Home / ಕವನ / ಕವಿತೆ / ನಂಬಿಕೆ

ನಂಬಿಕೆ

ತೆನೆ – ೧

ಗಂಟೆಯ ಮುಳ್ಳು ನಿಂತಿದೆ
ನಿಮಿಷದ ಮುಳ್ಳಿಗೋ ಗರಬಡಿದಿದೆ
ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ
ಮೂಗುಬ್ಬಸದಿಂದ ತೆವಳುತಿದೆ
ಸೋರುತ್ತಿದೆ ಗಳಿಗೆ ಬಟ್ಟಲು
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಪಿಸುಗುಟ್ಟುವ ಚಂದಿರ
ಏರಿಸುತ್ತಾನೆ ಅಮಲು !

ಹೊತ್ತಲ್ಲದ ಹೊತ್ತಲ್ಲಿ
ಎದ್ದು ಬಂದಿದ್ದಾನೆ
ನಿದ್ದೆಗಣ್ಣಿನಲ್ಲೇ ಚಂದಿರ
ಹಾಡು ಮುಗಿಯುತ್ತದೆ
ಜಾವ ಹೊರಳುತ್ತದೆ
ಗಡಿಯಾರ ನಿಂತರೇನು
ಕಾಲ ಸರಿಯುತ್ತದೆ
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಗೊಣಗುತ್ತಲೇ ಮೂಡಿಸುತ್ತಾನೆ ದಿಗಿಲು!

ತೆನೆ-೨
ಒಳಗಿದ್ದದೂ ಹೊರಗುಳಿಯುವ
ಹಠಕ್ಕೆ ಬಿದ್ದು
ಎಲ್ಲಾ ಒದ್ದು
ಬೆಳಕಿಗೇ ಬೆನ್ನು ತಿರುಗಿಸಿ
ಆಕಾಶಕ್ಕೆ ಏಣಿ ಒರಗಿಸಿ
ಎತ್ತರಕ್ಕೇರಿ ಕುಳಿತ ಚಂದಿರನಿಗೆ
ಆಳಗಳು ಆರ್ಥವಾಗುವುದೆಲ್ಲಿ ?

ಹೊಸತಿಗೆ ತೆರೆದುಕೊಳ್ಳುವುದೇನೂ
ಕಷ್ಟವಲ್ಲ
ಬಾಗಿಲು ತೆರೆದುಬಿಡಬಹುದು
ಬೇಕೆನಿಸಿದ ಹೊಸತನ್ನೆಲ್ಲಾ
ಒಳಗೆ ಕರೆದುಬಿಡಬಹುದು
ಎದೆ ನೋವು ನದಿಯಾಗಿ ಹರಿದು
ಎಲ್ಲಾ ಕೊಚ್ಚಿ ಹೋಗುವ ಮೊದಲು
ಕಾಲನ ತಡೆದುಬಿಡಬಹುದು
ಆದರೆ…
ತೆರೆದ ಬಾಗಿಲಿನೊಂದಿಗೇ
ಧೂಳು ಕಸಕಡ್ಡಿಗಳೂ ಬಂದೆರಗಿದರೆ
ಹೇಗೆ ತಡೆಯುವುದು?
ಎಂದೆಲ್ಲಾ ಗೊಂದಲ!

ಆ ಮನವ
ಬೊಗಸೆಯಲಿ ಹಿಡಿದ ಚಂದಿರ
ಕಣ್ಣುಗಳ ಕೂಡಿಸಿ
ನೂರು ಮುತ್ತುಗಳ
ಪ್ರಮಾಣದ ಭರವಸೆಯನ್ನೊತ್ತಿ
ಹೊಸತೆಲ್ಲವೂ ಒಳಿತೆಂದು ಒಪ್ಪಿಸಿದ್ದಾನೆ
ಬಾಗಿಲು ತೆರೆಸಿದ್ದಾನೆ
ಹೊಸ ಬೆಳಕಿಗೆ ಕಣ್ಣು ಮೂಡಿಸಿದ್ದಾನೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...