Home / ಕವನ / ಕವಿತೆ / ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಹಿಮಶೈಲ ಕಾಯುವ
ಮಗನೇ ನೀನೆಲ್ಲಿದ್ದೀಯೋ
ನನಗೊಂದೂ ಗೊತ್ತಿಲ್ಲ.
ಕಾಲಿಗೆರಗಿ ಹೊರಟ ಆ ದಿನ-
ಕಣ್ಣೀರು ಒರೆಸಿದ್ದೇನು
ಮುದ್ದಾಗಿ ಮಾತಾಡಿ ನಗಿಸಿದ್ದೇನು
ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ
ಹೊರಟೆಯಲ್ಲ! ಮಗಾ
ಈಗ ನಿನೆಲ್ಲಿದ್ದೀಯೋ ನನ್ನ ಕಂದಾ.

ಆ ಹಿಮಮಳೆ ಚಳಿಗಂಜದೆ ಮುನ್ನುಗ್ಗುವ
ನಿನ್ನ ಬಿಸಿರಕ್ತದ ಕೆಚ್ಚೆದೆಯ ಹೆಜ್ಜೆಗಳನು
ಕಣ್ಣಲ್ಲೇ ತುಂಬಿಕೊಂಡಿದ್ದೇನೆ.
ಕಾರ್ಗಿಲ್ಲಿನ ಕಿಡಿ
ನಿನ್ನ ಕಿಡಿಕಿಡಿಯಾಗಿರಿಸಿದರೂ
ನನ್ನ ಮನ ಕಾರ್ಗತ್ತಲೆಯಂತೆ
ವ್ಯಾಕುಲಗೊಳ್ಳುತ್ತಿದೆಯಲ್ಲ! ಮಗಾ
ಯಾವ ಕಣಿವೆಯ ಆಳೆತ್ತರದಲ್ಲಿರುವಿಯೋ,
ನನ್ನ ಕಣ್ಮಣಿ.

ಅಬ್ಬರಿಸುವ ಗುಂಡು ಮದ್ದು ಬಂದೂಕುಗಳಿಗೆ
ನೆಲ ನಡುಗಿದಂತೆ ಒಳಗೊಳಗೇ
ನಾನೂ ನಡುಗುತಿರುವೆ
ಅಸಹಾಯಕ ಪಂಜರದ ಗಿಳಿಯಂತೆ
ಅತ್ತಿಂದಿತ್ತ ಸುತ್ತುತ
ದುಃಖ ಗಂಟಲಿನೊಳಗೇ ಹೂತಿಟ್ಟು
ಹೆತ್ತೊಡಲ ಸಂಕಟ ಹೊಟ್ಟೆಯೊಳಗೇ ಹಾಕಿ
ವೀರಯೋಧನ ತಾಯಿ ಎನ್ನುತ
ಒಮ್ಮೊಮ್ಮೆ ಇಬ್ಬಗೆಯ ನೀತಿಗೂ
ಕಣ್ಣೀರು ಸುರಿಸುತ ಒರೆಸುತ
ರಣರಂಗದ ನಿನ್ನೆದೆಯ ಕೆಚ್ಚತನಕೆ
ನಾನೂ ಸೋಲುತ ಗೆಲ್ಲುತ
ನಿನಗಾಗಿ, ದೇಶಕ್ಕಾಗಿ
ಪ್ರಾರ್ಥಿಸುತ್ತಿದ್ದೇನೆ ಮಗಾ.

ಪ್ರೀತಿಪ್ರೇಮ ವಿಶ್ವಾಸಕೆ
ಮೋಸಬಗೆದ ದ್ರೋಹಿಗಳ ನೀತಿಗೆ
ವೀರ ಮಕ್ಕಳು ಜೀವತೆತ್ತು
ಶಿಖರದ ಆಳೆತ್ತರಕೂ ನೆತ್ತರಚಿಮ್ಮಿ
ವೀರಸ್ವರ್ಗ ಏರುತ್ತಿದ್ದಾರಲ್ಲ.
ದೃತಿಗೆಡಬೇಡ ಕಾರ್ಗಿಲ್ಲಿನ
ಕಾರ್ಗತ್ತಲೆಯಲ್ಲೂ ಹೊನ್ನಕಿರಣ
ಬಂದೇ ಬರುತ್ತದೆ ಮಗಾ-
ಕೆಚ್ಚೆದೆಯಿಂದ ಇರು ನನ್ನ ವೀರಪುತ್ರಾ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...