ಸಂಜೆಯ ಹಾಡು

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ;
ಖಗ ಹಾರಿತು ಗೂಡಿನ ಒಳಗೆ;
ಜಗವೆಲ್ಲಾ ಬೆಳಗಿತು ದೀಪವು ಬೆಳಗೆ,
ಗಗನಾಂಗಣದಲ್ಲಿ ಉಡು ತೊಳಗೆ;
ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ;
ಹೊಗುತಿರುವುದು ಕತ್ತಲೆ ಇಳೆಗೆ.

ಓ-ಮಗುವೇ, ನೀ ಸಂಜೆಯ ಗಳಿಗೆಯಲಿ
ನಗುತಲಿ ಬಾ ನನ್ನಯ ಬಳಿಗೆ; ಕೈ
ಮುಗಿಯುತ ದೇವರ ಪದಗಳಿಗೆ, ಈ
ಹಗಲಲ್ಲಿ ನಿನ್ನನ್ನು ಕಾಯ್ದಾ ದೇವರಿಗೆ,
ಮಿಗೆ ವಂದಿಸು ಸಂತಸದಿಂದಾ.

ವದನಾ ಭೂಷಣವೇ ನೀರಿನ ಕೆರೆಯು
ಘನ ಸರಸಿಗೆ ಕೆಂದಾವರೆಯು;
ವನಿತಾಲಂಕಾರವೆ ಸುಗುಣದ ಸಿರಿಯು;
ಜನರಾಷ್ಟ್ರಕೆ ಧರ್ಮದ ದೊರೆಯು;
ಮನುಜನಿಗಾಭರಣವೆ ವಿದ್ಯೆಯ ಪರಿಯು;
ಮನೆಗಾ ಚೆಲು ಮಕ್ಕಳು ಮರಿಯು.

ಹಾ, ತನಯಾ, ಸಜ್ಜನರೊಡವೆರೆಯು; ದು-
ರ್‍ಜನ ಸಂಗವ ಬೇಗನೆ ತೊರೆಯು; ವಂ-
ಚನೆ ಮರೆಮೋಸಗಳನ್ನು ಮರೆಯು; ನೀ-
ನೆನೆಯದಿರೈ ಕೆಡುಕನು ಲೋಕದ ಜನಕೆ;
ಜನದೂಷಣೆ ಬಿಡಬೇಕೆಂದಾ.

ಇರಬೇಕೈ ಮಕ್ಕಳ ಚೆಲುಮನೆತನವು;
ಸರಿ ಹಾಲನು ಕರೆವಾ ದನವು;
ಬರಬೇಕೈ ತನ್ನಯ ಬೆವರಿನ ಧನವು;
ಭರದಾಪತ್ಕಾಲಕೆ ಜನವು;
ಹೊರಬೇಕೈ ಕಷ್ಟವ ಸಹಿಸುವ ತನುವು;
ಪರದುಃಖಕ ಕೂಗುವ ಮನವು.

ಶ್ರೀ ಗುರುಹಿರಿಯರ ನೀನನುದಿನವು ತಾಂ
ಪರಿಪೂಜಿಪಗುಣ ಲಾಂಛನವು; ಇದು
ದೊರೆಕೊಂಬುದ ಜನಕೆ ಘನವು; ಸೋ
ದರರೆಂಬಾ ಭಾವನೆ ಸರ್‍ವರೊಳಿರಿಸು;
ಭರತಾತ್ಮಜನೆನ್ನಿಸು ಕಂದಾ.

ಕೊಡಬೇಕೈ ಕಿವಿಯನು ಸರ್‍ವರ ನುಡಿಗೆ;
ನುಡಿಬಾರದು ನೀನಡಿಗಡಿಗೆ;
ಉಡಬೇಕೈ ಪದವಿಗೆ ಸರಿಯಾದುಡಿಗೆ;
ತೊಡಬಾರದು ಅನ್ಯರ ತೊಡಿಗೆ;
ಬಿಡಬೇಕೈ ಹಣವನು ಧರ್‍ಮದ ಕುಡಿಗೆ,
ಬಡವಾಗಿರದಂದದಿ ಕಡೆಗೆ.

ನೀ ಪೊಡಮಡು ಗುರುಹಿರಿಯರ ಅಡಿಗೆ; ನೀ
ನಿಡು ಸತ್ಯವ ಕಾರ್‍ಯಗಳೆಡೆಗೆ; ನೀ
ನಡೆವೈ ಸಂಪತ್ತಿನ ತಡಿಗೆ; ಈ
ಮುಡಿಹೂಗಳ್ ಬಾಡದ ಸದ್ವಿಧದಿಂದಾ
ಬಡಕೂಸನು ಸಲಹೋ, ಮುಕುಂದಾ.
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋರಿನಾಳದಿಂದೆಂತೆತ್ತುವುದೋ ಕೃಷಿಯನ್ನು?
Next post ಪದ ಜನಪದ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…