ಬಾಳೆಹಣ್ಣಿನ ಸಿಪ್ಪಯಿಂದ ಇಂಧನ ಅನಿಲ

ಬಾಳೆಹಣ್ಣಿನ ಸಿಪ್ಪೆಯನ್ನು ತುಳಿದು ಕಾಲು ಜಾರಿದ ಅನುಭವ ಬೇಕಾವಷ್ಟು ಜನಕ್ಕಿದೆ ಅಲ್ಲವೆ? ಇಂಥಹ ಬಾಳೆಹಣ್ಣಿನ ಸಿಪ್ಪೆಯು ತಾಜ್ಯ ವಸ್ತುವಾಗಿ ಅಲ್ಲಲ್ಲಿ ಬೀಳುತ್ತಲೇ ಇರುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ವಸ್ತುವಾಗಿ ಕರಗಿ ಹೋಗುವ ಇಂಥಹ ಸಿಪ್ಪೆಯನ್ನು ಥಾಯ್ಲೆಂಡ್ ದೇಶದ ಜನ ಹಣ್ಣನ್ನು ತಿಂದು ಸಿಪ್ಪೆಯಿಂದಲೂ ಆಗಬಹುದಾದ ಉಪಯೋಗವನ್ನು ಕಂಡುಕೊಂಡಿದ್ದಾರೆ. ಏಕೆಂದರೆ ಇಲ್ಲಿ ಬಾಳೆ ಒಂದು ಪ್ರಮುಖವಾದ ಬೆಳೆ. ಇಲ್ಲಿ ಈ ಸಿಪ್ಪೆಯ ರಾಶಿ ರಾಶಿ ಬೀಳುತ್ತದೆ. ಇಂಥಹ ಸಿಪ್ಪೆಯನ್ನು ಬಳಸಿಕೊಂಡು ಜೈವಿಕ ಅನಿಲವನ್ನು ಉತ್ಪಾದಿಸುವ (Gas) ಸ್ಥಾವರವನ್ನು ಥಾಯ್ಲಾಂಡಿನ ನರಸುವಾನ್ ವಿಶ್ವವಿದ್ಯಾನಿಲಯದ ಸೌರಶಕ್ತಿತರಬೇತಿ ಕೇಂವ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಾಳೆಹಣ್ಣನ್ನು ಸಂಸ್ಕರಿಸುವ ಉದ್ಯಮಗಳು ಅಲ್ಲಿಯ ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿವೆ. ಉಳಿದ ಸಿಪ್ಪೆಯಿಂದ ಇಂಧನ ಅನಿಲವನ್ನು ಉತ್ಪಾದಿಸಿದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಜತೆಗೆ ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.

ದನ ಕರಗಳ ಸಗಣಿಯನ್ನು ಮತ್ತು ಗಿಡಗಳನ್ನು ಕೊಳೆಯಿಸಿ ಮಿಥೇನ್ ಅನಿಲವನ್ನು ಉತ್ಪಾದಿಸುವಂತೆ, ದನಗಳ ಸಗಣಿಯಿಂದ ಗೋಬರ್ ಗ್ಯಾಸನ್ನು ಬಳೆಸುವಂತೆ ಥಾಯ್ಲಾಂಡಿನಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ಇಂಧನ ಅನಿಲವನ್ನು ತಯಾರಿಸುವ ತಂತ್ರಜ್ಞಾನ ಬೆಳಕಿಗೆ ಬಂದಿದೆ. ಥಾಯ್ಲಾಂಡಿನ ಬಂಗ್‌ಕ್ರಾತುಮ್ ಎಂಬ ಜಿಲ್ಲೆಯಲ್ಲಿ ನಡೆಯಿಸಿದ ಸಮೀಕ್ಷೆಯಿಂದ ಅಲ್ಲಿ ವರ್ಷಕ್ಕೆ 10 ಸಾವಿರ ಟನ್‌ಗಳಷ್ಟು ಬಾಳೆಹಣ್ಣುಗಳನ್ನು ಒಣಗಿಸಲಾಗುತ್ತದೆ. ಮತ್ತು ಇದರಿಂದ ಎರಡುವರೇ ಸಾವಿರ ಟನ್‌ಗಳಷ್ಟು ಸಿಪ್ಪೆ ಉಳಿಯುತ್ತದೆಂದು ತಿಳಿದು ಬಂದಿದೆ. ಇಂಥ ರಾಶಿ ರಾಶಿ ಬೀಳುವ ಸಿಪ್ಪೆಯಿಂದ  ಅನಾಯಾಸವಾಗಿ ಇಂಧನದ ಅನಿಲವನ್ನು ಉತ್ಪಾದಿಸುವ ಘಟಕಗಳು ನಡೆಯುತ್ತದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಜರ್ಮನಿಯ ತಾಂತ್ರಿಕ ಸಲಹಾ ಏಜೆನ್ಸಿಯು ಆರ್ಥಿಕ ಬೆಂಬಲ ನೀಡಿದೆ. 1995ರಲ್ಲಿ ಬಾಳೆಹಣ್ಣಿನ ಸಿಪ್ಪೆ ಆಧಾರಿತ ಇಂಧನ ಅನಿಲ ಸ್ಥಾವರ ಸ್ಥಾಪನೆಗೊಂಡಿದೆ. ಆರ್ಥಿಕವಾಗಿ ಬಾಳೆಹಣ್ಣು ಬೆಳೆಯುವ ಭಾರತದ ಪ್ರದೇಶಗಳಲಿ ನಿರುಪಯುಕ್ತವಾಗುವ ಬಾಳೆಹಣ್ಣಿನ ಸಿಪ್ಪೆಯಿಂದ ಇಂಥಹ ಅನಿಲವನ್ನು ಉತ್ಪಾದಿಸುವ
ಯೋಜನೆ ಬಂದರೆ ಇಂಧನದ ಸಮಸ್ಯೆ  ಒಂದಿಷ್ಟು ತೀರಿತು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷ್ಣ ಬಂದನೆ ಸಖೀ!
Next post ಮಂಡೆಕೋಲಿನ ಪಾತಾಳ ಬಾಂಜಾರ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…