Home / ಕವನ / ಕವಿತೆ / ಅಡ್ಡಗೋಡೆ ದೀಪಗಳು

ಅಡ್ಡಗೋಡೆ ದೀಪಗಳು

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ,
ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ
ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು
ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ)
ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು
ನೋವು ರಕ್ತದೊತ್ತಡದ ಅವರೆದೆಗೆ
ಮತ್ತೆ ಮತ್ತೆ ಶೂಲ ತ್ರಿಶೂಲ!

ಗ್ರಹಣ ವೇದೋಪನಿಷತ್ ಪಠಣದೊಳಗೆ
ಜನಿವಾರ ಬದಲಾಯಿಸಿ ಮಡಿಯಾಗುತ್ತಿದ್ದರೆ
ಕ್ಲಬ್ಬಿನ ತುಂಬೆಲ್ಲ ಹುಳಿವಾಸನೆಗೆ
ಕರಿದ ಮಾಂಸಕ್ಕೆ ಡಿಸ್ಕೋ ತಾಳ
ಮಕ್ಕಳು ಮೊಮ್ಮಕ್ಕಳು ಅವರ ಹೆಂಡತಿಯರು
ಸರ ಬಳೆ ಮೂಗುತಿ ಸೀರೆಗಳ ಮಾತು
ಆಚೆ ಕುಡುಕರಿಗೆ ಬಾಯ್ತುಂಬ ನಗು.

ತುಕ್ಕು ಹಿಡಿದ ಲಾಂದ್ರ ಫಿಲಿಪ್ಸ ಬಲ್ಬುಗಳ
ವಿಚಾರಧಾರೆಗಳ ತಿಕ್ಕಾಟ ಹೊಕ್ಕಾಟಕೆ
ಒಳಗೊಳಗೆ ಅಳು ನಗುವುಗಳ ಬಿಸಿಲುಮಳೆ
ವಿದೇಶಿ ಐಶಾರಾಮಿ ಸವಲತ್ತು
ಬೇಕಾದಾಗೆಲ್ಲ ಸಾಧಿಸಿಕೊಳ್ಳುವ ಡೊಳ್ಳುಗಳು
ಸಂಜೆ ಭಾಷಣ ಬಹಿರಂಗ ಸಭೆಗಳಲಿ
ತೋರಿಕೆಗೆ ಟೆಬಲ್‌ಕುಟ್ಟಿ
ನೀತಿಗಳ ಬಗೆಗೆ ಮಾತನಾಡುವ ಅಡ್ಡಗೋಡೆಗಳು.

ಹಸಿವು ನೀರು ಬರಗಾಲಕೆ ಹಣಮಾಡುವ
ಯೋಜನಾ ಶಿಬಿರಗಳ ಉದ್ದನೆಯಪಟ್ಟಿ-
ಇವುಗಳಿಗೆ ಮನೆಗೆ ಬಣ್ಣ ಸುಣ್ಣ
ಸೋಫಾ ಬದಲಿಸಿಕೊಳ್ಳುವ ಸಂಭ್ರಮದ ಸಮಯ
ಇಪ್ಪತ್ತೆಂಟು ಇಂಚಿನ ಟಿ. ವಿ. ಹಾಕಿ
ಜಗತ್ತನ್ನೇ ನೋಡುವ ಇವುಗಳೆಲ್ಲಿ
ಗುಡಿಸಲಲ್ಲೇ ಕೊಳೆತು
ಸಾಯುತ್ತೇವೆನ್ನುವ ಅವುಗಳೆಲ್ಲ
ಜಾಗತೀಕರಣ ಉದಾರೀಕರಣದ ಬಗೆಗೆ
ಉದ್ದುದ್ದ ಅಡ್ಡಡ್ಡ ಮಾತನಾಡುವ
ಅಡ್ಡಗೋಡೆ ದೀಪಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...