Home / ಕಥೆ / ಕಾದಂಬರಿ / ಸುಭದ್ರೆ – ೧೮

ಸುಭದ್ರೆ – ೧೮

ಮಾಧವನು ಮುಖ್ಯ ವೈದ್ಯನೊಡನೆ ರೋಗಿಗಳಿರುವ ಸ್ಥಳಕ್ಕೆ ಹೋದನು. ಸುಬದ್ರೆಯು ಮಲಗಿದ್ದ ಕೊಠಡಿಯಬಳಿಗೆ ಬರುತ್ತಲೆ, ವೈದ್ಯನು ಮಾಧವನನ್ನು ಸ್ಕಲ್ತ. ಹೊತ್ತು ಮರೆಯಾಗಿರ ಹೇಳಿ ತಾನೊಬ್ಬನೆ ಒಳಗೆ ಹೋದನು. ಆಗ ಸುಭದ್ರೆಯು ಸಂಪೂ ರ್ಣವಾಗಿ ವಿಕಾಸವಾದ ಕಣ್ಣುಗಳಿಂದ ಮೇಲ್ಚಾವಣಿಯನ್ನು ನೋ ಡುತ್ತಾ ಮಲಗಿದ್ದಳು. ವೈದ್ಯನು “ಸುಭದ್ರಾಬಾಯಿ! ” ಎನ್ನುತ್ತಲೆ ಗಕ್ಕನೆ ತಿರುಗಿ ನೋಡಿದಳು. ಅಯ್ಯೊ! ನೀವೇ? ಅವರು ಬಂದರೇನೋ ಎಂದಿದ್ದೆ.“ ಎಂದು ತನ್ನಷ್ಟಕ್ಕೆ ತಾನೆ ಹೇಳಿಕೊಂಡಳು.

ವೈದ್ಯ– “ಅವರು ಎಂದರೆ ಯಾರು“

ಸುಭದ್ರೆ_-ಇನ್ನಾ ರು? ನನ್ನ ಕಣ್ಣೆದುರಿಗೆ ಇದುವರೆಗೂ ನಿಂತಿದ್ದವರು.

ವೈದ್ಯ_-ಅವರಾರು?

ಸುಭದ್ರೆ– ನಾನು ಹೇಗೆ ಹೇಳಲಿ?

ವೈದ್ಯ-ನಿಮ್ಮ ಭರ್ತನೆ ?

ಸುಭದ್ರೆ ಸುಮ್ಮನಿದ್ದಳು.

ವೈದ್ಯ – ಅವರ ಹೆಸರೇನು ?

ಸುಭದ್ರೆ–ಹೇಗೆ ಹೇಳಲಿ ?

ವೈದ್ಯ—ನಾನು ಹೇಳುತ್ತೇನೆ ಕೇಳಿ, “ಮಾಧವರಾಯರು. “?

ಸುಭದ್ರೆ- ಆಶ್ಚರ್ಯದಿಂದ) ನಿಮಗೆ ಯಾರುಹೇಳಿದರು?

ವೈದ್ಯನು —(ತನ್ನಷ್ಟಕ್ಕೆ ತಾನೆ) “ಇದುವರೆಗೂ ಕಾಣದ ನಗುವು ಈಗ ತೋರಿಬರುತ್ತಿದೆ. . ನಾನು. ಇಷ್ಟನ್ನು ಕಂಡು ಹಿಡಿಯಲಾರದೆ ಹೋದೆನಲ್ಲಾ –ಎಂತಹ ಮೂಢ!“ ಎಂದಂದುಕೊಂಡು. ಸುಭದ್ರೆಯ ಪ್ರಶ್ಕೆ ಗೆ ಉತ್ತರವಾಗಿ “ಅವರೇ” ಎಂದನು.

ಸುಭದ್ರೆ—ಅವರನ್ನೆಲ್ಲಿ ನೋಡಿದ್ದಿರಿ! “

ವೈದ್ಗ — ಇಲ್ಲಿಯೇ !

ಸುಭದ್ರೆ-ಅವರೇತಕ್ಕೆ ಇಲ್ಲಿಗೆ ಬರುವರು ? ಕುಚೋದ್ಯ ಮಾಡುತ್ತೀರಾ?

ವೈದ್ಯ—ಈಗ ಮಾಯಾಮಂತ್ರಮಾಡಿ ಅವರನ್ನು ನಿಮ್ಮೆ ದು ರಿಗೆ ಬರುವಂತೆಮಾಡಲೆ!

ಸುಭದ್ರೆ -ಎಲ್ಲಿ ನೋಡೋಣ

ವೈದ್ಯ —ನೀವು ಎದ್ದು ಕೂತುಕೊಳ್ಳಿ….ಸರಿ.. ಹಾಗೆ…. ಕಣ್ಣುಮುಚ್ಚಿಕೊಳ್ಳಿ ಈಗ ನಾನು ಮಂತ್ರಮಾಡುತ್ತೇನೆ. ಒಂದು, ಎರಡು, ಮೂರು,ಎಂದಕೂಡಲೆ ಕಣ್ಣುಬಿಡಬೇಕು ಅದಕ್ಕೆ ಮುಂಚೆ ಬಿಟ್ಟರೆ ಎಲ್ಲವೂ ಮಾಯವಾಗುವುದು.

ಸುಭದ್ರೆ_ಇದೇನೋ ಬ್ರಾಹ್ಮಣಿತಿಯು ಗಂಡನಿಗೆ ವಡೆ ಮಾಡಿಕೊಟ್ಟ ಕಥೆಯಂತಿದೆ.

ವೈದ್ಗ–ಒಂದು ಸಾರಿ ನನ್ನನ್ನು ಪರೀಕ್ಷೆ ಮಾಡಿ ನೋಡಿದರೆ ನನ್ನ ಮಂತ್ರದ ಮಹಿಮೆಯು ಗೊತ್ತಾಗುವುದು.

ಸುಭದ್ರೆಯುಎದ್ದು ದಿಂಬನ್ನೊರಗಿಳಕೊಂಡು ಕುಳಿತಳು, ಎರಡು ಕೈಗ ಳಿಂದಲೂಕಣ್ಣು ಗಳನ್ನು ಮುಚ್ಛಿ ಕೊಂಡಳು. ವೈದ್ಯನು, “ಹುಂ ! ಮಹಂಕಾಳಿ ! ಚಂಡಿ! ಚಾಮುಂಡಿ ” ಹ್ರೀಂ, ಹ್ರೂಂ, ಪಟಪಟ ಝುಂಕಾರಧ್ವನಿಭೈರವಿ, ನನ್ನ ಇಷ್ಠಾರ್ತವನ್ನು ನೆರವೇರಿಸು“ ಎಂದು, ಸುಭದ್ರೆಯನ್ನು ಕುರಿತು “ಸುಭದ್ರಾಬಾಯಿ! ಒಂದು, ಎರಡು, ಮೂರು. ಎಂದು ಚಿಟಿಕಿಯನ್ನು ಹೊಡೆದನು. ಸುಭದ್ರೆಯು ಕಣ್ದೆ ರೆಯಲಾಗಿ ತನ್ನ ಪ್ರಾಣಸ್ಕ್ರರೂಪನಾದವನೆ ಸ್ವಯಂ ನಿಂತಿದ್ದನು. ಸುಭದ್ರೆಯು ತನ್ನ ಕಣ್ಣನ್ನೆ ತಾನು ನಂಬಲಾರದೆ ಹೋದಳು. ಹಾಗೆಯೆ ಪತಿಯ ಬಾಹುಗಳು ಸ್ಪರ್ಶವಾದುದರಿಂದ ಕನಸಲ್ಲವೆಂದೂ ವ್ಯಕ್ತವಾ ಯಿತು. ದಂಪತಿಗಳಿಬ್ಬರೂ ಆನಂದಾತಿಶಯದಿಂದ ಅವಾಕಕ್ಕಾದರು. ಸುಭದ್ರೆಯು ಆಹಾರನಿದ್ರೆಗಳಿಲ್ಲದೆ ಬಹಳ ಬಡವಾಗಿದ್ದರೂ ಅವಳ ಸೌಂ ದರ್ಯವು ಸ್ನಲ್ಲವೂ ಕಡಿಮೆಯಾಗಿರಲಿಲ್ಲ. ತಲೆಯನ್ನು ಬಾಚಿಕೊಂಡು ಏಷ್ಲೋ ದಿನಗಳಾಗಿ ಹೋಗಿದ್ದುವು. ಹಳೆಯದಾದ ಮಾಸಲು ಬಣ್ಣದ ಸೀರೆಯನ್ನುಟ್ಟಿದ್ದಳು. ಆಭರಣದ, ಸೊಲ್ಲೇ ಇಲ್ಲ. ಹೀಗಿದ್ದ ರೂ ಆ ವಿಶಾಲವಾದ ಕಾಂತಿಯುಳ್ತವಾದ ನೇತ್ರದ್ವೆಯವೂ, ಶುಭ್ರ ವಾದ ದಂತ ಪಂಕ್ತಿಯೂ, ವಿಶಾಲವಾದ ಹಣೆಯೂ, ನಸುನೀಟ ವಾದ ಮೂಗೂ, ಮೇಲಾಗಿ, ಸ್ಕ್ರರ್ಣಕಾಂತಿಗೆ, ಸಮವಾದ ಶರೀರ ಕಾಂತಿಯೂ ಎಂತಹ ವಿರಕ್ತನನ್ನಾ ದರೂ ಮರುಳುಮಾಡುವಂತಿ ದ್ದುವು. ಮಾಧವನ್ನು ತಾನೇ ಧನ್ಯನೆಂದುಕೊಂಡನ್ನು ವೈದ್ಯನು “ನಾನೆಲ್ಲಿಯೂ ಇಂತಹ ಯುಗ್ಮವನ್ನು ನೋಡಲಿಲ್ಲ“ ಎಂದಂದು ಕೊಂಡು, ಮಾಧವನನ್ನು ಕುರಿತು , “ರಾಯರೆ ! ನಾನು ಇನ್ನು ಸ್ವಲ್ಪ ಹೊತ್ತು ಬಿಟ್ಟುಕೊಂಡು ಬರುತ್ತೇನೆ. ಇಲ್ಲಿಯೇ ಇರೋಣಾ ಗಲಿ“ ಎಂದು ಹೇಳಿ ಹೋದನು .

ಸುಭದ್ರೆಯೂ ಮಾಧನನೂ ಏನೇನುಮಾತಾಡು ತ್ತಿದ್ದ ರೋ ನಾವರಿಯಿವು. ಸುಭದ್ರೆಯು ತನ್ನ ಕಷ್ಟಗಳನ್ನೆಲ್ಲಾ ಹೀಳಿಕೊಂಡಿರಬ ಹುದು. ಮಾಧವನೂ ತಾನು ಪಂಡರಾಪುರವನ್ನು ಬಿಟ್ಟು ಹೊರಟ ಮೇಲೆ ನಡೆದು ದೆಲ್ಲನನ್ನೂ ತಿಳಿಸಿರಬಹುದು. ಸ್ವಲ್ಪ ಹೊತ್ತು ಕಳೆದ ಅನಂತರ ಗಂಗಾಬಾಯಿ, ಶಂಕರರಾಯ, ನವಾಬ, ಈ ಮೂರು ಜನವೂ ಆಸ್ಪತ್ರೆಗೆ ಬಂದು ದಂಪತಿಗಳದುರಿಗೆ ನಿಂತರು. ಅವರನ್ನು ವೈದ್ಯನು ಕರೆಯಕಳುಹಿಸಿದ್ದನು. ಸುಭದ್ರೆಗೆ ಅವರನ್ನು ಕಂಡೊಡನೆಯೆ ಎಲ್ಲಿಂದ ಲೋ ಹೊಸ ಶಕ್ತಿಯುಂಟಾಯಿತು.. ಸರಾಗವಾ[\, ಎದ್ದುಕೂರಲಾರದವಳು ಮಂಚದಿಂದ ಕೆಳಗೆ ಜಗ್ಗನೆ ಇಳಿದು ಮೊದಲುಶಂಕರರಾಯ ನಿಗೂ, ಅನಂತರ ಗಂಗಾಬಾಯಿಗೂ ನಮಸ್ಥಾ ರ ಮಾಡಿದಳು. ಇದ ನ್ನೆ ಲ್ಲಾ ನೋಡುತ್ತಿದ್ದ ವೈದ್ಯನಿಗೆ ಪರಮಾಶ್ಚರ್ಯವುಂಟಾಯಿತು. “ಮನಸ್ಸಿನ ಶಕ್ತಿಯ ಮುಂದೆ ಔಷಧದ ಶಕ್ತಿ ಎಷ್ಟರದು?“ ಎಂದನು. ಶಂಕರರಾಯನು ಸುಭದ್ರೆಯ ರೂಪಲಾವಣ್ಯವನ್ನು ನೋಡಿ ಮುಗ್ಧ ನಾದನು. “ಮನೆಗೆ ಮಹಾಲಕ್ಸ್ಮೀ ಸ್ವರೂಪಳಾದವಳ ಮೇಲೆ ನಿಷ್ಕಾ ರಣವಾಗಿ ದ್ವೇಷಮಾಡಿ ಅಮೃತವನ್ನು ವಿಷಮಾಡಿಕೊಂಡಿ ದದೆನಲ್ಲಾ ! ಭಗವಂತನ . ಕರುಣೆಯು ಅಪರಿಮಿತವಾದುದು“ ಎಂದಂದುಕೊಂಡನು.

ಮುಖ್ಯವೈದ್ಗನು ಆಸ್ಪತ್ರೆಯಿಂದ ಸುಭದ್ರೆಯನ್ನು ಕರೆದು ಕೊಂಡು ಹೋಗಬಹುದಿಂದೂ, ಅಳೆಗೆ ಸ್ವಲ್ಪ ಸರಿಯಾದ ಆಹಾರ, ವಿಶ್ರಾಂತಿಗಳನ್ನು ಕೊಟ್ಟರೆ ಒಂದು ವಾರದೊಳಗೆ ಸಂಪೂರ್ಣವಾಗಿ ಗುಣವಾಗುವುದೆಂದೂ ಹೇಳಿದನು, ಅದರಂತೆಯೆ ಸುಭದ್ರೆಯನ್ನು ಕರದುಕೊಂಡುಹೋದರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...