Home / ಲೇಖನ / ವಿಜ್ಞಾನ / ಬಾಳೆಹಣ್ಣಿನ ಸಿಪ್ಪಯಿಂದ ಇಂಧನ ಅನಿಲ

ಬಾಳೆಹಣ್ಣಿನ ಸಿಪ್ಪಯಿಂದ ಇಂಧನ ಅನಿಲ

ಬಾಳೆಹಣ್ಣಿನ ಸಿಪ್ಪೆಯನ್ನು ತುಳಿದು ಕಾಲು ಜಾರಿದ ಅನುಭವ ಬೇಕಾವಷ್ಟು ಜನಕ್ಕಿದೆ ಅಲ್ಲವೆ? ಇಂಥಹ ಬಾಳೆಹಣ್ಣಿನ ಸಿಪ್ಪೆಯು ತಾಜ್ಯ ವಸ್ತುವಾಗಿ ಅಲ್ಲಲ್ಲಿ ಬೀಳುತ್ತಲೇ ಇರುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ವಸ್ತುವಾಗಿ ಕರಗಿ ಹೋಗುವ ಇಂಥಹ ಸಿಪ್ಪೆಯನ್ನು ಥಾಯ್ಲೆಂಡ್ ದೇಶದ ಜನ ಹಣ್ಣನ್ನು ತಿಂದು ಸಿಪ್ಪೆಯಿಂದಲೂ ಆಗಬಹುದಾದ ಉಪಯೋಗವನ್ನು ಕಂಡುಕೊಂಡಿದ್ದಾರೆ. ಏಕೆಂದರೆ ಇಲ್ಲಿ ಬಾಳೆ ಒಂದು ಪ್ರಮುಖವಾದ ಬೆಳೆ. ಇಲ್ಲಿ ಈ ಸಿಪ್ಪೆಯ ರಾಶಿ ರಾಶಿ ಬೀಳುತ್ತದೆ. ಇಂಥಹ ಸಿಪ್ಪೆಯನ್ನು ಬಳಸಿಕೊಂಡು ಜೈವಿಕ ಅನಿಲವನ್ನು ಉತ್ಪಾದಿಸುವ (Gas) ಸ್ಥಾವರವನ್ನು ಥಾಯ್ಲಾಂಡಿನ ನರಸುವಾನ್ ವಿಶ್ವವಿದ್ಯಾನಿಲಯದ ಸೌರಶಕ್ತಿತರಬೇತಿ ಕೇಂವ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಾಳೆಹಣ್ಣನ್ನು ಸಂಸ್ಕರಿಸುವ ಉದ್ಯಮಗಳು ಅಲ್ಲಿಯ ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿವೆ. ಉಳಿದ ಸಿಪ್ಪೆಯಿಂದ ಇಂಧನ ಅನಿಲವನ್ನು ಉತ್ಪಾದಿಸಿದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಜತೆಗೆ ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.

ದನ ಕರಗಳ ಸಗಣಿಯನ್ನು ಮತ್ತು ಗಿಡಗಳನ್ನು ಕೊಳೆಯಿಸಿ ಮಿಥೇನ್ ಅನಿಲವನ್ನು ಉತ್ಪಾದಿಸುವಂತೆ, ದನಗಳ ಸಗಣಿಯಿಂದ ಗೋಬರ್ ಗ್ಯಾಸನ್ನು ಬಳೆಸುವಂತೆ ಥಾಯ್ಲಾಂಡಿನಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ಇಂಧನ ಅನಿಲವನ್ನು ತಯಾರಿಸುವ ತಂತ್ರಜ್ಞಾನ ಬೆಳಕಿಗೆ ಬಂದಿದೆ. ಥಾಯ್ಲಾಂಡಿನ ಬಂಗ್‌ಕ್ರಾತುಮ್ ಎಂಬ ಜಿಲ್ಲೆಯಲ್ಲಿ ನಡೆಯಿಸಿದ ಸಮೀಕ್ಷೆಯಿಂದ ಅಲ್ಲಿ ವರ್ಷಕ್ಕೆ 10 ಸಾವಿರ ಟನ್‌ಗಳಷ್ಟು ಬಾಳೆಹಣ್ಣುಗಳನ್ನು ಒಣಗಿಸಲಾಗುತ್ತದೆ. ಮತ್ತು ಇದರಿಂದ ಎರಡುವರೇ ಸಾವಿರ ಟನ್‌ಗಳಷ್ಟು ಸಿಪ್ಪೆ ಉಳಿಯುತ್ತದೆಂದು ತಿಳಿದು ಬಂದಿದೆ. ಇಂಥ ರಾಶಿ ರಾಶಿ ಬೀಳುವ ಸಿಪ್ಪೆಯಿಂದ  ಅನಾಯಾಸವಾಗಿ ಇಂಧನದ ಅನಿಲವನ್ನು ಉತ್ಪಾದಿಸುವ ಘಟಕಗಳು ನಡೆಯುತ್ತದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಜರ್ಮನಿಯ ತಾಂತ್ರಿಕ ಸಲಹಾ ಏಜೆನ್ಸಿಯು ಆರ್ಥಿಕ ಬೆಂಬಲ ನೀಡಿದೆ. 1995ರಲ್ಲಿ ಬಾಳೆಹಣ್ಣಿನ ಸಿಪ್ಪೆ ಆಧಾರಿತ ಇಂಧನ ಅನಿಲ ಸ್ಥಾವರ ಸ್ಥಾಪನೆಗೊಂಡಿದೆ. ಆರ್ಥಿಕವಾಗಿ ಬಾಳೆಹಣ್ಣು ಬೆಳೆಯುವ ಭಾರತದ ಪ್ರದೇಶಗಳಲಿ ನಿರುಪಯುಕ್ತವಾಗುವ ಬಾಳೆಹಣ್ಣಿನ ಸಿಪ್ಪೆಯಿಂದ ಇಂಥಹ ಅನಿಲವನ್ನು ಉತ್ಪಾದಿಸುವ
ಯೋಜನೆ ಬಂದರೆ ಇಂಧನದ ಸಮಸ್ಯೆ  ಒಂದಿಷ್ಟು ತೀರಿತು.

****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...