Home / ಕವನ / ಕವಿತೆ / ಎಂಥ ಭಾರತ ೨

ಎಂಥ ಭಾರತ ೨

ಇಲ್ಲಿಯವರೆಗೆ ನಿರೋಧ-ನಿಷೇಧಗಳ ಹಿಡಿತ-ಬಿಗಿತಗಳ
‘ಋಣ’ ಮಾರ್ಗದಲ್ಲಿ ನಡೆದದ್ದಾಯಿತು
ಹುಲಿಯ ಮೈ ಬೋಳಿಸಿ ಆಕಳ ಮಾಡುವ ಯತ್ನ ನಡೆಯಿತು
ಆಟಗುಳಿ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು
ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು ಸುರುವಿ
ಕಡಿವ ಕತ್ತಿಯ ಬಂಡೆಗೆ ಹೊಡೆದು ಮೊಂಡಾಗಿಸಿ ಮೆರೆದ
ಅಹಿಂಸೆಯ ಹಿಂಸೆಯ, ಬ್ರಹ್ಮಚರ್ಯದ ಭಾನಗಡಿಯ,
ಸಾತ್ವಿಕತನದ ಸೂಳೆಗಾರಿಕೆಯ, ಸ್ವರ್ಗದ ದುರ್ಮಾರ್ಗವ
ನೀತಿಯ ನೇಣನು, ಭಕ್ತಿಯ ಭೋಳೆತನವ,
ಯೋಗದ ಗಂಡುಜೋಗತಿತನವ
ಇನ್ನಾದರೂ ಸಾಕು ಮಾಡೋಣ,

ಚೈತನ್ಯವ ಉಸಿರು ಕಟ್ಟಿಸುವ, ಜೀವ ಶವವಾಗುವ ಪರಿಸಾಕು
ಆ ದೈವ ಚಿಂತನೆಯನ್ನು ಯುಗಗಳಿಗೊಮ್ಮೆ ಹುಟ್ಟುವ
ಆ ಮಹಾಪುರುಷರಿಗಷ್ಟೇ ಬಿಟ್ಟುಕೊಟ್ಟು
ನಾವು ‘ಧನ’ ಮಾರ್ಗದ ಇಹಚಿಂತನೆ ಮಾಡೋಣ,
ಚೆನ್ನಾಗಿ ಉಳುವ ಬೆಳೆವ, ಚೆನ್ನಾಗಿ ಉಣ್ಣುವ-ಉಡುವ,
ಕಣ್ದಣಿಯೆ ಸೊಗವಾಡಿ ನೋಡಿ ಹಿಗ್ಗುವ,
ಮನದಣಿಯೆ ನಕ್ಕು ಅತ್ತು, ಭಾವ ಪೂರ ಹರಿಸುವ,
ಬಾಯಿ ತುಂಬ ಮಕಾತಾಡುವ, ತೆಕ್ಕೆತುಂಬಾ ಸ್ನೇಹಿಸುವ
ಕೈಕಾಲು ತಲೆಗಳಿಗೆ ತೆರಪಿಲ್ಲದೆ ಕೆಲಸ ತುಂಬುವ,
ನೋವಿನ ನಂಜುಂಡು, ಎಂಥ ಹೊಡೆತಗಳಿಗೂ ಕಾಯವ ಕಲ್ಲಾಗಿಸುವ,
ನಮ್ಮ ಬೆನ್ನಂಟಿದ ಹೊಟ್ಟೆಗಳ ತುಂಬಿ ತೇಗಿಸುವ,
ರಾತ್ರಿ ತುಂಬಾ ನಿದ್ರಿಸಿ, ಪುನರ್ಜನ್ಮವನಣಕಿಸುವ,
ಹಗಲು ತುಂಬಾ ದಣಿದು ಭೂತಪಾಪಗಳ ಸುಡುವ
ಮಾರ್ಗವನು ಇನ್ನು ಹಿಡಿಯೋಣ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...