Home / ಕವನ / ಕೋಲಾಟ / ಪರಮೇಶ್ವರಗೆ ವಲವಾದೋ (ಕೋಲಾಟ)

ಪರಮೇಶ್ವರಗೆ ವಲವಾದೋ (ಕೋಲಾಟ)

ಶಿವನೇ ನೆನೆಯೋ ಶಿವನೇ ನೆನೆಯೋ
ಈ ಊರಾ ರಾಮದೇವರ ನೆನೆಯೋ
ಈ ಊರ ಹಿತ ಕಾಯೋರ ನೆನೆಯೋ
ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ
ತೇರೋ ತೇರೋ ಹೂವಿನ ತೇರೋ || ೧ ||

ಬಾಗಿಲಲೆ ಬಲಿಯಾರಿ ದಂಡು
ಮೇನೆ ಗುರಗುಂಜೀ ಶೆಂಡೂ
ನಾರೀ ಬಂದಾನೇ ನಲ್ಲಾ ಬಾಗಿಲ ಮುಂದೇ
ತಾನ ನಾನಾ ತಂದಾನೋ ತಾನೀನೋ ತಾನಾ || ೨ ||

ಕಾಲಿಗೆ ಕಿರುಗೆಜ್ಜೆ ಕಟ್ಟೀ ಹೂವಿನಂತಾ ತೇರಕಟ್ಟಿ
ಜನಾಮ್ನೆ ಶ್ವಾಮಿ ಭೂಮಿಗ್ವೊಂದ ನೆನೆಯೋ
ಶಿವನೇ ನಿನಗ್ಯಾತರ ಗಂದನೋ || ೩ ||

ಊರ ಶುತ್ತೇಲಿ ಮುತ್ತೇಯೋ
ಪರುವತ ದೊಡ್ಡಾ ಗುಡ್ಡೆ ಹೋ
ಗುಡ್ಡೆ ವಂದು ತಲಿಯಾ ಮ್ಯಾಲಿನ್ನೇ
ನಾಕ ಮೂಲೆ ಕಾಕಾದಾ ಕೆರೆಯೋಲೇ || ೪ ||

ಕೆರವಲಗೆ ನೀರಿನಾ ಮಘನಾನೋ
ಆವಾ ನೀರಿನೋ ಳಗೆ ಯಾತರ ಮುಗುಲಂದೋ
ನೆಲ್ಲೀದೊಂದು ತಾಂಬಾರ ಹುಟ್ಟೀಲೇ || ೫ ||

ಅವಾ ಹೂಗಿಗೊಂದ್ ಯಾತರ ಕದುರಾದೋ
ತಾಂಬಕೊಲ್ಲಿದು ನೆಲ್ಲಿಯು ಹುಟ್ಟೇಗೆ
ಯಾವದೊಂದು ತಾಂಬಾರ ಹುಟ್ಟೀಲೇ
ಅವಾ ಹುಟ್ಟಿಗೆ ಯಂತಾ ಯೆಶುಲಾದೋ || ೬ ||

ಯಂಟೂ ದಿಕ್ಕೇ ಯಂಟೇಲೆಯೇ
ನೆಡುಗೊಂದು ಶಿನ್ನಾದಾ ಕದುರಾಗೋ
ಅವಾ ಕದ್ರು ಯರೀಸಿ ವಲುಪ್ಯಾದೋ
ಪರಮತ ಪರಮೇಸ್ರಗೆ ವಲುವಾದೋ || ೭ ||
*****
ಹೇಳಿದವರು : ಕುಪ್ಪು ಮಾರು ಗೌಡ, ಕೂಜಳ್ಳಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...