ಚಂದ್ರ

ತುಂಬಿದ ಚಂದ್ರನೆ ನೀ ಬಾರ
ತುಂಬಿದ ಭಾಗ್ಯವ ನೀ ತಾರ
ನಂಬಿದ ಗತಿಗೆ ನೆಲೆ ತೋರ!

ಅಗಸ ಮಿತ್ರನು ನೀನದಕೊ
ತಂಪನು ಸುರಿಸುತ ನೀ ಮಿನುಗೊ
ಭೂಮಿಯ ಕನ್ನಡಿ ನೀನೆ ಕಣೊ

ನೈದಿಲೆ ನಗುವುದು ನೀ ಬರಲು
ನಲ್ಮೆಯ ಹೂವಿಗೆ ನೀ ಮುಗುಳು
ಸಂತಸವೀಯುತ ನೀ ಬಾಳು!

ವಸಂತ ಲಕ್ಷ್ಮಿಯ ಕಾಲ್ಚೆಂಡು
ಆಡುವ ಮಕ್ಕಳ ಮನವುಂಡು
ತೋರುವೆ ತೇಲುವೆ ನೀ ದುಂಡು!

ತಂಪನು ಚೆಲ್ಲುವೆ ನೀ ಚಂದ್ರ
ಮೋಹವ ಬೀರುವೆ ನೀನಿಂದ್ರ
ರಸಿಕರ ಬಾಳಿಗೆ ನೀ ಕೇಂದ್ರ!

ಏರುವೆ ಮಿನುಗುವೆ ನೀನೆಲ್ಲಿ?
ಮುಗಿಲೊಳು ತೇಲುವೆ ಪೋಪೆಲ್ಲಿ?
ನಾಚುಗೆಯೇ ಹೇಳು ನಿನಗಲ್ಲಿ?

ರಾಮನು ಅತ್ತದು ನಿನಗಾಗೊ?
ಹನುಮನು ಹಾರಿದು ನಿನಗಾಗೊ?
ಗಣಪತಿ ಶಾಪವು ನಿನಗಾಗೊ?

ಈಶ್ವರ ಶಿರವನು ಮುಡಿಸಿರುವೆ
ನೀರಲಿ ಬಾನಲಿ ತೋರಿರುವೆ
ಪ್ರಣಯಿಯ ನೋಟದ ಮುಗುಳಿರುವೆ!

ಹುಣ್ಣಿಮೆ ದಿನವೇ ನಿನಚೆಲುವು
ಕಣ್ಣಿನ ಭಾಗ್ಯವೆ ಆ ಬರವು
ಸ್ವಪ್ನದ ಸುಖವೇ ನಿನ್ನೊಲವು!

ಪೋಗದಿರೆನ್ನೀ ಚಂದಿರನೆ
ತೆಂಗದಿರೆನ್ನೇ ಸುಖವೀಣೇ
ಭುವಿಯನು ಬೆಳಗೊ ಮಮಪ್ರಾಣೇ!
*****

ಪುಸ್ತಕ: ಸೂರ್ಯ ಕಾಂತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೬
Next post ಒಮ್ಮೆ ಹಾಡಿದ ಹಾಡು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys