Home / ಲೇಖನ / ವಿಜ್ಞಾನ / ಬಾಳೆಹಣ್ಣಿನ ಸಿಪ್ಪಯಿಂದ ಇಂಧನ ಅನಿಲ

ಬಾಳೆಹಣ್ಣಿನ ಸಿಪ್ಪಯಿಂದ ಇಂಧನ ಅನಿಲ

ಬಾಳೆಹಣ್ಣಿನ ಸಿಪ್ಪೆಯನ್ನು ತುಳಿದು ಕಾಲು ಜಾರಿದ ಅನುಭವ ಬೇಕಾವಷ್ಟು ಜನಕ್ಕಿದೆ ಅಲ್ಲವೆ? ಇಂಥಹ ಬಾಳೆಹಣ್ಣಿನ ಸಿಪ್ಪೆಯು ತಾಜ್ಯ ವಸ್ತುವಾಗಿ ಅಲ್ಲಲ್ಲಿ ಬೀಳುತ್ತಲೇ ಇರುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ವಸ್ತುವಾಗಿ ಕರಗಿ ಹೋಗುವ ಇಂಥಹ ಸಿಪ್ಪೆಯನ್ನು ಥಾಯ್ಲೆಂಡ್ ದೇಶದ ಜನ ಹಣ್ಣನ್ನು ತಿಂದು ಸಿಪ್ಪೆಯಿಂದಲೂ ಆಗಬಹುದಾದ ಉಪಯೋಗವನ್ನು ಕಂಡುಕೊಂಡಿದ್ದಾರೆ. ಏಕೆಂದರೆ ಇಲ್ಲಿ ಬಾಳೆ ಒಂದು ಪ್ರಮುಖವಾದ ಬೆಳೆ. ಇಲ್ಲಿ ಈ ಸಿಪ್ಪೆಯ ರಾಶಿ ರಾಶಿ ಬೀಳುತ್ತದೆ. ಇಂಥಹ ಸಿಪ್ಪೆಯನ್ನು ಬಳಸಿಕೊಂಡು ಜೈವಿಕ ಅನಿಲವನ್ನು ಉತ್ಪಾದಿಸುವ (Gas) ಸ್ಥಾವರವನ್ನು ಥಾಯ್ಲಾಂಡಿನ ನರಸುವಾನ್ ವಿಶ್ವವಿದ್ಯಾನಿಲಯದ ಸೌರಶಕ್ತಿತರಬೇತಿ ಕೇಂವ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಾಳೆಹಣ್ಣನ್ನು ಸಂಸ್ಕರಿಸುವ ಉದ್ಯಮಗಳು ಅಲ್ಲಿಯ ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿವೆ. ಉಳಿದ ಸಿಪ್ಪೆಯಿಂದ ಇಂಧನ ಅನಿಲವನ್ನು ಉತ್ಪಾದಿಸಿದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಜತೆಗೆ ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.

ದನ ಕರಗಳ ಸಗಣಿಯನ್ನು ಮತ್ತು ಗಿಡಗಳನ್ನು ಕೊಳೆಯಿಸಿ ಮಿಥೇನ್ ಅನಿಲವನ್ನು ಉತ್ಪಾದಿಸುವಂತೆ, ದನಗಳ ಸಗಣಿಯಿಂದ ಗೋಬರ್ ಗ್ಯಾಸನ್ನು ಬಳೆಸುವಂತೆ ಥಾಯ್ಲಾಂಡಿನಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ಇಂಧನ ಅನಿಲವನ್ನು ತಯಾರಿಸುವ ತಂತ್ರಜ್ಞಾನ ಬೆಳಕಿಗೆ ಬಂದಿದೆ. ಥಾಯ್ಲಾಂಡಿನ ಬಂಗ್‌ಕ್ರಾತುಮ್ ಎಂಬ ಜಿಲ್ಲೆಯಲ್ಲಿ ನಡೆಯಿಸಿದ ಸಮೀಕ್ಷೆಯಿಂದ ಅಲ್ಲಿ ವರ್ಷಕ್ಕೆ 10 ಸಾವಿರ ಟನ್‌ಗಳಷ್ಟು ಬಾಳೆಹಣ್ಣುಗಳನ್ನು ಒಣಗಿಸಲಾಗುತ್ತದೆ. ಮತ್ತು ಇದರಿಂದ ಎರಡುವರೇ ಸಾವಿರ ಟನ್‌ಗಳಷ್ಟು ಸಿಪ್ಪೆ ಉಳಿಯುತ್ತದೆಂದು ತಿಳಿದು ಬಂದಿದೆ. ಇಂಥ ರಾಶಿ ರಾಶಿ ಬೀಳುವ ಸಿಪ್ಪೆಯಿಂದ  ಅನಾಯಾಸವಾಗಿ ಇಂಧನದ ಅನಿಲವನ್ನು ಉತ್ಪಾದಿಸುವ ಘಟಕಗಳು ನಡೆಯುತ್ತದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಜರ್ಮನಿಯ ತಾಂತ್ರಿಕ ಸಲಹಾ ಏಜೆನ್ಸಿಯು ಆರ್ಥಿಕ ಬೆಂಬಲ ನೀಡಿದೆ. 1995ರಲ್ಲಿ ಬಾಳೆಹಣ್ಣಿನ ಸಿಪ್ಪೆ ಆಧಾರಿತ ಇಂಧನ ಅನಿಲ ಸ್ಥಾವರ ಸ್ಥಾಪನೆಗೊಂಡಿದೆ. ಆರ್ಥಿಕವಾಗಿ ಬಾಳೆಹಣ್ಣು ಬೆಳೆಯುವ ಭಾರತದ ಪ್ರದೇಶಗಳಲಿ ನಿರುಪಯುಕ್ತವಾಗುವ ಬಾಳೆಹಣ್ಣಿನ ಸಿಪ್ಪೆಯಿಂದ ಇಂಥಹ ಅನಿಲವನ್ನು ಉತ್ಪಾದಿಸುವ
ಯೋಜನೆ ಬಂದರೆ ಇಂಧನದ ಸಮಸ್ಯೆ  ಒಂದಿಷ್ಟು ತೀರಿತು.

****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...