ಸಾಯದ ಸಾವು ಬದುಕದ ಬದುಕು

ಕಣ್ಣೊಳಗೆ ನೋಡಿ ಕುಲುಕಾಟವಾಡಿ
ಮಣ್ಣೊಳಗೆ ಬೆರೆವ ತವಕ
ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ
ತಣ್ಣಗಿದೆ ಎಮ್ಮೆ ಕುಡುಕ

ತಿಂದಿದ್ದ ಒಂದು ಬೆಂದಿದ್ದೆ ಒಂದು
ನಿಂದಿದ್ದೆ ನಿಲುವು ಗೆಲುವು
ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ
ಕಂದಿದ್ದು ಚಿಗುರು ನಲಿವು

ಆಗಸಕೆ ಏರಿ ಚಿಕ್ಕೆಗಳ ಸಾರಿ
ಸೋಗಿನಲಿ ಬೀರಿ ಮೀರಿ
ಬಾಗಿಲನು ಬಡಿದು ನಿದ್ದೆಯಲಿ ನಡೆದು
ಬೇಗೆಯಲಿ ತೊರೆದು ದಾರಿ

ಕಳಸದಲಿ ಪಾನ ಬಳಸದೆಯೆ ಮೌನ
ತುಳುಕಾಡದಂಥ ಬಿಗುವು
ತಳಕಿತ್ತಿ ಬುಟ್ಟಿ ಚೆಲ್ಲಾಡೆ ಬುತ್ತಿ
ಹಳಸಿದ್ದು ನಾಯಿ ನಗುವು

ಓಡುತಿವೆ ಮೋಡ ಬೀಡಿ ಹೊಗೆ ಕೂಡ
ನಾಡಿಯಲಿ ಕಾಲ ಮಾನ
ಬಾಡುತಿಹ ಹೂವು ಬಿದ್ದಿರಲು ಕೆಳಗೆ
ಕಾಡುತಿದೆ ಸ್ಥಾನ ಮಾನ

ನನಗಾಗಿ ನಾನು ನಿನಗಾಗಿ ನೀನು
ಸೊಣಗನದೆ ಬಣಗು ಮೂಗು
ಮನ ಬೆತ್ತಲಾಗೆ ದಿನ ಕತ್ತಲಾಗೆ
ಘನವಾಯ್ತು ಹಗಲ ಸೋಗು

ಎತ್ತೆತ್ತಲಿಂದೊ ಸಂದೇಶ ಬಂದು
ಹತ್ತಿಲೇ ಗುಯ್ಯಿಗುಡಲು
ಹೊತ್ತಲೇ ಇಲ್ಲ ವಿದ್ಯುತ್ತು ಮೈಗೆ
ಮತ್ತೆಲ್ಲೋ ತರಗು ಸುಡಲು

ಭೂಕೇಂದ್ರದಿಂದ ತರತರವ ದಾಟಿ
ಸೋಕುತ್ತ ಬಿಡಲು ಚರ್ಮ
ಆಕಾಶದಿಂದ ನರನರವ ಮೀಟಿ
ಜೀಕುತಿದೆ ದೇವ ಮರ್ಮ

ಮೈಯನ್ನು ಮಣಿಸಿ ಬಾಯನ್ನು ತಣಿಸಿ
ಬೀಯಗವು ಆಯವ್ಯಯವು
ಸಾಯದಿದೆ ಸಾವು ಬದುಕದಿದೆ ಬದುಕು
ನೋಯದಿಹ ಇಹದ ದ್ವಯವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಠಗಳು ದೇಶಕ್ಕೆ ಶಾಪ
Next post ನಗೆ ಡಂಗುರ – ೧೬೩

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…