Home / ಕವನ / ಕವಿತೆ / ಅಶಾಂತ ಮನಸ್ಸುಗಳ ನಡುರಾತ್ರಿ

ಅಶಾಂತ ಮನಸ್ಸುಗಳ ನಡುರಾತ್ರಿ

ಈಗಷ್ಟೇ ನಡುರಾತ್ರಿ
ಬಿ.ಪಿ. ಸದ್ದುಗಳೆಲ್ಲ
ಒಂದೊಂದಾಗಿ ಅಡಗುತ್ತಿವೆ
ಬ್ರೇನ್ ಹೆಮರೇಜಕ್ಕೆ ಹತ್ತಿರವಿದ್ದ
ಉದ್ಯಮಿಗಳು ಇನ್ನೂ
ಲೆಕ್ಕಾಚಾರದಲ್ಲಿದ್ದಾರೆ

ಇರಲಿ ನಾಳಿನ ಜಗಳಕ್ಕೆಂದು
ಹೊಸಪದಗಳಿಗೆ ಹುಡುಕಾಡುವ
ಬುದ್ದಿ ಜೀವಿಗಳು ನೆತ್ತಿಯೊಳಗೆ ಕಣ್ಣಿಟ್ಟು
ಏನೋ ಸಾಧನೆಗೆ ಉರಿಯುತ್ತ
ಹೊರಳಾಡುತ್ತಿದ್ದಾರೆ.

ಜಾಗತೀಕರಣದ ನೆಪಮಾಡಿ
ಬೇಡವಾದುದೆಲ್ಲ ನಮ್ಮ ಅಂಗಳಕೆ
ಬಂದು ಬೀಳುತ್ತಿವೆಯಲ್ಲ ಎಂದೇ ಹೊರಗೆ
ಭಾಷಣ ಮಾಡಿದವರು
ರಾತ್ರಿ ಇನ್ನೂ ಇಸ್ತ್ರಿ ಮಾಡುತ್ತಿದ್ದಾರೆ

ಮೌಲ್ಯಗಳು ಗಾಳಿಗೆ ತೂರಿ
ಕನಸಿನಂಗಳಕೆ ಚಂದಿರನ ಕರೆದು ನಾಗಾಲೋಟದ ಕುದುರೆ ಏರಿ
ಇದ್ದುದೆಲ್ಲ ಇಲ್ಲದಂತೆ
ಇಲ್ಲದ್ದೆಲ್ಲ ಇದ್ದಂತೆ ಕಾಣುವ ಹದಿಹರೆಯದವರು
ಇನ್ನೂ ಕನವರಿಸುತ್ತಿದ್ದಾರೆ.

ವೇದಿಕೆಯ ಮೇಲೆ
ಮಹಿಳಾವಾದ ಸ್ವಾತಂತ್ರ್ಯ ಸಮಾನತೆ
ಭಾಷಣಮಾಡಿ ಏನೋ ಸಾಧಿಸಿದಂತೆ
ಮನೆಯವರೊಂದಿಗೆ ವಿರೋಧ
ಕಟ್ಟಿಕೊಂಡ ಆಕೆ
ನಾಳೆ ಕೋರ್ಟಿಗೆ
ಯಾವುದಕ್ಕೊ ಅರ್ಜಿಸಲ್ಲಿಸಲು
ಕಣ್ಣೀರು ಚೀರಾಟ ಭರಾಟೆಗಳಲಿ
ಏನೇನೋ ಗೀಚಾಡುತ್ತಿದ್ದಾಳೆ

ಬೆಳಗಾದರೆ ಮತ್ತೆಲ್ಲ
ರಾಕ್ಷಸೀ ಚಟುವಟಿಕೆಗಳು
ಬಿಸಿಲು ಉರಿಬಿಸಿಲು ಬಿಸುಲ್ಗುದುರೆಯ
ಧಗೆ ಇವರುಗಳ ಒಳಹೊರಗೆಲ್ಲ

ರಾತ್ರಿಯೇ ನಿನ್ನ ಕತ್ತಲೆಯ
ಕಪ್ಪು ಹರವು ತೆಕ್ಕೆಯೊಳಗೆ
ಇವರನ್ನೆಲ್ಲಾ ಎಳೆದು ತಬ್ಬಿ
ಸುಮ್ಮನೆ ಮಲಗಿ ಬಿಡಬಾರದೆ
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...