ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಹಿಮಶೈಲ ಕಾಯುವ
ಮಗನೇ ನೀನೆಲ್ಲಿದ್ದೀಯೋ
ನನಗೊಂದೂ ಗೊತ್ತಿಲ್ಲ.
ಕಾಲಿಗೆರಗಿ ಹೊರಟ ಆ ದಿನ-
ಕಣ್ಣೀರು ಒರೆಸಿದ್ದೇನು
ಮುದ್ದಾಗಿ ಮಾತಾಡಿ ನಗಿಸಿದ್ದೇನು
ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ
ಹೊರಟೆಯಲ್ಲ! ಮಗಾ
ಈಗ ನಿನೆಲ್ಲಿದ್ದೀಯೋ ನನ್ನ ಕಂದಾ.

ಆ ಹಿಮಮಳೆ ಚಳಿಗಂಜದೆ ಮುನ್ನುಗ್ಗುವ
ನಿನ್ನ ಬಿಸಿರಕ್ತದ ಕೆಚ್ಚೆದೆಯ ಹೆಜ್ಜೆಗಳನು
ಕಣ್ಣಲ್ಲೇ ತುಂಬಿಕೊಂಡಿದ್ದೇನೆ.
ಕಾರ್ಗಿಲ್ಲಿನ ಕಿಡಿ
ನಿನ್ನ ಕಿಡಿಕಿಡಿಯಾಗಿರಿಸಿದರೂ
ನನ್ನ ಮನ ಕಾರ್ಗತ್ತಲೆಯಂತೆ
ವ್ಯಾಕುಲಗೊಳ್ಳುತ್ತಿದೆಯಲ್ಲ! ಮಗಾ
ಯಾವ ಕಣಿವೆಯ ಆಳೆತ್ತರದಲ್ಲಿರುವಿಯೋ,
ನನ್ನ ಕಣ್ಮಣಿ.

ಅಬ್ಬರಿಸುವ ಗುಂಡು ಮದ್ದು ಬಂದೂಕುಗಳಿಗೆ
ನೆಲ ನಡುಗಿದಂತೆ ಒಳಗೊಳಗೇ
ನಾನೂ ನಡುಗುತಿರುವೆ
ಅಸಹಾಯಕ ಪಂಜರದ ಗಿಳಿಯಂತೆ
ಅತ್ತಿಂದಿತ್ತ ಸುತ್ತುತ
ದುಃಖ ಗಂಟಲಿನೊಳಗೇ ಹೂತಿಟ್ಟು
ಹೆತ್ತೊಡಲ ಸಂಕಟ ಹೊಟ್ಟೆಯೊಳಗೇ ಹಾಕಿ
ವೀರಯೋಧನ ತಾಯಿ ಎನ್ನುತ
ಒಮ್ಮೊಮ್ಮೆ ಇಬ್ಬಗೆಯ ನೀತಿಗೂ
ಕಣ್ಣೀರು ಸುರಿಸುತ ಒರೆಸುತ
ರಣರಂಗದ ನಿನ್ನೆದೆಯ ಕೆಚ್ಚತನಕೆ
ನಾನೂ ಸೋಲುತ ಗೆಲ್ಲುತ
ನಿನಗಾಗಿ, ದೇಶಕ್ಕಾಗಿ
ಪ್ರಾರ್ಥಿಸುತ್ತಿದ್ದೇನೆ ಮಗಾ.

ಪ್ರೀತಿಪ್ರೇಮ ವಿಶ್ವಾಸಕೆ
ಮೋಸಬಗೆದ ದ್ರೋಹಿಗಳ ನೀತಿಗೆ
ವೀರ ಮಕ್ಕಳು ಜೀವತೆತ್ತು
ಶಿಖರದ ಆಳೆತ್ತರಕೂ ನೆತ್ತರಚಿಮ್ಮಿ
ವೀರಸ್ವರ್ಗ ಏರುತ್ತಿದ್ದಾರಲ್ಲ.
ದೃತಿಗೆಡಬೇಡ ಕಾರ್ಗಿಲ್ಲಿನ
ಕಾರ್ಗತ್ತಲೆಯಲ್ಲೂ ಹೊನ್ನಕಿರಣ
ಬಂದೇ ಬರುತ್ತದೆ ಮಗಾ-
ಕೆಚ್ಚೆದೆಯಿಂದ ಇರು ನನ್ನ ವೀರಪುತ್ರಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೇತನ
Next post ಗಂಡ ಉವಾಚ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…