ಕೆಳಗೆಳೆಯುತ್ತವೆ

ಈ ನೆಲ, ಕಲ್ಲು-ಮಣ್ಣು, ಈ ವಾಸ್ತವತೆ ವ್ಯವಹಾರ
ಈ ಲಿಂಗ ಬೇರು, ಈ ಅಳ, ಈ ಎಲುಬು, ಈ ಗರ್ಭಗುಡಿ
ಈ ಸಾವು ಗೋಳು, ಈ ಮಾಂಸದ ಹಸಿವು ಕರುಳಿನ ನಾಚಿಕೆಗೇಡಿತನ
ಈ ಕಾಲದ ಕರಾಳ ಹಸ್ತ, ಈ ಇರುಳ ಕಾಳ ಕುಂತಳ
ಲೋಕಗೆದ್ದ ಹಣ, ಹೆದರಿಸುವ ಹೆಣ
ಈ ಹಗರಣ ಹಗಲು, ಒಣ ದುರುಗಣ್ಣ ಬಿಸಿಲು
ನರಗಳ ನರಳಾಟ, ರೋಮಗಳ ಉದ್ರೇಕ
ಈ ರಕ್ತದ ಹರಿದಾಟ, ತಲೆಯ ಕೊಸರಾಟ
ಈ ನಾಲಿಗೆಯ ಉದ್ದ ಈ ಒಡಲ ಅಗಲ
ಈ ಜನಾಂಗಗಳ ಅನಾದಿ ಬೇರು ಬಿಳಲು
ಬದುಕಿನ ಪಾತಾಳ ಸತ್ಯಗಳು

ಇವೆಲ್ಲ ನನ್ನನ್ನು ಮೇಲೆ ಹಾರಗೊಡುವುದಿಲ್ಲ
ಹಾರಿ ಹಾರಿ ಪರಲೋಕಗಳ, ಪುರಾಣದೇವತೆಗಳ, ರಂಜಕತೆಗಳ
ಓಕುಳಿಯಾಟಗಳ ಕಲ್ಪನೆಯ ಗುಳ್ಳೆಗಳನಪ್ಪದಂತೆ ಕೆಳಗೆಳೆಯುತ್ತವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾವನ ಮನೆ
Next post ಎಲ್ಲರಿಗೂ ಹಗಲಿರಲಿ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys