Home / ಕವನ / ಕವಿತೆ / ಅಡ್ಡಗೋಡೆ ದೀಪಗಳು

ಅಡ್ಡಗೋಡೆ ದೀಪಗಳು

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ,
ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ
ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು
ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ)
ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು
ನೋವು ರಕ್ತದೊತ್ತಡದ ಅವರೆದೆಗೆ
ಮತ್ತೆ ಮತ್ತೆ ಶೂಲ ತ್ರಿಶೂಲ!

ಗ್ರಹಣ ವೇದೋಪನಿಷತ್ ಪಠಣದೊಳಗೆ
ಜನಿವಾರ ಬದಲಾಯಿಸಿ ಮಡಿಯಾಗುತ್ತಿದ್ದರೆ
ಕ್ಲಬ್ಬಿನ ತುಂಬೆಲ್ಲ ಹುಳಿವಾಸನೆಗೆ
ಕರಿದ ಮಾಂಸಕ್ಕೆ ಡಿಸ್ಕೋ ತಾಳ
ಮಕ್ಕಳು ಮೊಮ್ಮಕ್ಕಳು ಅವರ ಹೆಂಡತಿಯರು
ಸರ ಬಳೆ ಮೂಗುತಿ ಸೀರೆಗಳ ಮಾತು
ಆಚೆ ಕುಡುಕರಿಗೆ ಬಾಯ್ತುಂಬ ನಗು.

ತುಕ್ಕು ಹಿಡಿದ ಲಾಂದ್ರ ಫಿಲಿಪ್ಸ ಬಲ್ಬುಗಳ
ವಿಚಾರಧಾರೆಗಳ ತಿಕ್ಕಾಟ ಹೊಕ್ಕಾಟಕೆ
ಒಳಗೊಳಗೆ ಅಳು ನಗುವುಗಳ ಬಿಸಿಲುಮಳೆ
ವಿದೇಶಿ ಐಶಾರಾಮಿ ಸವಲತ್ತು
ಬೇಕಾದಾಗೆಲ್ಲ ಸಾಧಿಸಿಕೊಳ್ಳುವ ಡೊಳ್ಳುಗಳು
ಸಂಜೆ ಭಾಷಣ ಬಹಿರಂಗ ಸಭೆಗಳಲಿ
ತೋರಿಕೆಗೆ ಟೆಬಲ್‌ಕುಟ್ಟಿ
ನೀತಿಗಳ ಬಗೆಗೆ ಮಾತನಾಡುವ ಅಡ್ಡಗೋಡೆಗಳು.

ಹಸಿವು ನೀರು ಬರಗಾಲಕೆ ಹಣಮಾಡುವ
ಯೋಜನಾ ಶಿಬಿರಗಳ ಉದ್ದನೆಯಪಟ್ಟಿ-
ಇವುಗಳಿಗೆ ಮನೆಗೆ ಬಣ್ಣ ಸುಣ್ಣ
ಸೋಫಾ ಬದಲಿಸಿಕೊಳ್ಳುವ ಸಂಭ್ರಮದ ಸಮಯ
ಇಪ್ಪತ್ತೆಂಟು ಇಂಚಿನ ಟಿ. ವಿ. ಹಾಕಿ
ಜಗತ್ತನ್ನೇ ನೋಡುವ ಇವುಗಳೆಲ್ಲಿ
ಗುಡಿಸಲಲ್ಲೇ ಕೊಳೆತು
ಸಾಯುತ್ತೇವೆನ್ನುವ ಅವುಗಳೆಲ್ಲ
ಜಾಗತೀಕರಣ ಉದಾರೀಕರಣದ ಬಗೆಗೆ
ಉದ್ದುದ್ದ ಅಡ್ಡಡ್ಡ ಮಾತನಾಡುವ
ಅಡ್ಡಗೋಡೆ ದೀಪಗಳು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...