ಅಶಾಂತ ಮನಸ್ಸುಗಳ ನಡುರಾತ್ರಿ

ಈಗಷ್ಟೇ ನಡುರಾತ್ರಿ
ಬಿ.ಪಿ. ಸದ್ದುಗಳೆಲ್ಲ
ಒಂದೊಂದಾಗಿ ಅಡಗುತ್ತಿವೆ
ಬ್ರೇನ್ ಹೆಮರೇಜಕ್ಕೆ ಹತ್ತಿರವಿದ್ದ
ಉದ್ಯಮಿಗಳು ಇನ್ನೂ
ಲೆಕ್ಕಾಚಾರದಲ್ಲಿದ್ದಾರೆ

ಇರಲಿ ನಾಳಿನ ಜಗಳಕ್ಕೆಂದು
ಹೊಸಪದಗಳಿಗೆ ಹುಡುಕಾಡುವ
ಬುದ್ದಿ ಜೀವಿಗಳು ನೆತ್ತಿಯೊಳಗೆ ಕಣ್ಣಿಟ್ಟು
ಏನೋ ಸಾಧನೆಗೆ ಉರಿಯುತ್ತ
ಹೊರಳಾಡುತ್ತಿದ್ದಾರೆ.

ಜಾಗತೀಕರಣದ ನೆಪಮಾಡಿ
ಬೇಡವಾದುದೆಲ್ಲ ನಮ್ಮ ಅಂಗಳಕೆ
ಬಂದು ಬೀಳುತ್ತಿವೆಯಲ್ಲ ಎಂದೇ ಹೊರಗೆ
ಭಾಷಣ ಮಾಡಿದವರು
ರಾತ್ರಿ ಇನ್ನೂ ಇಸ್ತ್ರಿ ಮಾಡುತ್ತಿದ್ದಾರೆ

ಮೌಲ್ಯಗಳು ಗಾಳಿಗೆ ತೂರಿ
ಕನಸಿನಂಗಳಕೆ ಚಂದಿರನ ಕರೆದು ನಾಗಾಲೋಟದ ಕುದುರೆ ಏರಿ
ಇದ್ದುದೆಲ್ಲ ಇಲ್ಲದಂತೆ
ಇಲ್ಲದ್ದೆಲ್ಲ ಇದ್ದಂತೆ ಕಾಣುವ ಹದಿಹರೆಯದವರು
ಇನ್ನೂ ಕನವರಿಸುತ್ತಿದ್ದಾರೆ.

ವೇದಿಕೆಯ ಮೇಲೆ
ಮಹಿಳಾವಾದ ಸ್ವಾತಂತ್ರ್ಯ ಸಮಾನತೆ
ಭಾಷಣಮಾಡಿ ಏನೋ ಸಾಧಿಸಿದಂತೆ
ಮನೆಯವರೊಂದಿಗೆ ವಿರೋಧ
ಕಟ್ಟಿಕೊಂಡ ಆಕೆ
ನಾಳೆ ಕೋರ್ಟಿಗೆ
ಯಾವುದಕ್ಕೊ ಅರ್ಜಿಸಲ್ಲಿಸಲು
ಕಣ್ಣೀರು ಚೀರಾಟ ಭರಾಟೆಗಳಲಿ
ಏನೇನೋ ಗೀಚಾಡುತ್ತಿದ್ದಾಳೆ

ಬೆಳಗಾದರೆ ಮತ್ತೆಲ್ಲ
ರಾಕ್ಷಸೀ ಚಟುವಟಿಕೆಗಳು
ಬಿಸಿಲು ಉರಿಬಿಸಿಲು ಬಿಸುಲ್ಗುದುರೆಯ
ಧಗೆ ಇವರುಗಳ ಒಳಹೊರಗೆಲ್ಲ

ರಾತ್ರಿಯೇ ನಿನ್ನ ಕತ್ತಲೆಯ
ಕಪ್ಪು ಹರವು ತೆಕ್ಕೆಯೊಳಗೆ
ಇವರನ್ನೆಲ್ಲಾ ಎಳೆದು ತಬ್ಬಿ
ಸುಮ್ಮನೆ ಮಲಗಿ ಬಿಡಬಾರದೆ
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪ್ಪಂಗೆ ಬೇಕು ಹೆಂಗ್ಸು; ಮಗಂಗೆ ಬೇಕು ಡ್ರಿಂಕ್ಸು, ಡ್ರಗ್ಸು
Next post ಮರೆಯಲಾರೆ ನಿನ್ನ ನೀರೆ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys