Home / ಕವನ / ಕವಿತೆ / ಅಶಾಂತ ಮನಸ್ಸುಗಳ ನಡುರಾತ್ರಿ

ಅಶಾಂತ ಮನಸ್ಸುಗಳ ನಡುರಾತ್ರಿ

ಈಗಷ್ಟೇ ನಡುರಾತ್ರಿ
ಬಿ.ಪಿ. ಸದ್ದುಗಳೆಲ್ಲ
ಒಂದೊಂದಾಗಿ ಅಡಗುತ್ತಿವೆ
ಬ್ರೇನ್ ಹೆಮರೇಜಕ್ಕೆ ಹತ್ತಿರವಿದ್ದ
ಉದ್ಯಮಿಗಳು ಇನ್ನೂ
ಲೆಕ್ಕಾಚಾರದಲ್ಲಿದ್ದಾರೆ

ಇರಲಿ ನಾಳಿನ ಜಗಳಕ್ಕೆಂದು
ಹೊಸಪದಗಳಿಗೆ ಹುಡುಕಾಡುವ
ಬುದ್ದಿ ಜೀವಿಗಳು ನೆತ್ತಿಯೊಳಗೆ ಕಣ್ಣಿಟ್ಟು
ಏನೋ ಸಾಧನೆಗೆ ಉರಿಯುತ್ತ
ಹೊರಳಾಡುತ್ತಿದ್ದಾರೆ.

ಜಾಗತೀಕರಣದ ನೆಪಮಾಡಿ
ಬೇಡವಾದುದೆಲ್ಲ ನಮ್ಮ ಅಂಗಳಕೆ
ಬಂದು ಬೀಳುತ್ತಿವೆಯಲ್ಲ ಎಂದೇ ಹೊರಗೆ
ಭಾಷಣ ಮಾಡಿದವರು
ರಾತ್ರಿ ಇನ್ನೂ ಇಸ್ತ್ರಿ ಮಾಡುತ್ತಿದ್ದಾರೆ

ಮೌಲ್ಯಗಳು ಗಾಳಿಗೆ ತೂರಿ
ಕನಸಿನಂಗಳಕೆ ಚಂದಿರನ ಕರೆದು ನಾಗಾಲೋಟದ ಕುದುರೆ ಏರಿ
ಇದ್ದುದೆಲ್ಲ ಇಲ್ಲದಂತೆ
ಇಲ್ಲದ್ದೆಲ್ಲ ಇದ್ದಂತೆ ಕಾಣುವ ಹದಿಹರೆಯದವರು
ಇನ್ನೂ ಕನವರಿಸುತ್ತಿದ್ದಾರೆ.

ವೇದಿಕೆಯ ಮೇಲೆ
ಮಹಿಳಾವಾದ ಸ್ವಾತಂತ್ರ್ಯ ಸಮಾನತೆ
ಭಾಷಣಮಾಡಿ ಏನೋ ಸಾಧಿಸಿದಂತೆ
ಮನೆಯವರೊಂದಿಗೆ ವಿರೋಧ
ಕಟ್ಟಿಕೊಂಡ ಆಕೆ
ನಾಳೆ ಕೋರ್ಟಿಗೆ
ಯಾವುದಕ್ಕೊ ಅರ್ಜಿಸಲ್ಲಿಸಲು
ಕಣ್ಣೀರು ಚೀರಾಟ ಭರಾಟೆಗಳಲಿ
ಏನೇನೋ ಗೀಚಾಡುತ್ತಿದ್ದಾಳೆ

ಬೆಳಗಾದರೆ ಮತ್ತೆಲ್ಲ
ರಾಕ್ಷಸೀ ಚಟುವಟಿಕೆಗಳು
ಬಿಸಿಲು ಉರಿಬಿಸಿಲು ಬಿಸುಲ್ಗುದುರೆಯ
ಧಗೆ ಇವರುಗಳ ಒಳಹೊರಗೆಲ್ಲ

ರಾತ್ರಿಯೇ ನಿನ್ನ ಕತ್ತಲೆಯ
ಕಪ್ಪು ಹರವು ತೆಕ್ಕೆಯೊಳಗೆ
ಇವರನ್ನೆಲ್ಲಾ ಎಳೆದು ತಬ್ಬಿ
ಸುಮ್ಮನೆ ಮಲಗಿ ಬಿಡಬಾರದೆ
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...