ನನ್ನ ಮುದ್ದು ಚಿಲಿಪಿಲಿ ಗಿಣಿಯೇ

ನನ್ನ ಮುದ್ದು ಚಿಲಿಪಿ ಗಿಣಿಯೇ
ಬಂಗಾರ ತುಂಬಿದ ಗಣಿಯೇ
ಹೂನಗೆ ಅರಳಿದೀ ಮುಖಕೆ
ಹುಣ್ಣಿಮೆ ಆಕಾಶ ಎಣೆಯೇ?

ಹೇಗಿರದೆ ನೀನಿದ್ದೆ ಮಗುವೇ?
ಕತ್ತಲಾಗಿತ್ತಲ್ಲ ಜಗವೇ
ನೀ ಬಂದು ನಗಲು ಈ ಇಳೆಗೇ
ಹರಿದಿದೆ ಬೆಳಕಿನ ಹೊಳೆಯೇ!

ರಸಹೀನವಾಗಿತ್ತು ಬಾಳು-ಈಗ
ಮೊಸರು ಜೇನು ಬೆಣ್ಣೆ ಹಾಲು
ಹಾಳು ಸುರಿಯುತ್ತಿದ್ದ ಹಾದಿ – ಈಗ
ದೇವರ ಉತ್ಸವ ಬೀದಿ!

ಜನ್ಮ ಜನ್ಮದ ಪೂಜೆ ಫಲಿಸಿ
ದೇವರೆ ಬಂದರೊ ಹರಸಿ
ಬರಿದಿದ್ದ ತೋಳಿನ ತುಂಬ
ಉಡುಪಿ ಕೃಷ್ಣನ ಮುದ್ದು ಬಿಂಬ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುನಿ
Next post ಮಂಥನ – ೮

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…