ಕೇಳು ಕೇಳಿಂದ್ರಜಾತಾ ಚಂದ್ರಹಾಸಾ
ಏಳು ವರುಷದಾತಾ || ಪ ||

ಸಾಲಿಬರಿಯಲ್ಹೋಗಿ ಕಲಿತನಕ್ಷರವ
ಸಾಲಿಗ್ರಾಮದ ಶಿಲೆಯು ಬಾಲಕನೀತಾ || ೧ ||

ಅಷ್ಟೆರಡು ವರುಷವಾಗಿ ಪಟ್ಟವ ಕಟ್ಟಿ
ಕೊಟ್ಟ ಕಾರ್ಯವನು ಬೇಗ ದಿಟ್ಟ ಕಲಿಂಗನ ಸಂತಾನ ಕೀರ್ತಿಗಳನೆಲ್ಲಾ
ದುಷ್ಟಬುದ್ಧಿಗೆ ಸುದ್ದಿ ಮುಟ್ಟಿದಾಕ್ಷಣದಲಿ || ೨ ||

ಕುಂತಳಪುರದಿಂದಲಿ ತನ್ನ ಚಾರರ ಕಳುಹಿ
ಚಿಂತೆಯೊಳಿರಲು ಸಂತೋಷದಿಂದ ಶಿಶರಿನಾಳಧೀಶನ
ಅಂತಃಕರುಣದಿ ಬಾಲಕರು ಕಂಡರು ಬಂದು || ೩ ||

****