Home / ಕವನ / ಕವಿತೆ / ನಂಬಿಕೆ

ನಂಬಿಕೆ

ತೆನೆ – ೧

ಗಂಟೆಯ ಮುಳ್ಳು ನಿಂತಿದೆ
ನಿಮಿಷದ ಮುಳ್ಳಿಗೋ ಗರಬಡಿದಿದೆ
ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ
ಮೂಗುಬ್ಬಸದಿಂದ ತೆವಳುತಿದೆ
ಸೋರುತ್ತಿದೆ ಗಳಿಗೆ ಬಟ್ಟಲು
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಪಿಸುಗುಟ್ಟುವ ಚಂದಿರ
ಏರಿಸುತ್ತಾನೆ ಅಮಲು !

ಹೊತ್ತಲ್ಲದ ಹೊತ್ತಲ್ಲಿ
ಎದ್ದು ಬಂದಿದ್ದಾನೆ
ನಿದ್ದೆಗಣ್ಣಿನಲ್ಲೇ ಚಂದಿರ
ಹಾಡು ಮುಗಿಯುತ್ತದೆ
ಜಾವ ಹೊರಳುತ್ತದೆ
ಗಡಿಯಾರ ನಿಂತರೇನು
ಕಾಲ ಸರಿಯುತ್ತದೆ
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಗೊಣಗುತ್ತಲೇ ಮೂಡಿಸುತ್ತಾನೆ ದಿಗಿಲು!

ತೆನೆ-೨
ಒಳಗಿದ್ದದೂ ಹೊರಗುಳಿಯುವ
ಹಠಕ್ಕೆ ಬಿದ್ದು
ಎಲ್ಲಾ ಒದ್ದು
ಬೆಳಕಿಗೇ ಬೆನ್ನು ತಿರುಗಿಸಿ
ಆಕಾಶಕ್ಕೆ ಏಣಿ ಒರಗಿಸಿ
ಎತ್ತರಕ್ಕೇರಿ ಕುಳಿತ ಚಂದಿರನಿಗೆ
ಆಳಗಳು ಆರ್ಥವಾಗುವುದೆಲ್ಲಿ ?

ಹೊಸತಿಗೆ ತೆರೆದುಕೊಳ್ಳುವುದೇನೂ
ಕಷ್ಟವಲ್ಲ
ಬಾಗಿಲು ತೆರೆದುಬಿಡಬಹುದು
ಬೇಕೆನಿಸಿದ ಹೊಸತನ್ನೆಲ್ಲಾ
ಒಳಗೆ ಕರೆದುಬಿಡಬಹುದು
ಎದೆ ನೋವು ನದಿಯಾಗಿ ಹರಿದು
ಎಲ್ಲಾ ಕೊಚ್ಚಿ ಹೋಗುವ ಮೊದಲು
ಕಾಲನ ತಡೆದುಬಿಡಬಹುದು
ಆದರೆ…
ತೆರೆದ ಬಾಗಿಲಿನೊಂದಿಗೇ
ಧೂಳು ಕಸಕಡ್ಡಿಗಳೂ ಬಂದೆರಗಿದರೆ
ಹೇಗೆ ತಡೆಯುವುದು?
ಎಂದೆಲ್ಲಾ ಗೊಂದಲ!

ಆ ಮನವ
ಬೊಗಸೆಯಲಿ ಹಿಡಿದ ಚಂದಿರ
ಕಣ್ಣುಗಳ ಕೂಡಿಸಿ
ನೂರು ಮುತ್ತುಗಳ
ಪ್ರಮಾಣದ ಭರವಸೆಯನ್ನೊತ್ತಿ
ಹೊಸತೆಲ್ಲವೂ ಒಳಿತೆಂದು ಒಪ್ಪಿಸಿದ್ದಾನೆ
ಬಾಗಿಲು ತೆರೆಸಿದ್ದಾನೆ
ಹೊಸ ಬೆಳಕಿಗೆ ಕಣ್ಣು ಮೂಡಿಸಿದ್ದಾನೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...