Home / ಕವನ / ಕವಿತೆ / ಲೆಕ್ಕ ಸಿಗುವುದಿಲ್ಲ

ಲೆಕ್ಕ ಸಿಗುವುದಿಲ್ಲ

ಕೆಲವು ತೋಳ ಹದ್ದು ಹೆಗ್ಗಣ ಹಂದಿ ಕಿರುಬಗಳು
ಸಾವಿರ ಲಕ್ಷ ಕೋಟಿಗಟ್ಟಲೆ ಹರಾಮಿ ಹಣ ನುಂಗುತ್ತ
ಬಂಗಲೆ ಕಾರು ಫರ್ಮು ಫಾರ್ಮು ಫ್ಯಾಕ್ಟರಿಗಳ ಬೆಳೆಸುತ್ತ
ತಲೆಹಿಡುಕ ರಾಜಕಾರಣದ ವೇಷದಲ್ಲಿ
ನಾಯಿಗೆ ಒಣರೊಟ್ಟಿ ಚೂರು ಹಾಕಿದಂತೆ
ಬಡಬಗ್ಗರಿಗೆ ಬಟ್ಟೆ ಬರೆ ಹಂಚುತ್ತ
ಬೊಜ್ಜು ಬೆಳೆಸುವ ಭಂಡದಾರಿಗಳನ್ನು
ರಾಜ ಮಾರ್ಗಗಳನ್ನಾಗಿ ಮಾಡಿಕೊಳ್ಳುತ್ತ
ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತ
ದೇಶದ ಜನತೆಯ ಸುಲಿಯುತ್ತ
ಪಾತಾಳಕ್ಕೆ ನೂಕುತ್ತ ಸುಲಿಯುತ್ತ ನೂಕುತ್ತ
ಬೀದಿ ಕೊಳಚೆ ರೊಚ್ಚೆ ಪಾಲು ಮಾಡುತ್ತಿರುವವರು

ವೈಭವೋಪೇತ ಗುಡಿ ದೇವರುಗಳಿಗೆ
ಮಹಾಮಂಗಳಾರತಿ ಮಹಾಭಿಷೇಕ
ಯಜ್ಞಯಾಗಾದಿಗಳ ಮಾಡಿಸುತ್ತ
ಪುಣ್ಯ ಗಳಿಸಿಕೂಳ್ಳುವುದನ್ನು ನೋಡಿದಾಗ
ಕೈಯೊಡ್ಡಿದ ಎಲಬು ಕೈಗಳ ಮೇಲೆ
ಐದು ಪೈಸೆ ಎಸೆದು
ಧರ್ಮ ಮಾಡುವುದನ್ನು ನೋಡಿದಾಗ
ಈ ಭಿಕ್ಷ ಲಕ್ಷ ಕೋಟಿ ಕೋಟಲೆಗಳ ಒಳಗಡಗಿರುವ
ಲೆಕ್ಕಾಚಾರ
ನಮ್ಮಂಥ ಕೋಟಿಕೋಟಿ ಪಾಮರರಿಗೆ ಸಿಗುವುದಿಲ್ಲ
ಈ ರೊಕ್ಕದ ಅಕ್ರಾಳ ವಿಕ್ರಾಳವಾದ
ಲೆಕ್ಕದ ಲೆಕ್ಕಾಚಾರ ಸಿಗುವುದಿಲ್ಲ
****************************
12-4-86

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...