಣ ಪ್ರಮಾಣದ ಅಣುಶಕ್ತಿ ಕೇಂದ್ರದ ಉದ್ಘಾಟನೆಯ ಬಗ್ಗೆ ತಿಳಿಸುತ್ತದೆ.

ಆ ಪುಸ್ತಕವು ಭಾರತದಲ್ಲಿ ಔದ್ಯೋಗಿಕ ವಿಕಾಸದಲ್ಲಿ ಅಣುಶಕ್ತಿ ಸ್ಥಾವರಗಳ ಪಾತ್ರವನ್ನು ನಮಗೆ ತಿಳಿಸುತ್ತದೆ.

ಈ ಸಂದರ್ಭದಲ್ಲಿ ನಾವು, ನಮ್ಮರಾಷ್ಪ್ರವು ನಾಗರಿಕ ಪ್ರಯೋಜನಕ್ಕಾಗಿ ಅಣುಶಕ್ತಿ ಒಪ್ಪಂದಕ್ಕೆ ರುಜು ಹಾಕಿ ಖಾತರಿಪಡಿಸುವುದರಲ್ಲಿ ಶ್ರಮಿಸಿದ ಪುರುಷ ಮತ್ತು ಮಹಿಳೆಗೆ ಕೃತಜ್ಞರಾಗಿರಬೇಕು. ಆ ಇಬ್ಬರು ಮಹಾವ್ಯಕ್ತಿಗಳು ಯಾರು ? ಅಣು ಒಪ್ಪಂದದ ಹಿಂದಿನ ಪುರುಷ ನಮ್ಮ ಪ್ರಿಯ ಡಾ|| ಮನಮೋಹನ್ ಸಿಂಗ್, ಪ್ರಧಾನ ಮಂತ್ರಿಗಳು ಮತ್ತು ಅಣು ಒಪ್ಪಂದದ ಹಿಂದಿನ ಮಹಿಳೆ ನಮ್ಮ ಜನಪ್ರಿಯ ಶ್ರೀಮತಿ ಸೋನಿಯಾ ಗಾಂಧಿ, ಯುಪಿ‌ಎದ ಮಾನ್ಯ ಅಧ್ಯಕ್ಷೆ.

ಈ ಅಣುಶಕ್ತಿ ಒಪ್ಪಂದದ ಫಲವನ್ನು ಉಪಯೋಗಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಮುಖ್ಯಮಂತ್ರಿ ನಮ್ಮ ಪ್ರೀತಿಯ ಡಾ || ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ಕೇಂದ್ರಕ್ಕೆ ಬರೆದು ಪ್ರಸ್ತಾಪಿಸಲ್ಪಟ್ಟ ೨೧೦ ಎಂ. ಡಬ್ಲೂ. ಘಟಕಗಳ ಬದಲಾಗಿ ಎರಡು ೭೦೦ ಎಂ. ಡಬ್ಲೂ. ಅಣುಶಕ್ತಿ ಘಟಕಗಳನ್ನು ವಿಸ್ತರಣಕ್ಕಾಗಿ ಕೈಗಾದಲ್ಲಿ ಸ್ಥಾಪಿಸಲು ಕೇಳಿದ್ದಾರೆ. ಅವರು ರಾಜ್ಯದಲ್ಲಿ ದೊಡ್ಡಗಾತ್ರದ ಅಣು ರಿಯಾಕ್ಟರ್‌ಗಳನ್ನೊಳಗೊಂಡ ಅಣುಶಕ್ತಿ ಪಾರ್ಕನ್ನು ಸ್ಥಾಪಿಸಲೂ ಒತ್ತಾಯಿಸಹುದು.

ನಮ್ಮ ಮುಖ್ಯಮಂತ್ರಿಗಳ ವಿರೋಧಿಗಳು ನಮ್ಮ ಮುಖ್ಯಮಂತ್ರಿ ಅವರು ಬಹಳ ‘ಪವರ್ ಹಂಗ್ರಿ’ ಎಂದು ಹೇಳುತ್ತಾರೆ. ಆದರೆ ನಮ್ಮ ಜನಪ್ರಿಯ ಮುಖ್ಯಮಂತ್ರಿಯವರಿಗೆ ಪವರ್ ಅಂದರೆ ಥರ್ಮಲ್ ಪವರ್ (ತಾಪಶಕ್ತಿ), ನ್ಯೂಕ್ಲಿಯರ್ ಪವರ್ (ಅಣುಶಕ್ತಿ), ಸೋಲಾರ್ ಪವರ್ (ಸೌರಶಕ್ತಿ), ಹೈಡಲ್ ಪವರ್ (ಜಲವಿದ್ಯುಚ್ಛಕ್ತಿ) ಮತ್ತು ವಿಂಡ್‌ಪವರ್ (ವಾಯುಶಕ್ತಿ). ಅವರು ಅನೇಕ ಶಕ್ತಿಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ರಾಜ್ಯವು ಕ್ರಿ.ಶ. ೨೦೧೪ ರ ಹೊತ್ತಿಗೆ ೧೪,೦೦೦ ಎಂ.ಡಬ್ಲೂ. ಶಕ್ತಿಯನ್ನು ಉತ್ಪಾದಿಸಿ ಸಾಕಷ್ಟು ಶಕ್ತಿಯನ್ನು ಪಡೆದುಕೊಳ್ಳುವುದೆಂದು ನನಗೆ ನಂಬಿಕೆ ಇದೆ.

ನನಗೆ ಅಣುವು ಯಾವಾಗಲೂ ಒಂದು ಗಹನ ಸೌಂದರ್ಯವಾಗಿತ್ತು. ಅಣುವಿನ ಕೇಂದ್ರ ನನಗೆ ಸಿಲುಕದೆಂದು ನನಗೆ ಗೊತ್ತಿತ್ತು. ಆದರೂ ಅದನ್ನು ತಲುಪುವುದಕ್ಕಾಗಿ ಸರ್. ಜಾರ್ಜ್. ಥಾಮಸನ್ ಮತ್ತು ಅನೇಕ ಪುಸ್ತಕಗಳನ್ನು ಓದಿ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೂ ಅಣುವಿನ ಕೇಂದ್ರದತ್ತ ನನ್ನ ದೂರ ಪ್ರಯಾಣದಲ್ಲಿ ಮೊದಲ ಮೈಲಿಯಲ್ಲೇ ನಾನೇಕೆ ನಿಂತು ಹೋಗಿದ್ದೇನೋ ನನಗೆ ನಿಜವಾಗಿಯೂ ತಿಳಿಯದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...