ಏಕೆ ಕಣ್ಣು ಹೀಗೆ ತೇವಗೊಂಡಿತು,
ಏಕೆ ಮನವು ಕಳವಳದಲಿ ಮುಳುಗಿತು?

ಇದ್ದಕಿದ್ದ ಹಾಗೆ ಏನೋ ಮಿಂಚಿತು
ತಿಳಿಯದಿದ್ದರೇನು ಮನಕೆ ಹೊಳೆಯಿತು.

ಯಾರ ದನಿಯೊ ಎದೆಯ ಹಾದುಹೋಯಿತು
ಬಾನಿನಲ್ಲಿ ತಾರೆ ಸಂತೆ ಸೇರಿತು

ಶ್ರುತಿಗೊಂಡಿತು ವೀಣೆ, ತಾನೆ ದನಿಯಿತು
ಝೇಂಕಾರಕೆ ಕಾದ ಹೃದಯ ನೆನೆಯಿತು.

ಸಂಜೆ ಬಾನಿನಂಚು ಮಧ್ಯಮಾವತಿ
ಬಂದೆ ಬರುವ ಮತ್ತೆ ಅರುಣಸಾರಥಿ.
***