Home / ಕವನ / ಕವಿತೆ / ಸಾಯದ ಸಾವು ಬದುಕದ ಬದುಕು

ಸಾಯದ ಸಾವು ಬದುಕದ ಬದುಕು

ಕಣ್ಣೊಳಗೆ ನೋಡಿ ಕುಲುಕಾಟವಾಡಿ
ಮಣ್ಣೊಳಗೆ ಬೆರೆವ ತವಕ
ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ
ತಣ್ಣಗಿದೆ ಎಮ್ಮೆ ಕುಡುಕ

ತಿಂದಿದ್ದ ಒಂದು ಬೆಂದಿದ್ದೆ ಒಂದು
ನಿಂದಿದ್ದೆ ನಿಲುವು ಗೆಲುವು
ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ
ಕಂದಿದ್ದು ಚಿಗುರು ನಲಿವು

ಆಗಸಕೆ ಏರಿ ಚಿಕ್ಕೆಗಳ ಸಾರಿ
ಸೋಗಿನಲಿ ಬೀರಿ ಮೀರಿ
ಬಾಗಿಲನು ಬಡಿದು ನಿದ್ದೆಯಲಿ ನಡೆದು
ಬೇಗೆಯಲಿ ತೊರೆದು ದಾರಿ

ಕಳಸದಲಿ ಪಾನ ಬಳಸದೆಯೆ ಮೌನ
ತುಳುಕಾಡದಂಥ ಬಿಗುವು
ತಳಕಿತ್ತಿ ಬುಟ್ಟಿ ಚೆಲ್ಲಾಡೆ ಬುತ್ತಿ
ಹಳಸಿದ್ದು ನಾಯಿ ನಗುವು

ಓಡುತಿವೆ ಮೋಡ ಬೀಡಿ ಹೊಗೆ ಕೂಡ
ನಾಡಿಯಲಿ ಕಾಲ ಮಾನ
ಬಾಡುತಿಹ ಹೂವು ಬಿದ್ದಿರಲು ಕೆಳಗೆ
ಕಾಡುತಿದೆ ಸ್ಥಾನ ಮಾನ

ನನಗಾಗಿ ನಾನು ನಿನಗಾಗಿ ನೀನು
ಸೊಣಗನದೆ ಬಣಗು ಮೂಗು
ಮನ ಬೆತ್ತಲಾಗೆ ದಿನ ಕತ್ತಲಾಗೆ
ಘನವಾಯ್ತು ಹಗಲ ಸೋಗು

ಎತ್ತೆತ್ತಲಿಂದೊ ಸಂದೇಶ ಬಂದು
ಹತ್ತಿಲೇ ಗುಯ್ಯಿಗುಡಲು
ಹೊತ್ತಲೇ ಇಲ್ಲ ವಿದ್ಯುತ್ತು ಮೈಗೆ
ಮತ್ತೆಲ್ಲೋ ತರಗು ಸುಡಲು

ಭೂಕೇಂದ್ರದಿಂದ ತರತರವ ದಾಟಿ
ಸೋಕುತ್ತ ಬಿಡಲು ಚರ್ಮ
ಆಕಾಶದಿಂದ ನರನರವ ಮೀಟಿ
ಜೀಕುತಿದೆ ದೇವ ಮರ್ಮ

ಮೈಯನ್ನು ಮಣಿಸಿ ಬಾಯನ್ನು ತಣಿಸಿ
ಬೀಯಗವು ಆಯವ್ಯಯವು
ಸಾಯದಿದೆ ಸಾವು ಬದುಕದಿದೆ ಬದುಕು
ನೋಯದಿಹ ಇಹದ ದ್ವಯವು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...