Home / ಕವನ / ಕವಿತೆ / ನಂಬಿಕೆ

ನಂಬಿಕೆ

ತೆನೆ – ೧

ಗಂಟೆಯ ಮುಳ್ಳು ನಿಂತಿದೆ
ನಿಮಿಷದ ಮುಳ್ಳಿಗೋ ಗರಬಡಿದಿದೆ
ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ
ಮೂಗುಬ್ಬಸದಿಂದ ತೆವಳುತಿದೆ
ಸೋರುತ್ತಿದೆ ಗಳಿಗೆ ಬಟ್ಟಲು
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಪಿಸುಗುಟ್ಟುವ ಚಂದಿರ
ಏರಿಸುತ್ತಾನೆ ಅಮಲು !

ಹೊತ್ತಲ್ಲದ ಹೊತ್ತಲ್ಲಿ
ಎದ್ದು ಬಂದಿದ್ದಾನೆ
ನಿದ್ದೆಗಣ್ಣಿನಲ್ಲೇ ಚಂದಿರ
ಹಾಡು ಮುಗಿಯುತ್ತದೆ
ಜಾವ ಹೊರಳುತ್ತದೆ
ಗಡಿಯಾರ ನಿಂತರೇನು
ಕಾಲ ಸರಿಯುತ್ತದೆ
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಗೊಣಗುತ್ತಲೇ ಮೂಡಿಸುತ್ತಾನೆ ದಿಗಿಲು!

ತೆನೆ-೨
ಒಳಗಿದ್ದದೂ ಹೊರಗುಳಿಯುವ
ಹಠಕ್ಕೆ ಬಿದ್ದು
ಎಲ್ಲಾ ಒದ್ದು
ಬೆಳಕಿಗೇ ಬೆನ್ನು ತಿರುಗಿಸಿ
ಆಕಾಶಕ್ಕೆ ಏಣಿ ಒರಗಿಸಿ
ಎತ್ತರಕ್ಕೇರಿ ಕುಳಿತ ಚಂದಿರನಿಗೆ
ಆಳಗಳು ಆರ್ಥವಾಗುವುದೆಲ್ಲಿ ?

ಹೊಸತಿಗೆ ತೆರೆದುಕೊಳ್ಳುವುದೇನೂ
ಕಷ್ಟವಲ್ಲ
ಬಾಗಿಲು ತೆರೆದುಬಿಡಬಹುದು
ಬೇಕೆನಿಸಿದ ಹೊಸತನ್ನೆಲ್ಲಾ
ಒಳಗೆ ಕರೆದುಬಿಡಬಹುದು
ಎದೆ ನೋವು ನದಿಯಾಗಿ ಹರಿದು
ಎಲ್ಲಾ ಕೊಚ್ಚಿ ಹೋಗುವ ಮೊದಲು
ಕಾಲನ ತಡೆದುಬಿಡಬಹುದು
ಆದರೆ…
ತೆರೆದ ಬಾಗಿಲಿನೊಂದಿಗೇ
ಧೂಳು ಕಸಕಡ್ಡಿಗಳೂ ಬಂದೆರಗಿದರೆ
ಹೇಗೆ ತಡೆಯುವುದು?
ಎಂದೆಲ್ಲಾ ಗೊಂದಲ!

ಆ ಮನವ
ಬೊಗಸೆಯಲಿ ಹಿಡಿದ ಚಂದಿರ
ಕಣ್ಣುಗಳ ಕೂಡಿಸಿ
ನೂರು ಮುತ್ತುಗಳ
ಪ್ರಮಾಣದ ಭರವಸೆಯನ್ನೊತ್ತಿ
ಹೊಸತೆಲ್ಲವೂ ಒಳಿತೆಂದು ಒಪ್ಪಿಸಿದ್ದಾನೆ
ಬಾಗಿಲು ತೆರೆಸಿದ್ದಾನೆ
ಹೊಸ ಬೆಳಕಿಗೆ ಕಣ್ಣು ಮೂಡಿಸಿದ್ದಾನೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...