Home / ಬಾಲ ಚಿಲುಮೆ / ಕವಿತೆ / ಮೈಯೇ ಇಲ್ಲ ಬರೀ ತಲೆ

ಮೈಯೇ ಇಲ್ಲ ಬರೀ ತಲೆ

ಮೈಯೆ ಇಲ್ಲ, ಬರೀ ತಲೆ,
ನೆತ್ತಿಗೆ ಜುಂಗಿನ ಬಿಗೀ ಬಲೆ.
ನಾ ಯಾರೆಂದು ಹೇಳುವಿಯಾ,
ಸೋತರೆ ಕಾಲಿಗೆ ಬೀಳುವಿಯಾ?

ಮುಂಜಿ ಗಿಂಜಿ ಆಗಿಲ್ಲ
ಜನಿವಾರಾನೇ ಹಾಕಿಲ್ಲ
ಆದ್ರೂ ತಲೇಲಿ ಪಿಳ್ ಜುಟ್ಟು
ಹೇಳ್ ನೋಡೋಣ ನನ್ನ ಗುಟ್ಟು?

ದೇವರಿಗೋ ನಾ ಬಲು ಇಷ್ಟ
ನನಗೋ ಅವನಿಂದಲೆ ಕಷ್ಟ
ಅವನ್ಹೆಸರಲ್ಲಿ ತಲೆ ಒಡೆದು
ತಿಂತಾರೆ ನನ್ನೆದೆ ತುರಿದು?

ನನ್ನನ್ ಹೊಡೆಯೋ ಹಾಗಿಲ್ಲ
ಹೊಡೆದೋರ್‍ ಕೈಯೇ ನೋಯುತ್ತೆ,
ನಾನು ಜೊತೇಲಿ ಸೇರ್‍ಕೊಂಡ್ರೆ
ತಿಂಡಿ ಬಲು ರುಚಿ ಆಗುತ್ತೆ.

ನಾ ಯಾರೆಂದು ಹೇಳವಿಯಾ
ಒಗಟಿಗೆ ಉತ್ತರ ನೀಡುವಿಯಾ
ಇಲ್ಲವೆ ಸೋಲನ್ನೊಪ್ಪುವಿಯಾ,
ತೆಪ್ಪನೆ ಕಾಲಿಗೆ ಬೀಳುವಿಯಾ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...